ಸಿಐಟಿಯುನಿಂದ ಕಾರ್ಮಿಕ ದಿನಾಚರಣೆ

ಪೈವಳಿಕೆ: ಸಿಐಟಿಯು ನೇತೃತ್ವದಲ್ಲಿ ನಿನ್ನೆ ಪೈವಳಿಕೆಯಲ್ಲಿ ಕಾರ್ಮಿಕ ದಿನಾಚರಣೆ ನಡೆಸಲಾ ಯಿತು. ಬೆಳಿಗ್ಗೆ ಮಾನಿಪ್ಪಾಡಿ ಭಗತ್ ಸಿಂಗ್ ನಗರದಿಂದ ಮೆರವಣಿಗೆ ನಡೆಯಿತು. ಪೈವಳಿಕೆ ಯಲ್ಲಿ ಸಿಐಟಿಯು ಮಂಜೇಶ್ವರ ಏರಿಯಾ ಉಪಾಧ್ಯಕ್ಷ ಚಂದ್ರ ನಾಯ್ಕ್ ಮಾನಿ ಪ್ಪಾಡಿ ಧ್ವಜಾರೋಹಣಗೈದರ. ಬಾಬು ವಾದ್ಯಪಡ್ಪು ಅಧ್ಯಕ್ಷತೆ ವಹಿಸಿದರು. ಹುಸೈನ್ ಮಾಸ್ತರ್, ಶ್ಯಾಮ್ ಭಟ್ ಮೇ ದಿನ ಸಂದೇಶ ನೀಡಿದರು. ವಿನೋದ್ ಮಾನಿಪ್ಪಾಡಿ, ಎ.ಕೆ. ಸತೀಶ, ಮನೋಜ್, ಸೀತಾರಾಮ ನಾಯ್ಕ್,ಸಿಮಾಮ್ ಡಿ’ಸೋಜಾ, ಅನಿಲ್, ರಮೇಶ್ ನೇತೃತ್ವ ನೀಡಿದರು. ಶ್ಯಾಮ್ ಸುಂದರ್ ವಂದಿಸಿದರು.

You cannot copy contents of this page