ಶಾಲಾ ಸಮಯ ಬದಲಾವಣೆ: ಸರಕಾರ ಹಠಮಾರಿತನ ನಿಲುವುಹೊಂದಿಲ್ಲ, ಮುಖ್ಯಮಂತ್ರಿಯ ಅಭಿಪ್ರಾಯ ಕೇಳಿದ ಬಳಿಕ ಸೂಕ್ತ ತೀರ್ಮಾನ-ಸಚಿವ

ತಿರುವನಂತಪುರ: ಶಾಲಾ ತರಗತಿ ಸಮಯ ಬದಲಾವಣೆಗೆ ವಿರುದ್ಧ ಸರಕಾರಕ್ಕೆ ಹಲವು ಮನವಿಗಳು ಸಲ್ಲಿಸಲ್ಪಟ್ಟಿದ್ದು, ಅದನ್ನು ಪರಿಶೀಲಿಸಿ ಆ ಬಗ್ಗೆ  ಮುಖ್ಯಮಂತ್ರಿ ಯೊಂದಿಗೆ ಸಮಾಲೋಚನೆ ನಡೆಸಿ ಈ ವಿಷಯದಲ್ಲಿ ಯಾವುದೇ ತೀರ್ಮಾನ ಕೈಗೊಳ್ಳಲಾಗು ವುದೆಂದು ಶಿಕ್ಷಣ ಸಚಿವ ವಿ. ಶಿವನ್ ಕುಟ್ಟಿ ಇಂದು ಬೆಳಿಗ್ಗೆ ತಿಳಿಸಿದ್ದಾರೆ.

ಶಾಲಾ ತರಗತಿ ಸಮಯ ಬದಲಾವಣೆ ವಿಷಯದಲ್ಲಿ ಸರಕಾರ ಯಾವುದೇ ರೀತಿಯ ಹಠಮಾರಿತನ ನಿಲುವು ಹೊಂದಿಲ್ಲ. ಈ ವಿಷಯ ಈಗ ಹೈಕೋರ್ಟ್‌ನ ಪರಿಗಣನಯಲ್ಲಿದೆ. ಆದ್ದರಿಂದ ಹೈಕೋರ್ಟ್ ಅಂಗೀಕಾರ ನೀಡಿದಲ್ಲಿ ಶಾಲಾ ಸಮಯ ಬದಲಾವಣೆಯನ್ನು ಹೊರಡಿಸಿದ ಆದೇಶವನ್ನು  ಹಿಂದಕ್ಕೆ ಪಡೆಯಲು ಸರಕಾರ ಸಿದ್ಧವಾಗಿದೆ. ಈ ಬಗ್ಗೆ ಮುಖ್ಯಮಂತ್ರಿಯ ಅಭಿಪ್ರಾ ಯವನ್ನು ಕೇಳಲಗುವುದೆಂದು ಸಚಿವರು ತಿಳಿಸಿದ್ದಾರೆ.

ಶಾಲಾ ತರಗತಿಗಳ ಸಮಯದಲ್ಲಿ ತರಲಾಗಿರುವ ಬದಲಾವಣೆ ಮತೀಯ ಶಿಕ್ಷಣ ನಡೆಸುವವರನ್ನು ಸಂಕಷ್ಟ ಸೃಷ್ಟಿಸಲಿದೆಯೆಂದು   ಸಮಸ್ತ ಕೇರಳ ಜಂಇಯತ್ತುಲ್ ಉಲಮಾ ಅಧ್ಯಕ್ಷ ಸಯ್ಯಿದ್ ಮೊಹಮ್ಮದ್ ಜೆಫ್ರಿ  ಮುತ್ತುಕೋಯ ತಂಙಳ್ ಹೇಳಿದ್ದು, ಆದ್ದರಿಂದ ಸಮಯ ಬದಲಾವಣೆ ತೀರ್ಮಾನದಿಂದ ಸರಕಾರ ಹಿಂದಕ್ಕೆ ಸರಿಯಬೇಕೆಂದು ಆಗ್ರಹಿಸಿ ಅವರು ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದಾರೆ.

ಶಾಲಾ ತರಗತಿ ಸಮಯ ಬದಲಾವಣೆ ತೀರ್ಮಾನದಿಂದ 12 ಲಕ್ಷದಷ್ಟು ವಿದ್ಯಾರ್ಥಿಗಳು  ಸಂಕಷ್ಟ ಅನುಭವಿಸುತ್ತಿದ್ದು, ಅದನ್ನು ಸರಕಾರ ಮನಗಾಣಬೇಕೆಂದು ಮನವಿಯಲ್ಲಿ ಜೆಫ್ರಿ ಮತ್ತುಕೋಯ ತಂಙಳ್ ವಿನಂತಿಸಿಕೊಂಡಿದ್ದಾರೆ. ಇದರ ಹೊರತಾಗಿ ಇತರ ಹಲವು ಸಂಘಟನೆಗಳು ಇದೇ ಆಗ್ರಹ ಮುಂದುರಿಸಿದ್ದು ಅದನ್ನು ಸರಕಾರ ಪರಿಶೀಲಿಸುತ್ತಿದೆ.

Leave a Reply

Your email address will not be published. Required fields are marked *

You cannot copy content of this page