ವೇಡನ್ರ ಹಾಡು ವಿ.ವಿ ಪಠ್ಯ ಪುಸ್ತಕದಲ್ಲಿ: ಹಿಂತೆಗೆಯಲು ಬಿಜೆಪಿ ಬೆಂಬಲಿತ ಸದಸ್ಯ ಆಗ್ರಹ
ಮಲಪ್ಪುರಂ: ರಾಪರ್ ವೇಡನ್ರ ಹಾಡು ಕಲ್ಲಿಕೋಟೆ ವಿವಿಯ ಪಠ್ಯ ಯೋಜನೆಯಲ್ಲಿ ಸೇರಿಸಿರುವುದನ್ನು ಹಿಂತೆಗೆಯಬೇಕೆಂದು ಆಗ್ರಹಿಸಿ ಬಿಜೆಪಿ ಬೆಂಬಲಿತ ಸಿಂಡಿಕೇಟ್ ಸದಸ್ಯ ವೈಸ್ ಚಾನ್ಸೆಲರ್ರಿಗೆ ಪತ್ರ ನೀಡಿದ್ದಾರೆ. ಸಿಂಡಿಕೇಟ್ ಸದಸ್ಯ ಎ.ಕೆ. ಅನುರಾಜ್ ವೈಸ್ ಚಾನ್ಸಲರ್ ಪಿ. ರವೀಂದ್ರನ್ರಿಗೆ ಈ ಬಗ್ಗೆ ಪತ್ರ ನೀಡಿದ್ದಾರೆ. ವೇಡನ್ ಮಾದಕ ಪದಾರ್ಥ, ಹುಲಿಯ ಉಗುರು ಕೈವಶವಿರಿಸಿಕೊಂಡ ಹಿನ್ನೆಲೆಯಲ್ಲಿ ಸೆರೆಯಾದ ವ್ಯಕ್ತಿಯಾಗಿದ್ದಾನೆಂದು ಪತ್ರದಲ್ಲಿ ಸೂಚಿಸಲಾಗಿದೆ. ವೇಡನ್ರ ಹಲವು ವೀಡಿಯೋಗಳಲ್ಲೂ ಮದ್ಯ ಉಪಯೋಗಿಸುವ ದೃಶಗಳು ಒಳಗೊಂಡಿದೆ. ವೇಡನ್ರ ರಚನೆ ಪಠ್ಯ ಪುಸ್ತಕದಲ್ಲಿ ಒಳಪಡಿಸುವುದು ಈ ವ್ಯಕ್ತಿ ಬದುಕಿನಲ್ಲಿ ಮುಂದುವರಿಸುತ್ತಿರುವ ಅನುಕರಣೀಯವಲ್ಲದ ದಾರಿಗಳಲ್ಲಿ ಸಂಚರಿಸಲು ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಬಹುದಾಗಿದ್ದು, ಇದು ತಪ್ಪು ಸಂದೇಶ ಸಮಾಜಕ್ಕೆ ನೀಡಲಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.