ಸ್ಕೂಟರ್‌ನಲ್ಲಿ ಸಾಗಿಸುತ್ತಿದ್ದ 34 ಲೀಟರ್ ಕರ್ನಾಟಕ ಮದ್ಯ ವಶ

ಬದಿಯಡ್ಕ:  ಸ್ಟ್ರೈಕಿಂಗ್ ಫೋರ್ಸ್‌ನಂಗವಾಗಿ ಬದಿಯಡ್ಕ ಎಕ್ಸೈಸ್ ರೇಂಜ್‌ನ ಅಬಕಾರಿ ತಂಡ ಪನ್ನಿಪ್ಪಾರೆ ಚೆಟ್ಟುಂಗುಳಿಗೆ ಸಾಗುವ ಎಂ.ಜಿ ರಸ್ತೆಯಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಸ್ಕೂಟರ್‌ನಲ್ಲಿ  ಅಕ್ರಮವಾಗಿ ಸಾಗಿಸುತ್ತಿದ್ದ 34.560 ಲೀಟರ್ ಕರ್ನಾಟಕ ಮದ್ಯ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿ  ಪನ್ನಿಪ್ಪಾರೆಯ ರಾಧಾಕೃಷ್ಣ ಎಂಬಾತನ ವಿರುದ್ಧ  ಕೇಸು ದಾಖಲಿಸಲಾಗಿದೆ.  ಸಾಗಿಸುತ್ತಿದ್ದ ಮಾಲು ಮತ್ತು ವಾಹನವನ್ನು ಅಬಕಾರಿ ತಂಡ ವಶಕ್ಕೆ ತೆಗೆದುಕೊಂಡಿದೆ. ಬದಿಯಡ್ಕ ಎಕ್ಸೈಸ್ ರೇಂಜ್ ಕಚೇರಿಯ ಅಸಿ. ಎಕ್ಸೈಸ್ ಇನ್‌ಸ್ಪೆಕ್ಟರ್ (ಗ್ರೇಡ್) ಕೃಷ್ಣ ಎ ನೇತೃತ್ವದಲ್ಲಿ  ಸಿವಿಲ್ ಎಕ್ಸೈಸ್ ಆಫೀಸರ್‌ಗಳಾದ ಧನ್ಯ, ಫಾತಿಮ್ಮತ್ ಶಮ್ನ, ಅಲೋಕ್ ಗುಪ್ತ, ವಿನೋದ್ ಕೆ, ಲಿಜು ಜಿ.ಎಸ್ ಎಂಬಿವರನ್ನೊಳಗೊಂಡ ತಂಡ ಈ ಕಾರ್ಯಾಚರಣೆ ನಡೆಸಿದೆ.

RELATED NEWS

You cannot copy contents of this page