ಸಂಚರಿಸುತ್ತಿದ್ದ ಕಾರಿಗೆ ಬೆಂಕಿ
ಉಪ್ಪಳ: ಸಂಚರಿಸುತ್ತಿದ್ದ ಕಾರಿಗೆ ಬೆಂಕಿ ಹತ್ತಿಕೊಂಡಿದ್ದು, ಸ್ಥಳೀಯರು ನಡೆಸಿದ ರಕ್ಷಣಾ ಕಾರ್ಯಾಚರಣೆ ಯಿಂದ ಭಾರೀ ಅಪಾಯ ತಪ್ಪಿದೆ. ನಿನ್ನೆ ರಾತ್ರಿ ೮.೩೦ಕ್ಕೆ ಮುಟ್ಟಂಗೇಟ್ ಸಮೀಪ ಘಟನೆ ನಡೆದಿದೆ. ಉಪ್ಪಳ ಭಾಗದಿಂದ ಕಾಸರಗೋಡಿನತ್ತ ಸಂಚರಿಸುತ್ತಿದ್ದ ನ್ಯಾನೋ ಕಾರಿಗೆ ಬೆಂಕಿ ಹತ್ತಿಕೊಂಡಿದೆ. ವಿಷಯ ತಿಳಿದ ಸ್ಥಳೀಯರು ಕೂಡಲೇ ಬೆಂಕಿ ನಂದಿಸಿದ್ದಾರೆ. ಇದರಿಂದ ಭಾರೀ ಅಪಾಯ ತಪ್ಪಿದೆ.