ಸಂಕನಿರ್ಮಾಣಕ್ಕಾಗಿ ತೋಡಿದ ಹೊಂಡದಲ್ಲಿ ಯುವಕ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ರಸ್ತೆಮಧ್ಯೆ ಸಂಕ ನಿರ್ಮಿಸಲೆಂದು ತೋಡಲಾದ ನೀರು ತುಂಬಿದ ಹೊಂಡದಲ್ಲಿ ಯುವಕ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.

ಹೊಸದುರ್ಗ ಅಲಾಮಿಪಳ್ಳಿ ಬಸ್ ನಿಲುಗಡೆ ಕೇಂದ್ರದ ಬಳಿ ರಾಜ್ಯ  ಹೆದ್ದಾರಿ ಮಧ್ಯೆ ಸಂಕ ನಿರ್ಮಿಸಲೆಂದು ತೋಡಿದ್ದ  ಮಳೆ ನೀರು ತುಂಬಿದ ಹೊಂಡದಲ್ಲಿ ಮೃತದೇಹ ಪತ್ತೆಯಾಗಿದೆ. ಮೃತನನ್ನು ಹೊಸದುರ್ಗ ಕೊವ್ವಲ್‌ಪಳ್ಳಿಯ ನಿಧೀಶ್ (೩೫) ಎಂದು ಗುರುತಿಸಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ. ನಿಧೀಶ್ ಹೊಸದುರ್ಗ ಮದ್ಯಬಾರ್ ಹೋಟೆಲ್‌ವೊಂದರ ಕಾರ್ಮಿಕನಾಗಿದ್ದಾರೆ. ಹೊಸದುರ್ಗ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

You cannot copy contents of this page