೮.೬೪ ಲೀಟರ್ ಕರ್ನಾಟಕ ಮದ್ಯ ವಶ ಓರ್ವ ಸೆರೆ

ಕಾಸರಗೋಡು: ಕಾಸರಗೋಡು ಅಬಕಾರಿ ರೇಂಜ್ ಕಚೇರಿಯ ಇನ್ಸ್‌ಪೆಕ್ಟರ್ ಅನು ಕುಮಾರ್ ಪಿ.ಆರ್.ರ ನೇತೃತ್ವದ ಅಬಕಾರಿ ತಂಡ ಕಾಸರಗೋಡು ಕೋಟೆಕಣಿಯಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ೮.೬೪ ಲೀಟರ್ ಕರ್ನಾಟಕ ಮದ್ಯ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿ ಶಿರಿಬಾಗಿಲು ಗ್ರಾಮದ ಎಸ್.ಟಿ ಕಾಲನಿ ರಸ್ತೆ ಬಳಿಯ ರಾಧಾಕೃಷ್ಣನ್ ಜೆ.ಆರ್. (೨೯) ಎಂಬಾತನನ್ನು ಬಂಧಿಸಿ ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಅಬಕಾರಿ ಪ್ರಿವೆಂಟಿವ್ ಆಫೀಸರ್ ರಾಜೀವನ್ ಎ.ವಿ,  ಸಿವಿಲ್ ಎಕ್ಸೈಸ್ ಆಫೀಸರ್‌ಗಳಾದ ಮೊದೀನ್ ಸಾಧಿಕ್, ರಾಜೇಶ್ ಪಿ. ಮತ್ತು ಮುರಳೀಧರನ್ ಎಂಬಿವರು ಒಳಗೊಂಡಿದ್ದರು.

Leave a Reply

Your email address will not be published. Required fields are marked *

You cannot copy content of this page