ಸ್ಥಳೀಯಾಡಳಿತ ಚುನಾವಣೆ: ಜಿಲ್ಲಾ ಪಂಚಾಯತ್ನ 18 ಡಿವಿಶನ್ಗಳಿಗೆ 62 ಮಂದಿ ಅಭ್ಯರ್ಥಿಗಳು

ಕಾಸರಗೋಡು: ಸ್ಥಳೀಯಾಡಳಿತ ಚುನಾವಣೆಗಿರುವ ನಾಮಪತ್ರ ಹಿಂತೆಗೆಯಲಿರುವ ಕೊನೆಯ ದಿನಾಂಕ ನಿನ್ನೆ ಸಂಜೆ ಕೊನೆಗೊಂಡಾಗ ಜಿಲ್ಲಾ ಪಂಚಾಯತ್ನ 18 ಡಿವಿಶನ್ಗಳಿಗೆ 62 ಮಂದಿ ಅಭ್ಯರ್ಥಿಗಳು ಸ್ಪರ್ಧಾಕಣದಲ್ಲಿದ್ದಾರೆ. ಒಟ್ಟು 91 ಮಂದಿ ನಾಮಪತ್ರ ಸಲ್ಲಿಸಿದ್ದರು. 29 ಮಂದಿ ಹಿಂತೆಗೆದರು.ಮಂಜೇಶ್ವರ ಬ್ಲೋಕ್ ಪಂಚಾ ಯತ್ನ 16 ಡಿವಿಶನ್ಗಳಿಗೆ 57 ಅಭ್ಯರ್ಥಿಗಳು ಸ್ಪರ್ಧಾಕಣದಲ್ಲಿದ್ದಾರೆ. 77 ಮಂದಿ ನಾಮಪತ್ರ ಸಲ್ಲಿಸಿದ್ದು, 20 ಮಂದಿ ಹಿಂತೆಗೆದಿದ್ದಾರೆ. ಇದೇ ರೀತಿ ಕಾಸರಗೋಡು ಬ್ಲೋಕ್ ಪಂಚಾಯ ತ್ನ 18 ಡಿವಿಶನ್ಗಳಿಗೆ 63 ಮಂದಿ ಸ್ಪರ್ಧಿಸುತ್ತಿದ್ದಾರೆ. 86 ಮಂದಿ ನಾಮಪತ್ರ …

ಮಾಜಿ ಗಲ್ಫ್ ಉದ್ಯೋಗಿ ನಿಧನ

ಕುಂಬಳೆ: ಮಾಟೆಂಗುಳಿ ನಿವಾಸಿ  ಕುಂಞಿಮಾಹಿನ್ ಕುಟ್ಟಿ (79) ನಿಧನಹೊಂದಿದರು.  ಇವರು ಮಾಜಿ ಗಲ್ಫ್ ಉದ್ಯೋಗಿಯಾಗಿದ್ದಾರೆ.  ಮೃತರು ಪತ್ನಿ ಫಾತಿಬಿ, ಮಕ್ಕಳಾದ ಅಸ್ಲಾಂ, ರಹೀಂ, ರಿಫಾಯಿ, ಸೊಸೆಯಂದಿರಾದ ಸರೀನ, ರೌಲ, ಇರ್ಫಾನ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಇಂದು ಕುಂಬಳೆ ಬದರ್ ಜುಮಾ ಮಸೀದಿ ಬಳಿ ನಡೆಯಿತು.

ಚುನಾವಣೆ ಪ್ರಕ್ರಿಯೆಯಲ್ಲಿ ಕನ್ನಡಕ್ಕೆ ಅವಗಣನೆ: ಮಾಹಿತಿ ಹಕ್ಕು ಕಾರ್ಯಕರ್ತ ಆರೋಪ

ಕುಂಬಳೆ: ತ್ರಿಸ್ತರ ಪಂಚಾಯತ್‌ಗಳಿಗೆ ಸ್ಪರ್ಧಿಸುವ ಭಾಷಾ ಅಲ್ಪಸಂಖ್ಯಾತರಾದ ಅಭ್ಯರ್ಥಿಗಳೊಂದಿಗೆ ತಾರತಮ್ಯ ನೀತಿ ತೋರಿಸುತ್ತಿರುವುದಾಗಿ ಕುಂಬಳೆಯ ಮಾಹಿತಿ ಹಕ್ಕು ಕಾರ್ಯಕರ್ತ ಎನ್. ಕೇಶವ ನಾಯ್ಕ್ ಕುಂಬಳೆಯಲ್ಲಿ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಅಭಿಪ್ರಾಯಪಟ್ಟರು. ಕನ್ನಡ ಭಾಷೆ ತಿಳಿದಿರುವ ಅಭ್ಯರ್ಥಿಗಳು ಮಲೆಯಾಳದಲ್ಲಿರುವ ನಾಮಪತ್ರಿಕೆಯ ಸತ್ಯಪ್ರತಿಜ್ಞೆಯನ್ನು ಹೇಗೆ ಹೇಳುವುದೆಂದು ಸಂಬಂಧಪಟ್ಟ ಅಧಿಕಾರಿಗಳು ಸ್ಪಷ್ಟಪಡಿಸಬೇಕೆಂದು ಅವರು ಆಗ್ರಹಿಸಿದರು. ಈ ಬಗ್ಗೆ ಹಲವು ಕಡೆಗಳಲ್ಲಿ ವಾಗ್ವಾದಗಳು ಉಂಟಾಗಿವೆ. ಜಿಲ್ಲಾ ಪಂಚಾಯತ್‌ಗೆ ನಾಮಪತ್ರ ಸಲ್ಲಿಸಿದ ಕೇಶವ ನಾಯ್ಕ್ ಮಲಯಾಳ ತಿಳಿದಿಲ್ಲವೆಂದು ತಿಳಿಸಿ ಪ್ರತಿಭಟಿಸಿದ ಹಿನ್ನೆಲೆಯಲ್ಲಿ ಕನ್ನಡದಲ್ಲಿರುವ ಪ್ರಮಾಣವಚನ ಪ್ರತಿಯನ್ನು …

ಸ್ಥಳೀಯಾಡಳಿತ ಚುನಾವಣೆ ಸ್ವೀಕೃತಿ-ವಿತರಣೆ ಕೇಂದ್ರಗಳ ಘೋಷಣೆ

ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಯಲ್ಲಿ ಸ್ವೀಕೃತಿ, ವಿತರಣೆ ಕೇಂದ್ರಗಳನ್ನು ತೀರ್ಮಾನಿಸಲಾಯಿತು. ಕಾಸರಗೋಡು ಬ್ಲೋಕ್ ಪಂಚಾಯತ್‌ನ ಅಡಿಯಲ್ಲಿ ಬರುವ ಗ್ರಾಮ ಪಂಚಾಯತ್‌ಗಳಿಗೆ (ಕುಂಬಳೆ, ಮೊಗ್ರಾಲ್ ಪುತ್ತೂರು, ಮಧೂರು, ಚೆಮ್ನಾಡ್, ಚೆಂಗಳ,ಬದಿಯಡ್ಕ) ಸರಕಾರಿ ಕಾಲೇಜು ಕಾಸರಗೋಡು, ವಿದ್ಯಾನಗರ ಪೂರ್ವ ಪಶ್ಚಿಮದಲ್ಲಿರುವ ಪ್ರಧಾನ ಕಟ್ಟಡದ ಕೆಳ ಅಂತಸ್ತು, ಇತರ ಕಟ್ಟಡಗಳು ಸ್ವೀಕೃತಿ, ವಿತರಣೆ ಕೇಂದ್ರವಾಗಿ ಮಂಜೂರು ಮಾಡಲಾಗಿದೆ. ಕಾಞಂಗಾಡ್ ಬ್ಲೋಕ್ ಪಂಚಾಯತ್‌ನ ಗ್ರಾಮ ಪಂಚಾಯತ್‌ಗಳಿಗೆ ಕಾಞಂಗಾಡ್ ದುರ್ಗಾ ಹೈಯರ್ ಸೆಕೆಂಡರಿ ಶಾಲೆ, ಕಾರಡ್ಕ ಬ್ಲೋಕ್ ಪಂ. ವ್ಯಾಪ್ತಿಯ ಗ್ರಾಮ ಪಂಚಾಯತ್‌ಗಳಿಗೆ (ಕುಂಬ್ಡಾಜೆ, …