ಹಿರಿಯ ವ್ಯಾಪಾರಿ ನಿಧನ
ಹೊಸಂಗಡಿ: ವಾಮಂಜೂರು ಚೆಕ್ಪೋಸ್ಟ್ ಬಳಿಯ ಜ್ಯೋತಿ ನಿವಾಸದ ಹಿರಿಯ ವ್ಯಾಪಾರಿ ಮಾಧವ (80) ನಿನ್ನೆ ಮಧ್ಯಾಹ್ನ ಮನೆಯಲ್ಲಿ ಹೃದ ಯಾಘಾತದಿಂದ ನಿಧನರಾದರು. ಇವರು ಕಳೆದ 40 ವರ್ಷಗಳಿಂದ ಮನೆ ಪರಿಸರದಲ್ಲಿ ದಿನಸಿ ಅಂಗಡಿ ವ್ಯಾಪಾರಿಯಾಗಿದ್ದರು. ಮೃತರು ಪತ್ನಿ ಪುಷ್ಪಾವತಿ, ಮಕ್ಕಳಾದ ಭಾರತಿ, ವಿಜಯ್, ಬಾಲಚಂದ್ರ, ಜ್ಯೋತಿ, ಸರಿತಾ, ಅಕ್ಷಿತಾ, ರಾಕೇಶ್, ಸೊಸೆಯಂ ದಿರಾದ ಸುಜÁತ, ಪ್ರಜಿತಾ, ಸುಸ್ಮಿತಾ, ಅಳಿಯಂದಿರಾದ ರಮೇಶ ಉಪ್ಪಳ, ಅಶೋಕ ಪುತ್ತಿಗೆ, ಅಶೋಕ ತೊಕ್ಕೋಟು, ಉಮೇಶ ಕಾಸರಗೋಡು, ಸಹೋದರಿ ಚಂದ್ರಾವತಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.