ಪೂರಕ್ಕಳಿ ಕಲಾವಿದ ನಿಧನ

ಹೊಸದುರ್ಗ: ಹಿರಿಯ ಸಿಪಿಐ ನೇತಾರ, ಪೂರಕ್ಕಳಿ ಕಲಾವಿದ ವೆಳ್ಳೂರಿನ ಪಿ. ನಾರಾಯಣನ್ (83) ನಿಧನ ಹೊಂದಿ ದರು. ಪೂರಕ್ಕಳಿ ಕಲಾವಿದ, ಹಾಡುಗಾರ, ತರಬೇತುದಾರ, ಸಂಸ್ಕೃತ ಪಂಡಿತ, ನಾಟಕ ನಟ, ಕೃಷಿಕ, ಲೇಖಕ ಮೊದಲಾದ ರಂಗಗಳಲ್ಲಿ ಇವರು ಗುರುತಿಸಿಕೊಂಡಿದ್ದರು. ಶಾಲಾ ಯುವಜ ನೋತ್ಸವಗಳಲ್ಲಿ  ಪೂರಕ್ಕಳಿ ಯನ್ನು ಸ್ಪರ್ಧೆಯಾಗಿ ಘೋಷಿಸಿರುವುದು ಇವರ ನೇತೃತ್ವದಲ್ಲಿದ್ದ ಪೂರಕ್ಕಳಿ ಅಕಾಡೆಮಿ ಯಾಗಿತ್ತು. ಕೇರಳ ಜಾನಪದ ಅಕಾಡೆ ಮಿಯ ಪೂರಕ್ಕಳಿಗಿರುವ ಪುರಸ್ಕಾರ  ಮೊದಲ ಬಾರಿಗೆ ಲಭಿಸಿರುವುದು ಇವರಿಗಾಗಿತ್ತು. ಇವರ ಪತ್ನಿ ಟಿ. ನಾರಾಯಣಿ ಈ ಹಿಂದೆ …

ಜಿಲ್ಲಾ ಪಂಚಾಯತ್ ಎಡರಂಗದ ಸೀಟು ಹಂಚಿಕೆ ಪೂರ್ಣ: 10ರಲ್ಲಿ ಸಿಪಿಎಂ

ಕಾಸರಗೋಡು: ಕಾಸರಗೋಡು ಜಿಲ್ಲಾ ಪಂಚಾಯತ್‌ನ ಎಡರಂಗದ ಸೀಟು ಹಂಚಿಕೆ ಕ್ರಮ ಪೂರ್ಣಗೊಂಡಿದೆ ಎಂದು ಎಡರಂಗದ ಕೆ.ಪಿ. ಸತೀಶ್ಚಂದ್ರನ್ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಇದರಂತೆ ಜಿಲ್ಲಾ ಪಂಚಾಯತ್‌ನ ಹತ್ತು ಡಿವಿಶನ್‌ಗಳಲ್ಲಿ ಸಿಪಿಎಂ, ಮೂರರಲ್ಲಿ ಸಿಪಿಐ, ಐಎಲ್‌ಎಲ್-2, ಕೇರಳ ಕಾಂಗ್ರೆಸ್ (ಎಂ)-1, ಆರ್‌ಜೆಡಿ-1 ಮತ್ತು ಎನ್‌ಸಿಪಿ (ಎಸ್)ಗೆ ಒಂದು ಡಿವಿಷನ್‌ನಲ್ಲಿ ಸ್ಪರ್ಧಿಸಲಿದೆ. ಚೆರುವತ್ತೂರು, ಕಯ್ಯೂರು, ಮಡಿಕೈ, ಕುಟ್ಟಿಕೋಲ್, ಬೇಕಲ, ಚಿಟ್ಟಾರಿಕಲ್, ಪುತ್ತಿಗೆ, ಕುಂಬಳೆ, ಚೆಂಗಳ, ದೇಲಂಪಾಡಿ ಡಿವಿಷನ್‌ನಲ್ಲಿ ಸಿಪಿಎಂ ಸ್ಪರ್ಧಿಸಲಿದೆ. ಬದಿಯಡ್ಕ, ಕುಂಜತ್ತೂರು ಮತ್ತು ಪೆರಿಯ ಡಿವಿಷನ್‌ಗಳನ್ನು ಸಿಪಿಐಗೆ ನೀಡಲಾಗಿದೆ. …

ಸ್ಥಳೀಯಾಡಳಿತ ಸಂಸ್ಥೆಗಳಿಂದ ಸ್ಪರ್ಧಿಸುವ ಮುಸ್ಲಿಂಲೀಗ್ ಅಭ್ಯರ್ಥಿಗಳು

ಕಾಸರಗೋಡು: ಸ್ಥಳೀಯಾಡಳಿತ ಚುನಾವಣೆಯಲ್ಲಿ ಸ್ಪರ್ಧಿಸುವ ಜಿಲ್ಲೆಯ ಮೊದಲ ಹಂತದ ಮುಸ್ಲಿಂ ಲೀಗ್ ಅಭ್ಯರ್ಥಿಗಳ ಯಾದಿಯನ್ನು ಪಕ್ಷದ ಜಿಲ್ಲಾ ಪಾರ್ಲಿಮೆಂಟರಿ ಬೋರ್ಡ್ ಘೋಷಿಸಿದೆ.ಕುಂಬಳೆ: ಪಂಚಾಯತ್ನ ವಾರ್ಡ್ 1ರಿಂದ ಕೌಸರ್ ಜಮಾಲ್, 3-ಎ.ಕೆ. ಆರಿಫ್, 4-ಎಂ.ಪಿ. ಖಾಲಿದ್, 6-ನೌಫಿಯಾ ಹುಸೈನ್, 17-ಹಮೀದ್ ಕೊಯಿಪ್ಪಾಡಿ, 18-ಫಾತಿಮತ್ ಇನಾಸ್ ಫವಾಸ್.ಮೀಂಜ: 2-ಸಲೀಂ ಎಂ.ಎ, 4-ಸಿದ್ದಿಕ್ ಕೆ, 7- ಮುಹಮ್ಮದ್ ಶೆರೀಫ್, 8-ಮಿಸ್ರಿಯಾ ಕೆ, 16-ಸಿ.ಎ. ತಾಜುದ್ದೀನ್, 17-ಬೀಫಾತಿಮ.ಮಂಜೇಶ್ವರ: ವಾರ್ಡ್ 2-ಇಲ್ಯಾಸ್, 7-ಅಬ್ದುಲ್ ರಜಾಕ್, 3-ಸಫಾ ಫಾರೂಕ್, ಬಂಗ್ರಮAಜೇಶ್ವರ-ರತ್ನಾಕರನ್, 18-ಕೆಎಂಕೆ ಅಬ್ದುಲ್ ರಹ್ಮಾನ್ ಹಾಜಿ, …

ಪೊಲೀಸ್ ಜೀಪು ಅಪಘಾತ: ತಪ್ಪಿದ ದುರಂತ

ಕಾಸರಗೋಡು: ವಾಹನ ತಪಾಸಣೆ ನಡೆಸಿ ಠಾಣೆಗೆ ಮರಳುತ್ತಿದ್ದ ಪೊಲೀಸ್ ಜೀಪು ಅಪಘಾತಕ್ಕೀಡಾಗಿದೆ. ರಾಜಪುರಂ ಠಾಣೆಯ ವಾಹನ ನಿನ್ನೆ ರಾತ್ರಿ 9 ಗಂಟೆಗೆ ಮುಂಡೋಟ್ ಸೈಂಟ್ ಫಯಸ್ ಕಾಲೇಜು ಮುಂಭಾಗ ಅಪಘಾತ ಸಂಭವಿಸಿದೆ. ನಿಯಂತ್ರಣ ತಪ್ಪಿದ ಜೀಪು ಮೋರಿ ಸಂಕಕ್ಕೆ ಢಿಕ್ಕಿ ಹೊಡೆದ ಬಳಿಕ ರೋಡಿಗೆ ಮಗುಚಿ ಬಿದ್ದಿದೆ. ವಾಹನದಲ್ಲಿ ಸಿಐಪಿ ಪ್ರದೀಪ್ ಕುಮಾರ್, ಎಎಸ್‌ಐ ಮೋನ್ಸ್ ಎಂಬಿವರಿದ್ದರು. ಇವರು ಅದೃಷ್ಟವಶಾತ್ ಗಾಯಗಳಿಲ್ಲದೆ ಪಾರಾಗಿದ್ದಾರೆ.

ಚಿಪ್ಪಾರು ಶಾಲೆ ಬಳಿ ಅಪಾಯ ಆಹ್ವಾನಿಸುತ್ತಿದ್ದ ಮರ  ಕಡಿದು ತೆರವು: ದೂರವಾದ ಆತಂಕ

ಉಪ್ಪಳ:  ಮುರಿದು ಬೀಳಬಹುದಾದ ಮಾವಿನ ಬೃಹತ್ ಮರವನ್ನು ತೆರವುಗೊಳಿಸಲಾಗಿದೆ. ಪೈವಳಿಕೆ ಪಂಚಾಯತ್ ವ್ಯಾಪ್ತಿಯ ಲಾಲ್‌ಬಾಗ್-ಕುರುಡಪದವು ರಸ್ತೆಯ ಚಿಪ್ಪಾರು ಶಾಲೆ ಬಳಿಯಲ್ಲಿ ಅಪಾಯಕಾರಿಯಾಗಿ ಪರಿಣಮಿಸಬಹುದಾಗಿದ್ದ ಮರವನ್ನು ವಿದ್ಯುತ್ ಇಲಾಖೆ ತೆರವುಗೊಳಿಸಿದೆ. ಹೈಟೆನ್ಶನ್ ವಿದ್ಯುತ್ ತಂತಿ ಮೇಲೆ ಯಾವುದೇ ಕ್ಷಣ ಮುರಿದುಬಿದ್ದು ಅಪಾಯ ಸಂಭವಿಸಬಹುದು ಎಂಬ ಬಗ್ಗೆ ‘ಕಾರವಲ್’ ಪತ್ರಿಕೆಯಲ್ಲಿ ಸಚಿತ್ರ ವರದಿ  ಪ್ರಕಟಿಸಲಾಗಿತ್ತು. ಅಲ್ಲದೆ ಸ್ಥಳೀಯರು ವಿದ್ಯುತ್ ಇಲಾಖೆಗೆ ದೂರು ನೀಡಿದ್ದರು. ಈಗ ಈ ಮರವನ್ನು ಕಡಿದು ತೆರವುಗೊಳಿಸಲಾ ಗಿದ್ದು,  ಸ್ಥಳೀಯರ ಆತಂಕ ದೂರವಾಗಿದೆ.