೩೧೫ ಗ್ರಾಂ ಗಾಂಜಾ ವಶ: ಓರ್ವ ಸೆರೆ

ಕಾಸರಗೋಡು: ತೆಕ್ಕಿಲ್ ಗ್ರಾಮದ ಪೊಯಿನಾಚಿಯಲ್ಲಿ ಕಾಸರಗೋಡು ಅಬಕಾರಿ ರೇಂಜ್ ಎಕ್ಸೈಸ್ ಇನ್ಸ್‌ಪೆಕ್ಟರ್ ಶಿಜು ಇ.ಟಿ.ಯವರ ನೇತೃತ್ವದ ಅಬಕಾರಿ ತಂಡ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ೩೧೫ ಗ್ರಾಂ ಗಾಂಜಾ ಪತ್ತೆಹಚ್ಚಿ ವಶಪಡಿಸಿ ಕೊಂಡಿದೆ. ಇದಕ್ಕೆ ಸಂಬಂಧಿಸಿ  ಪನಯಾಲ್ ಪೆರಿಯಾಟಡ್ಕ ಪೆರುಂಬಾ ವೀಡಿನ ಖಾದರ್ ಕುಂಞಿ (೫೨) ಎಂಬಾತನನ್ನು ಬಂಧಿಸಿ ಪ್ರಕರಣ ದಾಖಲಿಸಲಾ ಗಿದೆ. ಈತ ಸಂಚರಿಸುತ್ತಿದ್ದ ಮೋಟಾರ್ ಬೈಕ್‌ನ್ನು ಅಬಕಾರಿ ತಂಡ ವಶಕ್ಕೆ ತೆಗೆದುಕೊಂಡಿದೆ.

ಈ ಅಬಕಾರಿ ಕಾರ್ಯಾ ಚರಣೆ ನಡೆಸಿದ ತಂಡದಲ್ಲಿ ಎಕ್ಸೈಸ್ ಇನ್ಸ್‌ಪೆಕ್ಟರ್ (ಗ್ರೇಡ್) ಜೋಸೆಫ್ ಜೆ. ಸಿವಿಲ್ ಎಕ್ಸೈಸ್ ಆಫೀಸರ್‌ಗಳಾದ ರಾಜೇಶ್ ಎ, ಮುರಳೀಧರನ್ ಮತ್ತು ಫಸೀಲಾ ಟಿ.ಎಂಬವರು ಒಳಗೊಂಡಿದ್ದರು.

Leave a Reply

Your email address will not be published. Required fields are marked *

You cannot copy content of this page