ಹಿರಿಯ ಹೊಲಿಗೆ ಕಾರ್ಮಿಕ, ಧಾರ್ಮಿಕ ಮುಖಂಡ ಸುಂದರ ಕೊಹಿನೂರು ನಿಧನ
ಕಾಸರಗೋಡು: ನಗರದಲ್ಲಿ ಹಲವು ವರ್ಷಗಳ ಕಾಲ ಹೊಲಿಗೆ ವೃತ್ತಿಯಲ್ಲಿದ್ದ, ವಿವಿಧ ಧಾರ್ಮಿಕ ರಂಗಗಳಲ್ಲಿ ಸಕ್ರಿಯರಾಗಿದ್ದ ಸುಂದರ ಕೊಹಿನೂರು (80) ನಿಧನ ಹೊಂದಿದರು. ಕಾಳ್ಯಂಗಾಡು ನಿವಾಸಿಯಾಗಿರುವ ಇವರು ಖ್ಯಾತ ಯಕ್ಷಗಾನ ವೇಷಧಾರಿ ದಿ| ಬಣ್ಣದ ಕುಟ್ಯಪ್ಪುರವರ ಪುತ್ರನಾಗಿದ್ದು, ಯಕ್ಷಗಾನದಲ್ಲೂ ವೇಷ ಹಾಕುತ್ತಿದ್ದರು. ತಾಳಮದ್ದಳೆಯಲ್ಲಿ ಅರ್ಥಧಾರಿಯಾಗಿಯೂ ಭಾಗ ವಹಿಸುತ್ತಿದ್ದರು. ಹೊಲಿಗೆದಾರರ ಸಂಘಟನೆಯ ರೂಪೀಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ ಇವರು ಸಂಘಟನೆಯ ಮಾಜಿ ರಾಜ್ಯ ಉಪಾಧ್ಯಕ್ಷರಾಗಿದ್ದರು.
ಮೃತರು ಪತ್ನಿ ಕಮಲಾಕ್ಷಿ, ಮಕ್ಕಳಾದ ಚಿತ್ರಾ, ರೂಪ, ಸಂಜಯ್, ಶ್ರೀಕಾಂತ್, ಸೊಸೆ ಯಂದಿರಾದ ಪ್ರಸನ್ನ, ಶಿಲ್ಪಾ, ಅಳಿಯಂದಿರಾದ ಅರವಿಂದ, ವಿಜಯ, ಸಹೋದರರಾದ ಭಾಸ್ಕರ, ಪ್ರಭಾಕರ, ರವಿ, ಸಹೋದರಿ ಬೇಬಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇಬ್ಬರು ಸಹೋದರರಾದ ಚಂದ್ರ, ಮಾಧವ ಈ ಹಿಂದೆ ನಿಧನ ಹೊಂದಿದ್ದಾರೆ.