ಮಂಡಲ ಅಧ್ಯಕ್ಷರ ವರ್ತನೆಯಿಂದ ಬೇಸತ್ತು ಬದಿಯಡ್ಕ ಪಂಚಾಯತ್ ಮುಸ್ಲಿಂ ಲೀಗ್ ಉಪಾಧ್ಯಕ್ಷ ರಾಜೀನಾಮೆ

ಬದಿಯಡ್ಕ: ಬದಿಯಡ್ಕ ಪಂಚಾಯತ್ ಮುಸ್ಲಿಂ ಲೀಗ್‌ನ ಸರ್ವಾಧಿಕಾರಕ್ಕೆ ಮನನೊಂದು ಹಾಗೂ ಮಂಡಲ ಅಧ್ಯಕ್ಷ ಮಾಹಿನ್ ಕೇಳೋಟ್‌ರ ವರ್ತನೆಯಿಂದ ಬೇಸತ್ತು ಮುಸ್ಲಿಂ ಲೀಗ್ ಪಂಚಾಯತ್ ಉಪಾಧ್ಯಕ್ಷ ಸ್ಥಾನ ಹಾಗೂ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವುದಾಗಿ  ಅಬ್ದುಲ್ ಹಮೀದ್ ಪಳ್ಳತ್ತಡ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮಂಡಲ ಅಧ್ಯಕ್ಷ ತನ್ನ ಆಸಕ್ತಿಗೆ ಅನುಸಾರವಾಗಿ ಕಾರ್ಯಾಚರಿಸುತ್ತಿದ್ದು, ಕಾರ್ಯಕರ್ತರು ಪಕ್ಷದಿಂದ ದೂರ ಉಳಿಯುತ್ತಿದ್ದಾರೆ. ತನ್ನ ಸ್ವಂತ ಲಾಭಕ್ಕಾಗಿ ಮಂಡಲ ಅಧ್ಯಕ್ಷ ಪಕ್ಷವನ್ನು ದುರುಪಯೋಗ ಮಾಡುತ್ತಿರುವುದಾಗಿ ಅಬ್ದುಲ್ ಹಮೀದ್ ದೂರಿದ್ದಾರೆ. ಹಳೆಯ 7ನೇ ವಾರ್ಡ್‌ನಿಂದ ಎರಡು …

ಚಿನ್ನಾಭರಣ ಲಪಟಾಯಿಸಲು ಪ್ರಿಯತಮನೊಂದಿಗೆ ಸೇರಿ ತಾಯಿಯನ್ನು ಕೊಲೆಗೈದ ಪುತ್ರಿ

ತೃಶೂರು: ತಾಯಿಯ ಚಿನ್ನಾಭರಣಗಳನ್ನು ಲಪಟಾಯಿಸಲು ಮಗಳು ತನ್ನ ಪ್ರಿಯತಮನೊಂದಿಗೆ ಸೇರಿ ತಾಯಿಯನ್ನು ಕೊಲೆಗೈದ ಘಟನೆ  ನಡೆದಿದೆ. ತೃಶೂರು ಮುಂ ಡೂರು ನಿವಾಸಿ ತಂಗಮಣಿ (75) ಕೊಲೆಗೀಡಾಗಿದ್ದು, ಈ ಸಂಬಂಧ ಮಗಳು ಸಂಧ್ಯ (45), ಈಕೆಯ ಪ್ರಿಯತಮ ನಿತಿನ್ (27) ಎಂಬಿವರನ್ನು  ಪೊಲೀಸರು ಬಂಧಿಸಿದ್ದಾರೆ. ತಂಗಮಣಿಯ ಚಿನ್ನಾಭರಣ ಗಳನ್ನು ಲಪಟಾಯಿಸಲು ಮಗಳು ಪ್ರಿಯತ ಮನೊಂದಿಗೆ ಸೇರಿ ಈ ಕೃತ್ಯವೆ ಸಗಿದ್ದಾ ಳೆಂದು ಪೊಲೀಸರು ತಿಳಿಸಿದ್ದಾರೆ. ಕಳೆದ ಶನಿವಾರ ಬೆಳಿಗ್ಗೆ  ತಂಗಮ ಣಿಯನ್ನು ಕೊಲೆಗೈಯ್ಯಲಾಗಿದೆ. ಅಂದು ರಾತ್ರಿ ಹಿತ್ತಿಲಲ್ಲಿ ಮೃತದೇಹ …

ಸಂಚರಿಸುತ್ತಿದ್ದ ಲಾರಿ ಬೆಂಕಿಗಾಹುತಿ ಚಾಲಕ ಅಪಾಯದಿಂದ ಪಾರು

ಕಾಸರಗೋಡು: ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಮೀನು ಲಾರಿಗೆ ಬೆಂಕಿ ಹತ್ತಿಕೊಂಡ ಘಟನೆ ನಡೆದಿದೆ. ಪೆರಿಯಾ ಕೇರಳ ಕೇಂದ್ರ ವಿಶ್ವವಿದ್ಯಾಲಯ ಸಮೀಪ ನಿನ್ನೆ ಮಧ್ಯಾಹ್ನ ಘಟನೆ ನಡೆದಿದೆ. ಕಾಞಂಗಾಡ್‌ನಿಂದ  ಎರಡು ಘಟಕ ಅಗ್ನಿಶಾಮಕದಳ ಸ್ಥಳಕ್ಕೆ ತಲುಪಿ ಬೆಂಕಿ ನಂದಿಸಿದೆ. ಪೊನ್ನಾನಿಯಿಂದ ಮಂಗಳೂರು ಭಾಗಕ್ಕೆ ಮೀನು ಸಾಗಿಸುತ್ತಿದ್ದ ಲಾರಿಗೆ ಬೆಂಕಿ ಹತ್ತಿಕೊಂ ಡಿದೆ.   ಲಾರಿಗೆ ಬೆಂಕಿ ಹತ್ತಿಕೊಂಡಿರು ವುದನ್ನು ಕಂಡ ಚಾಲಕ ಕರ್ನಾಟಕದ ಕುಂದಾಪುರ ನಿವಾಸಿ ಮುಹಸಿನ್ ಕೂಡಲೇ ಲಾರಿಯನ್ನು ನಿಲ್ಲಿಸಿ ಹೊರಗಿಳಿದು ಓಡಿದುದರಿಂದ ಅಪಾಯದಿಂದ ಪಾರಾಗಿದ್ದಾನೆ. ಇಂಜಿನ್ ಬಿಸಿಯಾ …

ಕುಬಣೂರು ನಿವಾಸಿ ಸಹಿತ ಮೂವರು ವಾಹನ ಕಳವು ತಂಡದ ಸೆರೆ: ತನಿಖೆ ಕಾಸರಗೋಡಿಗೆ

ಕಾಸರಗೋಡು: ಕುಬಣೂರು ಹಾಗೂ ಚೆರ್ವತ್ತೂರು ನಿವಾಸಿಗಳು ಸಹಿತ ಮೂವರು ಅಂತಾರಾಜ್ಯ ವಾಹನ ಕಳ್ಳರು ಎರ್ನಾಕುಳಂನಲ್ಲಿ ಸೆರೆಗೀಡಾಗಿದ್ದು, ಈ ಸಂಬಂಧ ತನಿಖೆಯನ್ನು ಕಾಸರಗೋಡಿಗೆ ವಿಸ್ತರಿ ಸಲಾಗಿದೆ.  ಬೇಕೂರು ಕುಬಣೂರಿನ ಕೆ.ಪಿ. ಅಬೂಬಕ್ಕರ್ ಸಿದ್ದಿಕ್ (41), ಚೆರ್ವತ್ತೂರು ಕೋರಪರಂಬಿಲ್‌ನ ಸಿದ್ದಿಕ್ (48), ಕಣ್ಣೂರು ಮಾಡಾಯಿ ಕಿನಾಕುಳಿಲ್ ಶಾಜಿದ್ ಯಾನೆ ಸೋಡಾಬಾಬು (47)ಎಂಬಿವರನ್ನು ಪನಂಗಾಡ್ ಪೊಲೀಸ್ ಇನ್‌ಸ್ಪೆಕ್ಟರ್ ವಿಪಿನ್‌ದಾಸ್ ಬಂಧಿಸಿದ್ದರು. ಸಿದ್ದಿಕ್ ವಿರುದ್ದ ಕೇರಳ ಹಾಗೂ ತಮಿಳುನಾಡಿನ ಮೇಟುಪಾಳಯಂ, ನಾಮಕ್ಕಲ್ ಎಂಬಿಡೆಗಳಲ್ಲಿ ದರೋಡೆ ಸಹಿತ 25 ಕೇಸುಗಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಅಬೂಬ …

ಪ್ರತಾಪನಗರ: ಹದಗೆಟ್ಟ ರಸ್ತೆಯಲ್ಲಿ ಶೋಚನೀಯ ಸಂಚಾರ; ದುರಸ್ತಿಗೆ ಆಗ್ರಹ

ಉಪ್ಪಳ: ಮಂಗಲ್ಪಾಡಿ ಪಂಚಾ ಯತ್ ವ್ಯಾಪ್ತಿಯ ಲೋಕೋಪಯೋಗಿ ಇಲಾಖೆಗೆ ಸೇರಿದ ಸೋಂಕಾಲು-ಪ್ರತಾಪನಗರ ರಸ್ತೆ ಹದಗೆಟ್ಟು ಶೋಚನಿ ಯಾವಸ್ಥೆಯಿಂದ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿರುವುದಾಗಿ ನಾಗರಿಕರು ದೂರಿದ್ದಾರೆ. ಹೊಂಡ ಗಳಲ್ಲಿ ಮಳೆ ನೀರು ಸಂಗ್ರಹಗೊಳ್ಳುವು ದರಿಂದ ಸಂಚಾರದ ವೇಳೆ ದ್ವಿಚಕ್ರ, ತ್ರಿಚಕ್ರ ವಾಹನಗಳು ಹೊಂಡದಲ್ಲಿ ಸಿಲುಕಿ ಹಾನಿಗೀಡಾಗುತ್ತಿರುವ ಬಗ್ಗೆ ದೂರಲಾಗುತ್ತಿದೆ. ಶಿಶು ಮಂದಿರ ಹಾಗೂ ಬೀಟಿಗದ್ದೆ ಪರಿಸರದಲ್ಲಿ ಶೋಚನೀಯವಸ್ಥೆಗೆ ತಲುಪಿದ ರಸ್ತೆಯಲ್ಲಿ ಒಂದೂವರೆ ತಿಂಗಳ ಹಿಂದೆ ಜಲ್ಲಿಕಲ್ಲುಗಳನ್ನು ತಂದು ಹಾಸಿ ದ್ದಾರೆ. ಆದರೆ ಅದನ್ನು ಸಮತಟ್ಟು, ಡಾಮಾರೀಕರಣ ನಡೆಸಲಿಲ್ಲ. …

ಕೌಟುಂಬಿಕ ಸಮಸ್ಯೆ: ಸಹೋದರನನ್ನು ಇರಿದು ಕೊಲೆಗೈದ ಅಣ್ಣ

ಮಲಪ್ಪುರಂ:  ಕೌಟುಂಬಿಕ ವಿವಾದದಿಂದ  ಸಹೋದರನೋರ್ವ ತಮ್ಮನನ್ನು ಇರಿದು ಕೊಲೆಗೈದ ಘಟನೆ ಪೂಕೋಟೂರು ಪಳ್ಳಿಮುಖ್ ಎಂಬಲ್ಲಿ ನಡೆದಿದೆ. ಇಲ್ಲಿನ ಅಮೀರ್ (26) ಸಾವಿಗೀಡಾದ ವ್ಯಕ್ತಿ. ಘಟನೆಗೆ ಸಂಬಂಧಿಸಿ ಸಹೋದರ ಜುನೈದ್ (28)ನನ್ನು ಮಂಜೇರಿ ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಇಂದು ಮುಂಜಾನೆ 5 ಗಂಟೆ ವೇಳೆ ಈ ಭೀಕರ ಕೊಲೆಕೃತ್ಯ ನಡೆದಿದೆ. ಮನೆಯಲ್ಲಿ ಇವರಿಬ್ಬರು ಮಾತ್ರವೇ ಇದ್ದರು. ಇವರ ಮಧ್ಯೆ ವಾಗ್ವಾದವುಂಟಾಗಿದ್ದು, ಈ ಮಧ್ಯೆ  ಜುನೈದ್ ಚಾಕುವಿನಿಂದ ಇರಿದು ಅಮೀರ್‌ನನ್ನು ಕೊಲೆಗೈದಿ ದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಮನೆಯ ಆರ್ಥಿಕ ಸಮಸ್ಯೆಗಳು …

ಕೊಳಚೆ ಹೊಂಡಕ್ಕೆ ಬಿದ್ದ ಗರ್ಭಿಣಿ ಹಸುವಿನ ಪ್ರಾಣ ರಕ್ಷಿಸಿದ ಅಗ್ನಿಶಾಮಕದಳ

ನೀರ್ಚಾಲು: ಹುಲ್ಲು ಮೇಯುತ್ತಿದ್ದ ವೇಳೆ ಗರ್ಭಿಣಿ ಹಸುವೊಂದು   ಕೊಳಚೆ ಹೊಂಡಕ್ಕೆ ಬಿದ್ದಿದ್ದು ಅಗ್ನಿಶಾಮಕದಳ ಮೇಲಕ್ಕೆತ್ತಿ ಅದರ ಪ್ರಾಣ ರಕ್ಷಿಸಿದ ಘಟನೆ ನಿನ್ನೆ ಬೇಳದಲ್ಲಿ ನಡೆದಿದೆ.  ಬೇಳದ  ಅಬ್ದುಲ್ ಖಾದರ್ ಎಂಬವರ ಹಿತ್ತಿಲಲ್ಲಿರುವ  ಸುಮಾರು 6 ಅಡಿ ಆಳದ ಕೊಳಚೆ ಹೊಂಡಕ್ಕೆ ಗರ್ಭಿಣಿ ಹಸು  ನಿನ್ನೆ   ಜಾರಿ ಬಿದ್ದಿದೆ. ಅದನ್ನು ಮೇಲಕ್ಕೆತ್ತಲು ಸ್ಥಳೀಯರು ಭಾರೀ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಕೊನೆಗೆ ಊರವರು ನೀಡಿದ ಮಾಹಿತಿಯಂತೆ ಅಸಿಸ್ಟೆಂಟ್ ಸ್ಟೇಶನ್ ಆಫೀಸರ್ ಆರ್. ವಿನೋದ್ ಕುಮಾರ್ ನೇತೃತ್ವದ ಕಾಸರಗೋಡು ಅಗ್ನಿಶಾಮಕದಳ ತಲುಪಿ  ಕ್ಯಾನ್‌ವಾಸ್ …

ಸ್ಥಳೀಯಾಡಳಿತ ಚುನಾವಣೆ: ಸ್ಪಷ್ಟಗೊಂಡ ಚುನಾವಣಾ ಚಿತ್ರಣ; ಇನ್ನುಅಬ್ಬರದ ಪ್ರಚಾರ  ದಿನಗಳು

ಕಾಸರಗೋಡು: ರಾಜ್ಯದಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಡಿಸೆಂಬರ್ 9 ಮತ್ತು 11ರಂದು ನಡೆಯಲಿರುವ ಚುನಾವಣೆಗಿರುವ ನಾಮಪತ್ರ ಸಲ್ಲಿಕೆ, ಅವುಗಳ ಸೂಕ್ಷ್ಮ ಪರಿಶೀಲನೆ ನಡೆದ ಬಳಿಕ ನಾಮಪತ್ರಗಳ ಹಿಂತೆಗೆತ ಪ್ರಕ್ರಿಯೆ ನಿನ್ನೆ ಪೂರ್ಣಗೊಂಡಿತು. ಬಳಿಕ ಸ್ಪರ್ಧಾಕಣದಲ್ಲಿ ಉಳಿದಿರುವ ಅಭ್ಯರ್ಥಿಗಳ ಸ್ಪಷ್ಟ ಚಿತ್ರಣ ಬಹಿರಂಗಗೊAಡಿದ್ದು, ಅದರ ಬೆನ್ನಲ್ಲೇ ಅಬ್ಬರದ ಪ್ರಚಾರವೂ ಆರಂಭಗೊAಡಿತು.ಕಾಸರಗೋಡು ಜಿಲ್ಲೆಯಲ್ಲಿ ಒಟ್ಟು 2786 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. ಇದರಲ್ಲಿ 1432 ಮಹಿಳೆಯರು ಮತ್ತು 1359 ಪುರುಷ ಅಭ್ಯರ್ಥಿಗಳಾಗಿದ್ದಾರೆ. ಕಾಸರಗೋಡು, ಕಣ್ಣೂರು, ವಯನಾಡು, ಕಲ್ಲಿಕೋಟೆ, ಮಲಪ್ಪುರಂ, ಪಾಲಕ್ಕಾಡ್, ತೃಶೂರು ಜಿಲ್ಲೆಗಳಲ್ಲಿ …

ಬೆದರಿಕೆಯೊಡ್ಡಿ ಚುನಾವಣೆಯಲ್ಲಿ ಜಯಗಳಿಸಲು ಸಿಪಿಎಂ ಯತ್ನ- ಎಂ.ಎಲ್. ಅಶ್ವಿನಿ

ಕಾಸರಗೋಡು: ಬೆದರಿಕೆಯೊಡ್ಡಿ ಚುನಾವಣೆಯಲ್ಲಿ ಜಯಗಳಿಸಲು ಸಿಪಿಎಂ ಯತ್ನಿಸುತ್ತಿದೆ ಎಂದು ಆದರೆ ಅಭಿವೃದ್ಧಿಯ ಭರವಸೆ ನೀಡಿ ಬಿಜೆಪಿ ಜನರನ್ನು ಸಮೀಪಿಸುತ್ತಿರುವುದಾಗಿ ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ನುಡಿದರು. ಮಡಿಕೈ, ಬೇಡಡ್ಕ ಮೊದಲಾದ ಪಂಚಾಯತ್‌ಗಳಲ್ಲಿ ಅಭ್ಯರ್ಥಿಗಳಿಗೆ ಬೆದರಿಕೆಯೊಡ್ಡಿ ಹಿಂಜರಿಸಲು ಸಾಧ್ಯವಾಗದ ಕಾರಣ ಅವರನ್ನು ನಿರ್ದೇಶಿಸಿದ ವ್ಯಕ್ತಿಗಳಿಗೆ ಸಿಪಿಎಂ ಬೆದರಿಕೆಯೊಡ್ಡುತ್ತಿದೆ. ಈ ಬೆದರಿಕೆಯನ್ನು ಹಿಮ್ಮೆಟ್ಟಿಸಿ ವಿರೋಧ ಪಕ್ಷ ಕೂಡಾ ಇಲ್ಲದ ಬೇಡಡ್ಕ ಪಂಚಾಯತ್‌ನಲ್ಲಿ ಇತಿಹಾಸದಲ್ಲೇ ಪ್ರಥಮವಾಗಿ ಎಲ್ಲಾ ವಾರ್ಡ್‌ಗಳಲ್ಲೂ ಬಿಜೆಪಿ ತೀವ್ರ ಸ್ಪರ್ಧೆ ಒಡ್ಡಲಿದೆ ಎಂದರು. ಪಿಣರಾಯಿ ವಿಜಯನ್‌ರ ಭ್ರಷ್ಟಾಚಾರ ಆಡಳಿತ, …

ಹೋಟೆಲ್ ವ್ಯಾಪಾರಿ ನಿಧನ

ಉಪ್ಪಳ: ಉಪ್ಪಳ  ಕ್ಯಾನ್ಸರ್ ಕೇರ್ ಫೌಂಡೇಶನ್‌ನ ಚೆಯರ್ ಮೆನ್ ಹಾಗೂ ಮುಂಬೈಯಲ್ಲಿ ಹೋಟೆಲ್ ವ್ಯಾಪಾರಿಯಾಗಿದ್ದ ಪ್ರಮುಖ ಜೀವ ಕಾರುಣ್ಯ ಕಾರ್ಯ ಕರ್ತನಾದ ಉಪ್ಪಳ ಬಪ್ಪಾಯಿತೊಟ್ಟಿ ನಿವಾಸಿ ಮುಹಮ್ಮದ್ ಮೊಯ್ದೀನ್ ಹಿಂದುಸ್ಥಾನ್   (75) ನಿಧನ ಹೊಂದಿದರು.  ಬಾಂಬೆ ಕೇರಳ ಮುಸ್ಲಿಂ ಜಮಾ ಯತ್ ಮಾಜಿ ಕೌನ್ಸಿಲ್ ಸದಸ್ಯನೂ, ಮುಂಬೈಯ ಹಿಂದೂಸ್ಥಾನ್ ರೆಸ್ಟೋರೆಂಟ್‌ನ ಮಾಲಕನಾಗಿದ್ದರು. ಮೃತರು ಪತ್ನಿ ಆಸ್ಯಮ್ಮ, ಮಕ್ಕಳಾದ  ನೂರ್‌ಜಹಾನ್, ಫೈರೂಸ್, ಯಾಸಿರ್, ಅಳಿಯ ಖಲೀಲ್ ಕಲ್ಲಟ್ರ, ಸಹೋದರ ಸಿದ್ದಿಕ್, ಸಹೋದರಿಯರಾದ ಆಯಿಶ, ಬೀಫಾತಿಮ ಹಾಗೂ ಅಪಾರ ಬಂಧು-ಮಿತ್ರರನ್ನು …