ಸ್ಥಳೀಯಾಡಳಿತ ಸಂಸ್ಥೆಗಳ ಸೇವೆಗಳು ಶರವೇಗದಲ್ಲಿ ಲಭಿಸುವ ಕೆ-ಸ್ಮಾರ್ಟ್ ಫ್ಲಾಟ್ ಫಾಂ ಜ್ಯಾರಿಗೆ
ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳ ಸೇವೆಗಳು ಜನರಿಗೆ ಶರವೇಗದಲ್ಲಿ ಲಭಿಸುವಂತೆ ಮಾಡುವ ಆಧುನಿಕ ರೀತಿಯ ಕೆ ಸ್ಮಾರ್ಟ್ ಫ್ಲಾಟ್ಫಾಂ ಯೋಜನೆ ಇಂದು ಬೆಳಿಗ್ಗೆಯಿಂದ ರಾಜ್ಯದಲ್ಲಿ ವಿದ್ಯುಕ್ತವಾಗಿ ಜ್ಯಾರಿ ಗೊಂಡಿದೆ.
ತಿರುವನಂತಪುರದ ಕವಡಿಯಾರ್ ಉದಯ ಪ್ಯಾಲೇಸ್ ಸಭಾಂಗಣದಲ್ಲಿ ಇಂದು ಬೆಳಿಗ್ಗೆ ನಡೆದ ಕಾರ್ಯ ಕ್ರಮದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಈ ಯೋಜನೆಯ ರಾಜ್ಯ ಮಟ್ಟದ ಉದ್ಘಾಟನೆ ನೆರವೇರಿಸಿದರು. ರಾಜ್ಯ ಸ್ಥಳೀಯಾಡಳಿತ-ಅಬಕಾರಿ ಖಾತೆ ಸಚಿವ ಎಂ.ಬಿ. ರಾಜೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.
ಕೆ ಸ್ಮಾರ್ಟ್ ಮೂಲಕ ನೀಡ ಲಾದ ಮೊದಲ ಜನನ ಪ್ರಮಾಣಪತ್ರವನ್ನು ಕಾರ್ಯಕ್ರಮದಲ್ಲಿ ವಿರೋಧಪಕ್ಷ ನಾಯಕ ವಿ.ಡಿ. ಸತೀಶನ್ ಹಸ್ತಾಂತರಿಸಿದರು. ಆನ್ಲೈನ್ ಮೂಲಕ ಪಾವತಿಸಲಾದ ಕಟ್ಟಡ ತೆರಿಗೆಯ ರಶೀದಿಯನ್ನು ಕಂದಾಯ ಸಚಿವ ಕೆ. ರಾಜನ್ ಹಸ್ತಾಂತರಿಸಿದರು. ಕೆ ಸ್ಮಾರ್ಟ್ ಸ್ಕೂಲ್ ಆಫ್ ಟೆಕ್ನೋಲಜಿಯ ಲಾಂಜಿಂಗ್ನ್ನು ವಿತ್ತ ಸಚಿವ ಕೆ.ಎನ್. ಬಾಲಗೋಪಾಲನ್ ಇದೇ ಸಂದರ್ಭದಲ್ಲಿ ನಿರ್ವಹಿಸಿದರು. ಸ್ವಯಂ ಆಗಿ ದೃಢೀಕರಿಸಲ್ಪಟ್ಟ ಕಟ್ಟಡ ಪರ್ಮಿಟ್ಗಳನ್ನು ಶಿಕ್ಷಣ ಸಚಿವ ವಿ. ಶಿವನ್ ಕುಟ್ಟಿ ಹಸ್ತಾಂತರಿಸಿದರು. ಕೆ. ಸ್ಮಾರ್ಟ್ ವೀಡಿಯೋ ಕೆವೈಸಿ ಮೂಲಕ ವಿವಾಹ ಸರ್ಟಿಫಿಕೇಟ್ನ್ನು ಅರ್ಜಿ ದಾರನಿಗೆ ಆಹಾರ -ಸಾರ್ವಜನಿಕ ಸರಬರಾಜು ಸಚಿವ ಜಿ.ಆರ್. ಅನಿಲ್ ಹಸ್ತಾಂತರಿಸಿದರು. ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಶಾರದಾ ಮುರಳೀಧರನ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದರು.
ಕೆ ಸ್ಮಾರ್ಟ್ ಎಂಬ ಆಧುನಿಕ ರೀತಿಯ ಯೋಜನೆಯನ್ನು ಮೊತ್ತಮೊದಲಾಗಿ ಜ್ಯಾರಿಗೊಳಿಸಿದ ಭಾರತದ ಮೊದಲ ರಾಜ್ಯವೆಂಬ ಹೆಗ್ಗಳಿಕೆಗೂ ಕೇರಳ ಪಾತ್ರವಾಗಿದೆ. ಗ್ರಾಮ ಪಂಚಾಯತ್ಗಳು, ನಗರಸಭೆ ಮತ್ತು ಮಹಾನಗರಪಾಲಿಕೆಗಳಿಂದ ಜನರಿಗೆ ಲಭಿಸುವ ಎಲ್ಲಾ ಆನ್ಲೈನ್ ಸೇವೆಗಳು ಕೆ ಸ್ಮಾರ್ಟ್ ಮೂಲಕ ಇನ್ನು ತ್ವರಿತವಾಗಿ ಲಭಿಸಲಿದೆ. ಕಟ್ಟಡ ತೆರಿಗೆ, ಜನನ-ಮರಣ, ವಿವಾಹ ಸರ್ಟಿಫಿಕೇಟ್, ದಾಖಲುಪತ್ರ ಅಥವಾ ಸರ್ಟಿಫಿಕೇಟ್ಗಳಲ್ಲಿ ತಿದ್ದುಪಡಿ ಇತ್ಯಾದಿ ಸೇವೆಗಳು ಈ ಯೋಜನೆ ಪ್ರಕಾರ ಆನ್ಲೈನ್ನಲ್ಲಿ ಶರವೇಗದಲ್ಲಿ ಲಭಿಸಲಿದೆ. ಇಂತಹ ಸರ್ಟಿಫಿಕೇಟ್ಗಳಿಗೆ ಜನರು ಇನ್ನು ದಿನಗಳ ಕಾಲ ಕಾಯಬೇಕಾಗಿಲ್ಲ.