ವಾಹನಕ್ಕೆ ಸೈಡ್ ಕೊಡುವ ಹೆಸರಲ್ಲಿ ವಾಗ್ವಾದ: ಕಾರಿಗೆ ಹಾನಿ

ಕಾಸರಗೋಡು:   ಸೈಡ್ ಕೊಡುವ ಹೆಸರಲ್ಲಿ ಪಿಕಪ್ ವಾಹನ ಮತ್ತು ಕಾರು ಚಾಲಕ ಮಧ್ಯೆ  ವಾಗ್ವಾದ ನಡೆದು ಅದರ ಹೆಸರಲ್ಲಿ  ಕಾರಿನ ಗಾಜು ಒಡೆದು ಹಾನಿಗೊಳಿ ಸಿದ ಬಗ್ಗೆ ಕಾಸರಗೋಡು ಪೊಲೀ ಸರಿಗೆ ದೂರು ನೀಡಲಾಗಿದೆ. ವಿದ್ಯಾ ನಗರ ಬೆದಿರ ನಿವಾಸಿ ಅಹಮ್ಮದ್ ಸಿಯಾದ್ (೨೧) ಎಂಬಾತ ಈ ಬಗ್ಗೆ ದೂರು ನೀಡಿದ್ದು, ಅದರಂತೆ ೫ ಮಂದಿಯ ವಿರುದ್ಧ ಕಾಸರ ಗೋಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಡ್ಕತ್ತಬೈಲ್ ನಲ್ಲಿ ನಿನ್ನೆ ಬೆಳಿಗ್ಗೆ ಘಟನೆ ನಡೆದಿದೆ. 

Leave a Reply

Your email address will not be published. Required fields are marked *

You cannot copy content of this page