ಸಹೋದರಿಯ ಕಣ್ಮುಂದೆ ರೈಲು ಢಿಕ್ಕಿ ಹೊಡೆದು ಯುವತಿ ಮೃತ್ಯು

ಕುಂಬಳೆ: ಸಹೋದರಿಯ ಕಣ್ಮುಂದೆ ರೈಲು ಢಿಕ್ಕಿ ಹೊಡೆದು ಯುವತಿ ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ.

ಪೆರುವಾಡ್ ನಿವಾಸಿ ದಿ| ಅಬ್ದುಲ್ ರಹ್ಮಾನ್‌ರ ಪತ್ನಿ  ಶಂಸೀನ (೩೬) ಮೃತಪಟ್ಟ ದುರ್ದೈವಿಯಾಗಿದ್ದಾರೆ. ನಿನ್ನೆ ಸಂಜೆ ೫.೩೦ರ ವೇಳೆ ಪೆರುವಾಡ್‌ನಲ್ಲಿ ಈ ದುರ್ಘಟನೆ ಸಂಭವಿಸಿದೆ. ಪೆರುವಾಡ್‌ನಲ್ಲಿರುವ ಪತಿಯ ಸಹೋದರಿಯ ಮಗುವನ್ನು ಕಂಡು ಮರಳುತ್ತಿದ್ದಾಗ ಅಪಘಾತವುಂಟಾಗಿದೆ. ಶಂಸೀನ ಹಾಗೂ ಸಹೋದರಿ ರೈಲು ಹಳಿಯಲ್ಲಿ ನಡೆದು ಹೋಗುತ್ತಿದ್ದಾಗ ರೈಲು ಆಗಮಿಸಿದೆ. ರೈಲನ್ನು ಕಂಡ ಸಹೋದರಿ ಬೊಬ್ಬಿಟ್ಟು ತಿಳಿಸಿದ್ದರು.  ಆದರೆ ಹಳಿಯ ಸಮೀಪದಲ್ಲೇ ಕಾಡುಪೊದೆಗಳು ತುಂಬಿಕೊಂಡಿರುವುದ ರಿಂದ ಶಂಸೀನರಿಗೆ ಪಕ್ಕನೆ ಬದಿಗೆ ಸರಿಯಲು ಸಾಧ್ಯವಾಗಲಿಲ್ಲ. ಅಷ್ಟರೊಳಗೆ ರೈಲು ಢಿಕ್ಕಿ ಹೊಡೆದು ದೇಹ ಛಿದ್ರಗೊಂಡಿದೆ. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಲಾಗಿದೆ.

ಪತಿ ಅಬ್ದುಲ್ ರಹ್ಮಾನ್ ಒಂದೂವರೆ ವರ್ಷ ಹಿಂದೆ ಹಾವು ಕಚ್ಚಿ ಮೃತಪಟ್ಟಿದ್ದರು. ಅನಂತರ  ಶಂಸೀನ ಮಕ್ಕಳೊಂದಿಗೆ ಕಾಸರಗೋಡು ವಿದ್ಯಾನಗರ ಬಳಿಯ ಚೆಟ್ಟುಂಗುಳಿ ಯಲ್ಲಿರುವ ತವರುಮನೆಯಲ್ಲಿ ವಾಸಿಸುತ್ತಿದ್ದರು. ದಿ| ಇಲ್ಯಾಸ್-ಹಾಜಿರ ದಂಪತಿಯ ಪುತ್ರಿಯಾದ ಶಂಸೀನ ಮಕ್ಕಳಾದ ಅಬ್ದುಲ್ ಜಾಸಿಂ, ಅಬ್ದುಲ್ ಸಮ್ಮಾಸ್, ಫಾತಿಮತ್ ಜಮೀನ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

You cannot copy content of this page