ವಿಶ್ವ ಪರಿಸರ ದಿನಾಚರಣೆಯಂಗವಾಗಿ ರಾಜ್ ಭವನದಲ್ಲಿ ಭಾರತಾಂಬೆಯ ಫೋಟೋ ಇರಿಸಿ ಪುಷ್ಚಾರ್ಚನೆ; ಸಮಾರಂಭ ಬಹಿಷ್ಕರಿಸಿದ ಕೃಷಿ ಸಚಿವ, ವಿವಾದಕ್ಕೆ ನಾಂದಿ
ತಿರುವನಂತಪುರ: ವಿಶ್ವ ಪರಿಸರ ದಿನಾಚರಣೆ ದಿನವಾದ ನಿನ್ನೆ ಕೃಷಿ ಇಲಾಖೆಯ ಆಶ್ರಯದಲ್ಲಿ ರಾಜ್ಭವನದಲ್ಲಿ ಆಯೋಜಿಸಿದ ಸರಕಾರಿ ಕಾರ್ಯಕ್ರಮದಲ್ಲಿ ಭಾರತಾಂಬೆಯ ಫೋಟೋ ಇರಿಸಿ ಅದಕ್ಕೆ ಪುಷ್ಪಾರ್ಚನೆ ನಡೆಸುವುದನ್ನು ಪ್ರತಿಭಟಿಸಿ ಕೃಷಿ ಸಚಿವ ಪಿ. ಪ್ರಸಾದ್ ಆ ಕಾರ್ಯಕ್ರಮವನ್ನು ಬಹಿಷ್ಕರಿಸಿ ಹೊರ ನಡೆದ ಬೆಳವಣಿಗೆ ನಡೆದಿದೆ.
ಸಮಾರಂಭದಲ್ಲಿ ಭಾರತಾಂಬೆಯ ಪೋಟೋ ಇರಿಸಿದ್ದುದನ್ನು ತೆರವುಗೊಳಿಸುವಂತೆ ಕೃಷಿ ಸಚಿವರು ಆಗ್ರಹಿಸಿದ್ದರು. ಆದರೆ ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಅದನ್ನು ನಿರಾಕರಿಸಿದಾಗ ಅದನ್ನು ಪ್ರತಿಭಟಿಸಿ ಕೃಷಿ ಸಚಿವರು ಆ ಸಮಾರಂಭವನ್ನು ಬಹಿಷ್ಕರಿಸಿ ಹೊರ ನಡೆದರು. ಸಚಿವರು ಕಾರ್ಯಕ್ರಮವನ್ನು ಬಹಿಷ್ಕರಿ ಸಿರುವುದರಿಂದಾಗಿ ರಾಜ್ಯಪಾಲರು ಭಾರತಾಂಬೆಯ ಫೋಟೋಗೆ ಪುಷ್ಪಾರ್ಚನೆ ನಡೆಸಿ ಸ್ವಂತ ನೆಲೆಯಲ್ಲೇ ಮುಂದುವರಿಸಿದರು. ಮಾತ್ರವಲ್ಲ ಕಾರ್ಯಕ್ರಮವನ್ನು ಬಹಿಷ್ಕರಿಸಿದ ಕೃಷಿ ಸಚಿವರ ನಿಲುವನ್ನು ಅವರು ತೀವ್ರವಾಗಿ ಟೀಕಿಸಿದರು. ಕೃಷಿ ಇಲಾಖೆಯ ವತಿಯಿಂದ ಆಯೋಜಿಸಲಾಗಿರುವ ಕಾರ್ಯಕ್ರಮವನ್ನು ಬಳಿಕ ಸೆಕ್ರೆಟರಿಯೇಟ್ಗೆ ಬದಲಾಯಿಸಿ ಅಲ್ಲಿ ಅದನ್ನು ಸರಕಾರಿ ಮಟ್ಟದಲ್ಲಿ ಆಚರಿಸಲಾಯಿತು.
ರಾಜ್ ಭವನದಲ್ಲಿ ನಡೆದ ಕಾರ್ಯಕ್ರಮವನ್ನು ಬಹಿಷ್ಕರಿಸುವ ಮೂಲಕ ಕೃಷಿ ಸಚಿವರು ಮತ್ತು ಎಡರಂಗ ಸರಕಾರ ಭಾರತಾಂಬೆಯನ್ನು ಅವಹೇಳನಗೈದಿದೆ ಎಂದು ಹೇಳಿದ ರಾಜ್ಯಪಾಲರು ಆದಿ ಕಾಲದಿಂದಲೇ ಪ್ರಕೃತಿಯನ್ನು ಪೂಜಿಸುವುದು ಭಾರತೀಯ ಪರಂಪರೆ ಯಾಗಿದೆ. ಇದನ್ನೆಲ್ಲಾ ಉಪೇಕ್ಷಿಸಬೇಕೆಂದು ಕೆಲವರು ಒತ್ತಾಯಿಸುತ್ತಿದ್ದಾರೆ.
ಕಾರ್ಯಕ್ರಮದಲ್ಲಿ ಭಾರತಾಂಬೆಯ ಚಿತ್ರವನ್ನು ತೆರವುಗೊಳಿಸಬೇಕೆಂದು ಆಗ್ರಹಿಸಿ ನನಗೆ ಸಂದೇಶವೊಂದು ಲಭಿಸಿತ್ತು. ಆದರೆ ಅದನ್ನು ತೆರವುಗೊಳಿಸುವಂತಿಲ್ಲವೆಂದು ನಾನು ಆ ವೇಳೆಯಲ್ಲೇ ಸ್ಪಷ್ಟಪಡಿಸಿದ್ದೆ ಎಂದು ರಾಜ್ಯಪಾಲರು ಹೇಳಿದ್ದಾರೆ. ಭಾರತಾಂಬೆ ನಮ್ಮ ಮಾತೃಭೂಮಿ ಯಾಗಿದೆ. ಆದ್ದರಿಂದ ಭಾರತಾಂಬೆ ಯನ್ನು ಕೈಬಿಡುವಂತಿಲ್ಲ ವೆಂದೂ ರಾಜ್ಯಪಾಲರು ಹೇಳಿದರು. ಮಾತ್ರವಲ್ಲ ಅವರು ಬಳಿಕ ರಾಜ್ ಭವನದ ಆವರಣದಲ್ಲಿ ಸಿಂಧೂರ್ ಎಂಬ ಹೆಸರಲ್ಲಿ ಮಾವಿನ ಸಸಿಯನ್ನು ನೆಟ್ಟರು.
ಇನ್ನೊಂದೆಡೆ ಇದೇ ಸಂದರ್ಭದಲ್ಲಿ ಭಾರತಾಂಬೆಯ ಫೋಟೋ ಆರ್.ಎಸ್.ಎಸ್ ನದ್ದಾಗಿದೆ. ಆದ್ದರಿಂದ ಆ ಫೋಟೋಕ್ಕೆ ಪುಷ್ಪಾರ್ಚನೆ ನಡೆಸಿ ಪೂಜಿಸಲು ನನ್ನನ್ನು ಸಿಗಲ್ಲ. ರಾಜ್ ಭವನದಲ್ಲಿ ಹಾರಿಸಬೇಕಾಗಿರುವುದು ತ್ರಿವರ್ಣ ಧ್ವಜವಾಗಿದೆಯೆಂದು ಕೃಷಿ ಸಚಿವ ಪ್ರಸಾದ್ ಹೇಳಿದ್ದಾರೆ.
ಒಂದು ಪ್ರತ್ಯೇಕ ಸಂಘಟನೆ ಉಪಯೋಗಿಸುವ ಚಿತ್ರವನ್ನು ಸಂವಿ ಧಾನಾತ್ಮಕ ಸಂಸ್ಥೆಯಲ್ಲಿ ರಾಜ್ಯಪಾಲರು ಸರಕಾರಿ ಕಾರ್ಯಕ್ರಮದಲ್ಲಿ ಉಪಯೋ ಗಿಸಿರುವುದು ಸಂವಿಧಾನ ಬಾಹಿರ ಕ್ರಮವಾಗಿದೆಯೆಂದು ಅವರು ಹೇಳಿದ್ದಾರೆ.
ಕೃಷಿ ಸಚಿವರ ಈ ನಿಲುವನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಇತರ ಹಲವು ಸಚಿವರು ಇನ್ನೊಂದೆಡೆ ಅಭಿನಂದಿಸಿದ್ದಾರೆ.