ಹಬ್ಬದ ಸೀಸನ್‌ಗಳಲ್ಲಿ ಬೀದಿ ವ್ಯಾಪಾರ ನಿಯಂತ್ರಿಸಲು ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ಮನವಿ

ಕಾಸರಗೋಡು: ಜೀವನ ನಿರ್ವಹಣೆಗೆ ಬೇಕಾಗಿ ವ್ಯಾಪಾರವನ್ನು ಆಶ್ರಯಿಸಿದ ಕಿರು ವ್ಯಾಪಾರಿಗಳು ಸರಕಾರ ಹಾಗೂ ಪಂಚಾಯತ್ ನಿಗದಿಪಡಿಸಿದ ಲೈಸನ್ಸ್ ನೋಂದಾವಣೆ, ತೆರಿಗೆ, ವಿದ್ಯುತ್ ದರ, ವೇತನ ಮೊದಲಾದವುಗಳ ಬೃಹತ್ ವೆಚ್ಚವನ್ನು ವಹಿಸಿಕೊಂಡು ವ್ಯಾಪಾರ ನಡೆಸುವವರಾಗಿದ್ದಾರೆ. ಈ ವಲಯದಲ್ಲಿ ಬಟ್ಟೆ ಬರೆ ವ್ಯಾಪಾರಿಗಳು, ಫೂಟ್‌ವೇರ್, ರೆಡಿಮೇಡ್‌ನಂತಹ ಕೆಲವು ಸಂಸ್ಥೆಗಳು ಸೀಸನ್ ವ್ಯಾಪಾರವನ್ನು ಆಶ್ರಯಿಸಿ ಮುಂದುವರಿ ಯುತ್ತಿದೆ. ಕಳೆದ ಕೆಲವು ದಿನಗಳಿಂದ ಉಪಯೋಗ ಸಾಮಗ್ರಿಗಳ ಮಾರಾಟ ದರ ಕಡಿಮೆಯಾಗಿದೆ. ಈಗ ಈಸ್ಟರ್, ರಂಜಾನ್, ವಿಷು ಎಂಬೀ ಹಬ್ಬಗಳಿಗೆ ಸಂಬಂಧಿಸಿದ ಸೀಸನ್ ಆಗಿದೆ. ಈ ಹಿನ್ನೆಲೆಯಲ್ಲಿ ಮೇಲೆ ಸೂಚಿಸಿದ ರೀತಿಯ ವ್ಯಾಪಾರಿಗಳು ಈ ರೀತಿಯ ಸೀಸನ್‌ಗಳನ್ನು ಆಶ್ರಯಿಸಿ ಜೀವಿಸುತ್ತಿದ್ದು, ಇಂತಹ ಸೀಸನ್‌ಗಳಿಗಾಗಿ ಕಾಯುವವರಾಗಿದ್ದಾರೆ. ಆದರೆ ಈಗ ಈ ರೀತಿಯ ವ್ಯಾಪಾರಿಗಳಿಗೆ ಅನಧಿಕೃತ ವ್ಯಾಪಾರಗಳಿಂದುಂಟಾಗುವ ಸಂಕಷ್ಟ ಎದುರಿಸಬೇಕಾಗಿ ಬಂದಿದೆ. ಸರಕಾರ, ಪಂಚಾಯತ್ ಮೊದಲಾದ ಆಡಳಿತ ಸಂಸ್ಥೆಗಳ ಆದಾಯಕ್ಕೆ ದೋಷಕರವಾಗಿ  ಪರಿಣಮಿಸುವ ಯಾವುದೇ ಪರವಾನಗಿ, ನೋಂದಾವಣೆ, ತೆರಿಗೆ ಅನ್ವಯವಲ್ಲದೆ, ಚಪ್ಪಲಿಗಳು, ಬಟ್ಟೆಬರೆಗಳು, ರೆಡಿಮೇಡ್ ಉತ್ಪನ್ನಗಳ ಸಹಿತದ ಉಪಯೋಗ ಸಾಮಗ್ರಿಗಳನ್ನು ಕಾನೂನು ವಿಧೇಯವಲ್ಲದೆ ರಸ್ತೆ ಬದಿಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಇವುಗಳಿಂದ ಪಂಚಾಯತ್‌ಗೆ ಹಾಗೂ ಸರಕಾರಕ್ಕೆ ಲಭಿಸಬೇಕಾದ ತೆರಿಗೆ ಹಾಗೂ ಇತರ ಆರ್ಥಿಕ ಮೂಲಗಳು ನಷ್ಟವಾಗುತ್ತಿದೆ. ಈ ರೀತಿಯ ಅನಧಿಕೃತ ಮಾರಾಟಗಾರರಿಂದಾಗಿ ನೋಂದಾವಣೆ ನಡೆಸಿ ಕಾನೂನುಬದ್ಧವಾಗಿ ವ್ಯಾಪಾರ ಮಾಡುವ ವ್ಯಾಪಾರಿಗಳಿಗೆ ಸಮಸ್ಯೆಯಾಗಿದ್ದು, ಅವರು ಆತ್ಮಹತ್ಯೆ ಮಾಡಬೇಕಾದ ಸ್ಥಿತಿಗೆ ತಲುಪಿದ್ದಾರೆ. ಈ ಹಿನ್ನೆಲೆಯಲ್ಲಿ ಈ ರೀತಿಯ ವ್ಯಾಪಾರ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿ ಹಾಗೂ ಜಿಎಸ್‌ಟಿ ಅಧಿಕಾರಿಗಳಿಗೆ ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ಮನವಿ ನೀಡಿದ್ದು, ಕ್ರಮ ಸ್ವೀಕರಿಸುವ ಭರವಸೆಯನ್ನು ಜಿಲ್ಲಾಧಿಕಾರಿ ನೀಡಿರುವುದಾಗಿ ಸಂಬಂಧಪಟ್ಟವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page