ಚುನಾವಣೆ ವೇಳೆ ಹಲವೆಡೆಗಳಲ್ಲಿ ಘರ್ಷಣೆ: ಮಂಗಲ್ಪಾಡಿಯಲ್ಲಿ ಬೂತ್ ಏಜೆಂಟ್‌ಗಳ ಮಧ್ಯೆ ವಿವಾದ; ಹೊಡೆದಾಟ ತಡೆದ ಪೊಲೀಸ್

ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳಿಗೆ ನಿನ್ನೆ ನಡೆದ ಚುನಾವಣೆ ಬಹುತೇಕ ಶಾಂತಿಯುತವಾಗಿ ನಡೆದಿದೆ. ಕೆಲವೆಡೆಗಳಲ್ಲಿ ಸಣ್ಣಪುಟ್ಟ ಘರ್ಷಣೆ ಉಂಟಾಗಿದೆ. ಮಂಗಲ್ಪಾಡಿ ಪಂಚಾಯತ್‌ನ ಎರಡನೇ ವಾರ್ಡ್‌ನ ಮತಗಟ್ಟೆಯೊಳಗೆ ಹಾಗೂ ಹೊರಗೆ ಎರಡು ತಂಡಗಳ ಮಧ್ಯೆ ನಿನ್ನೆ ಘರ್ಷಣೆ ಹುಟ್ಟಿಕೊಂಡಿದ್ದು ಪೊಲೀಸರು ತಕ್ಷಣ ನಡೆಸಿದ ಮಧ್ಯಪ್ರವೇಶದಿಂದ ಪರಿಸ್ಥಿತಿಯನ್ನು ಹತೋಟಿಗೆ ತರಲಾಯಿತು. ಎರಡನೇ ವಾರ್ಡ್‌ನ ಎರಡನೇ ಮತಗಟ್ಟೆಯಲ್ಲಿ ಸಂಜೆ ೫.೩೦ರ ವೇಳ ಮತ ಚಲಾಯಿಸಲು ಬಂದ  ಓರ್ವ ಮತದಾರನ ಹೆಸರಿಗೆ ಸಂಬಂಧಿಸಿ ಮುಸ್ಲಿಂ ಲೀಗ್ ಹಾಗೂ ಎಡರಂಗದ ಸ್ವತಂತ್ರ ಅಭ್ಯರ್ಥಿಯ ಮತ ಏಜೆಂಟ್‌ಗಳ …

ಪತಿ ಮನೆಯಲ್ಲಿ ಯುವತಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಉಪ್ಪಳ: ಉಪ್ಪಳ ಸೋಂಕಾಲ್ ನಲ್ಲಿರುವ ಪತಿ ಮನೆಯಲ್ಲಿ ಯುವತಿಯೋರ್ವೆ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ ಯಾಗಿದ್ದಾರೆ. ಕೊಡಂಗೆ ರಸ್ತೆಯ ಮೊಯ್ದೀನ್ ಸವಾದ್‌ರ ಪತ್ನಿ ಫಾತಿಮತ್ ನಸ್‌ಬೀನ (25) ಮೃತಪಟ್ಟ ಯುವತಿ. ನಿನ್ನೆ ಸಂಜೆ ಮನೆಯ ಬೆಡ್‌ರೂಂನ ಕಿಟಿಕಿ ಸರಳಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಯುವತಿಯನ್ನು ಕೂಡಲೇ ಮಂಗಳೂರಿನ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸ ಲಾಗಲಿಲ್ಲ.  ಘಟನೆ ಬಗ್ಗೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಆತ್ಮಹತ್ಯೆಗೈಯ್ಯಲು ಕಾರಣವೇನೆಂದು ತಿಳಿದು ಬಂದಿಲ್ಲ. ಯಾವುದೋ ಮನೋವ್ಯಥೆಯಿಂದ …

ಸ್ಥಳೀಯಾಡಳಿತ ಚುನಾವಣೆ ಮತ ಎಣಿಕೆ ನಾಳೆ: ಎಲ್ಲರಲ್ಲೂ ಸೋಲು-ಗೆಲುವಿನ ಲೆಕ್ಕಾಚಾರ

ಕಾಸರಗೋಡು: ರಾಜ್ಯದ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಈತಿಂಗಳ ೯ ಮತ್ತು ನಿನ್ನೆ ಎಂಬೀ ಎgಡು ಹಂತಗಳಲ್ಲಾಗಿ ನಡೆದ ಚುನಾವಣೆಯ ಮತ ಎಣಿಕೆ ನಾಳೆ ಬೆಳಿಗ್ಗೆ ೮ ಗಂಟೆಗೆ ಆರಂಭಗೊಳ್ಳಲಿದೆ. ಮತ ಎಣಿಕೆ ಮುನ್ನಡೆಗಳ ಸೂಚನೆಗಳು ಪ್ರತೀ ಅರ್ಧ ತಾಸಿಗಳಿಗೊಮ್ಮೆಹೊರಬರಲಿದೆ. ಇದರಂತೆ ಕಾಸರಗೋಡು ಜಿಲ್ಲೆಯ ೮ ಸೇರಿದಂತೆ ರಾಜ್ಯದಲ್ಲಿ ಒಟ್ಟಾರೆಯಾಗಿ ೨೪೪ ಕೇಂದ್ರಗಳಲ್ಲಿ ಮತ ಎಣಿಕೆ ನಡೆಯಲಿದೆ. ಇದರಂತೆ ಕಾಸರಗೋಡು ಜಿಲ್ಲೆಯ ವರ್ಕಾಡಿ, ಪೈವಳಿಕೆ, ಮೀಂಜ, ಪುತ್ತಿಗೆ, ಮಂಗಲ್ಪಾಡಿ, ಎಣ್ಮಕಜೆ,  ಮಂಜೇಶ್ವರ ಗ್ರಾಮ ಪಂಚಾಯತ್ ಮತ್ತು ಮಂಜೇಶ್ವರ  ಬ್ಲೋಕ್ ಪಂಚಾಯತ್‌ನ …

ಪುತ್ತಿಗೆಯಲ್ಲಿ ನಕಲಿ ಮತ ಚಲಾಯಿಸಲೆತ್ನಿಸಿದ ವ್ಯಕ್ತಿ ಸೆರೆ: ಆರೋಪಿಯನ್ನು ಪ್ರಕರಣದಿಂದ ಹೊರತುಪಡಿಸುವಂತೆ ಸಿಪಿಎಂ ಒತ್ತಡ

ಕುಂಬಳೆ: ನಿನ್ನೆ ನಡೆದ  ಸ್ಥಳೀಯಾಡಳಿತ ಚುನಾವಣೆ ವೇಳೆ ಪುತ್ತಿಗೆಯಲ್ಲಿ ನಕಲಿ ಮತ ಚಲಾಯಿಸಲೆತ್ನಿಸಿದ ಓರ್ವ ಸೆರೆಗೀಡಾಗಿದ್ದಾನೆ. ಮಂಗಲಡ್ಕ ನಿವಾಸಿ ಸಹದ್ ಎಂಬಾತ ಸೆರೆಗೀಡಾದ ವ್ಯಕ್ತಿಯೆಂದು ಕುಂಬಳೆ ಪೊಲೀಸರು ತಿಳಿಸಿದ್ದಾರೆ. ನಿನ್ನೆ ಸಂಜೆ 5.50 ರ ವೇಳೆ ಪುತ್ತಿಗೆ ಪಂಚಾಯತ್‌ನ  ಚೆನ್ನಿಕ್ಕೋಡಿ ಒಂದನೇ ವಾರ್ಡ್  ಮತಗಟ್ಟೆಯಾದ ಧರ್ಮತ್ತಡ್ಕ ಶಾಲೆಯಲ್ಲಿ ಸಹದ್ ನಕಲಿ ಮತ ಚಲಾಯಿಸಲೆತ್ನಿಸಿದ್ದಾನೆ. ಮತದಾನ ಕೊನೆಗೊಳ್ಳಲು 10 ನಿಮಿಷ ಮಾತ್ರವೇ ಬಾಕಿಯಿರುವಾಗ ಮತಗಟ್ಟೆಗೆ ತಲುಪಿದ ಸಹದ್ ಮತ ಚಲಾಯಿಸಲು ಯತ್ನಿಸಿದ್ದನು. ಈತ ಮತ ಚಲಾಯಿ ಸಲು  ಬೇರೆ …

ಖ್ಯಾತ ಕಬಡ್ಡಿ ಪಟು ಪೈಕ ನಿವಾಸಿ ರವಿಕಿರಣ್ ನಿಧನ

ಎಡನೀರು: ಖ್ಯಾತ ಕಬಡ್ಡಿ ಪಟು ಪೈಕ ಮೂಲಡ್ಕದ ರವಿಕಿರಣ್ (44) ಕುಸಿದು ಬಿದ್ದು ನಿಧನ ಹೊಂದಿದರು. ನಿನ್ನೆ ಸಂಜೆ ಮನೆಯಲ್ಲಿ ಕುಸಿದು ಬಿದ್ದ ಇವರನ್ನು ಕೂಡಲೇ ಚೆಂಗಳದ ಸಹಕಾರಿ ಆಸ್ಪತ್ರೆಗೆ ಕೊಂಡೊಯ್ಯ ಲಾಯಿತಾದರೂ ಜೀವ ಉಳಿ ಸಲು ಸಾಧ್ಯವಾಗಲಿಲ್ಲ. ದಿ| ಜೆ.ಕೆ. ಕೋರನ್- ಪ್ರೇಮಲತ ದಂಪತಿ ಪುತ್ರನಾಗಿದ್ದಾರೆ. ಮೃತರು ತಾಯಿ, ಪತ್ನಿ ಉಷಾ, ಪುತ್ರಿ ವಿದ್ಯಾಕಿರಣ್, ಸಹೋದರ ರಾಜಮೋಹನ್, ಸಹೋದರಿ ಅನುಪಮ, ಅಳಿಯ ರವಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇವರ ಆಕಸ್ಮಿಕ ನಿಧನ ನಾಡಿನಲ್ಲಿ ಶೋಕಸಾಗರ …

ನಗರದಲ್ಲಿ ಸಂಚರಿಸುತ್ತಿದ್ದ ಕಾರಿಗೆ ಬೆಂಕಿ: ಚಾಲಕ ಪಾರು

ಕಾಸರಗೋಡು: ಸಂಚರಿಸುತ್ತಿದ್ದ  ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಚಾಲಕ ಅದೃಷ್ಟವಶಾತ್ ಸಂಭಾವ್ಯ ಅನಾಹುತದಿಂದ ಪಾರಾದ ಘಟನೆ ನಗರದ ಪ್ರೆಸ್ ಕ್ಲಬ್ ಜಂಕ್ಷನ್ ಬಳಿ ಇಂದು ಮುಂಜಾನೆ 4 ಗಂಟೆಗೆ ನಡೆದಿದೆ. ಚೆರ್ಕಳ ನಿವಾಸಿ ಅಬ್ದುಲ್ಲ ಎಂಬವರು ಕಾರಿನಲ್ಲಿ ಕಾಸರಗೋಡು ರೈಲು ನಿಲ್ದಾಣಕ್ಕೆ ಹೋಗುತ್ತಿದ್ದ ವೇಳ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅಬ್ದುಲ್ಲ ತಕ್ಷಣ ಕಾರು ನಿಲ್ಲಿಸಿ ಅಗ್ನಿಶಾಮಕದಳಕ್ಕೆ ಮಾಹಿತಿ ನೀಡಿದರು. ಸೀನಿಯರ್ ಫಯರ್ ಆಂಡ್ ರೆಸ್ಕ್ಯೂ ಆಫೀಸರ್ ವಿ. ಸುಕುಮಾರ ನೇತೃತ್ವದ ಕಾಸರಗೋಡು ಅಗ್ನಿಶಾಮಕದಳ ತಕ್ಷಣ  ಸ್ಥಳಕ್ಕೆ ದೌಡಾಯಿಸಿ  ಬೆಂಕಿ …

ಅಭ್ಯರ್ಥಿಯ ಮನೆ ಮುಂದೆ ಬಾಂಬ್ ಸ್ಫೋಟ : ನಿಗೂಢತೆ ಬಯಲಿಗೆಳೆಯಲು ಸಿಪಿಐ ಆಗ್ರಹ

ಕಾಸರಗೋಡು: ಜಿಲ್ಲಾ ಪಂಚಾಯತ್‌ನ ಬದಿಯಡ್ಕ ಡಿವಿಶನ್ ಎಡರಂಗದ ಅಭ್ಯರ್ಥಿ ಸಿಪಿಐಯ ಪ್ರಕಾಶ್ ಕುಂಬ್ಡಾಜೆ ಯವರ ಮನೆ ಮುಂಭಾಗ ನಾಡಬಾಂಬ್ ಪತ್ತೆಹಚ್ಚಿದ ಘಟನೆಯಲ್ಲಿ ನಿಗೂಢತೆಯನ್ನು ಬಯಲಿಗೆಳೆಯಬೇಕೆಂದು ಸಿಪಿಐ ಜಿಲ್ಲಾ ಕೌನ್ಸಿಲ್ ಆಗ್ರಹಿಸಿದೆ. ಮತದಾನ ದಿನವಾದ ನಿನ್ನೆ ಬೆಳಿಗ್ಗೆ ಪ್ರಕಾಶ್ ರೈಯವರ ಮನೆಯ ಸಮೀಪದ ತೋಟದಲ್ಲಿ ಭಾರೀ ಶಬ್ದದೊಂದಿಗೆ ಸ್ಫೋಟ ನಡೆದಿತ್ತು. ಶಬ್ದ ಕೇಳಿ ಜನರು ಸ್ಥಳಕ್ಕೆ ತಲುಪಿ ದಾಗ ಪ್ರಕಾಶ್‌ರ ಸಾಕುನಾಯಿ ಸತ್ತುಬಿದ್ದಿತ್ತು. ಸಮೀಪದಲ್ಲೇ ಇತರ ಮೂರು ಬಾಂಬ್‌ಗಳನ್ನು ಪತ್ತೆ ಹಚ್ಚಲಾಗಿತ್ತು. ಶಂಕೆಗೆ ಹೇತು ವಾದ ಈ ರೀತಿಯ …

ಪೆರುವಾಡ್ ಕಡಪ್ಪುರದಲ್ಲಿ ನಿಲ್ಲಿಸಿದ್ದ ದೋಣಿ, ಬಲೆ ಉರಿದು ನಾಶ

ಕುಂಬಳೆ: ಪೆರುವಾಡ್ ಕಡಪ್ಪುರದಲ್ಲಿ ನಿನ್ನೆ ಮಧ್ಯಾಹ್ನ ಸಂಭವಿಸಿದ ಬೆಂಕಿ ಅನಾಹುತದಲ್ಲಿ ಫೈಬರ್ ದೋಣಿ ಹಾಗೂ ಮೀನುಗಾ ರಿಕೆಗೆ ಬಳಸುವ ಬಲೆ ಉರಿದು ನಾಶಗೊಂಡಿದೆ. ಬೆಂಕಿ ಪರಿಸರ ಪ್ರದೇಶದಲ್ಲಿ  ಹರಡಿದ್ದು, ಉಪ್ಪಳ ದಿಂದ ತಲುಪಿದ ಅಗ್ನಿಶಾಮಕದಳ, ನಾಗರಿಕರ ಸಹಾಯದೊಂದಿಗೆ ಬೆಂಕಿ ನಂದಿಸಿದೆ. ನಿನ್ನೆ ಮಧ್ಯಾಹ್ನ 12.30ರ ವೇಳೆ ಘಟನೆ ಸಂಭವಿಸಿದೆ. ಚುನಾವಣೆ ಯಾದುದರಿಂದ ನಿನ್ನೆ  ಮೀನು ಕಾರ್ಮಿ ಕರು ಸಮುದ್ರಕ್ಕೆ ತೆರಳದೆ ದೋಣಿಯನ್ನು ಕಡಲ ಕಿನಾರೆಯಲ್ಲಿ ನಿಲ್ಲಿಸಿದರು. ಕಡಲ ಕಿನಾರೆ ಬಳಿಯ ಹಿತ್ತಿಲಲ್ಲಿ ಕಸಕಡ್ಡಿ ರಾಶಿ ಹಾಕಿ ಬೆಂಕಿ …

ಕಿಂಞಣ್ಣ ರೈಯವರ ಪುತ್ರ ಕೃಷ್ಣ ಪ್ರದೀಪ್ ರೈ ನಿಧನ

ಬದಿಯಡ್ಕ: ಪ್ರಸಿದ್ಧ ಕವಿ ನಾಡೋಜ ದಿ| ಕಯ್ಯಾರ ಕಿಂಞಣ್ಣ ರೈಯವರ ಪುತ್ರ ಬದಿಯಡ್ಕ ಕಲ್ಲಕಳಿಯ ನಿವಾಸಿ  ಕೃಷ್ಣ ಪ್ರದೀಪ್ ರೈ (62) ನಿಧನ ಹೊಂದಿದರು. ನಿನ್ನೆ ಬೆಳಿಗ್ಗೆ 10.30ರ ವೇಳೆ ಮನೆಯಲ್ಲಿ ಅಸ್ವಸ್ಥರಾಗಿ ನಿಧನ ಸಂಭವಿಸಿದೆ. ಮೃತರು ಪತ್ನಿ ಆರತಿ, ಪುತ್ರಿ ಪ್ರಕೃತಿ, ಸಹೋದರರಾದ ದುರ್ಗಾಪ್ರಸಾದ್ ರೈ, ಜಯಶಂಕರ ರೈ, ಶ್ರೀರಂಗ ನಾಥ್ ರೈ, ಪ್ರಸನ್ನ ರೈ, ರವಿರಾಜ್ ರೈ, ಸಹೋದರಿಯರಾದ ದೇವಕಿ ದೇವಿ, ಕಾವೇರಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ನಿಧನಕ್ಕೆ ಕರ್ನಾಟಕ ಗಡಿ ಅಭಿವೃದ್ಧಿ …

ಹಸಿರು ಕ್ರಿಯಾಸೇನೆ ಸದಸ್ಯೆಯಿಂದ ಮಾದರಿ ಪ್ರವೇಶದ್ವಾರ

ಮುಳ್ಳೇರಿಯ: ಸ್ಥಳೀಯಾಡಳಿತ ಸಂಸ್ಥೆಗಳಿಗಿರುವ ಚುನಾವಣೆಯಲ್ಲಿ ಬೆಳ್ಳೂರು ಹೈಯರ್ ಸೆಕೆಂಡರಿ ಶಾಲೆಯ ಬೂತ್‌ಗೆ ತಲುಪಿದ ಮತ ದಾರರನ್ನು ಹಸಿರು ಕ್ರಿಯಾಸೇನೆಯ ಕಾರ್ಯಕರ್ತೆಯರು ಸಿದ್ಧಪಡಿಸಿದ ಮನೋಹರವಾದ ಪ್ರವೇಶದ್ವಾರ ಸ್ವಾಗತಿಸಿದೆ. ಈ ಪ್ರವೇಶದ್ವಾರ ಸಿದ್ಧಪಡಿಸುವುದಕ್ಕೆ ಬೆಳ್ಳೂರು ಪಂಚಾಯತ್‌ನ 11ನೇ ವಾರ್ಡ್ ನಾಟೆಕಲ್ಲು ನಿವಾಸಿ 48 ವರ್ಷದ ಚಂದ್ರಾವತಿ ಮುಂಚೂಣಿಯಲ್ಲಿದ್ದರು. ಹಸಿರು ಕಾಯ್ದೆಯನ್ನು ಪಾಲಿಸಿ ಕೊಂಡು ಮಾದರಿ ಚುನಾವಣೆ ನಡೆಸಿದ ಬೂತ್ ಆಗಿದೆ ಇದು. ಇಲ್ಲಿ ವಿಭಿನ್ನ ರೀತಿಯಲ್ಲಿ ಪ್ರವೇಶದ್ವಾರವನ್ನು ಅಲಂಕರಿಸಬೇಕು ಎಂಬ ತೀರ್ಮಾನದ ಹಿನ್ನೆಲೆಯಲ್ಲಿ ಚಂದ್ರಾವತಿ ಈ ಪ್ರವೇಶದ್ವಾರದ ಹೊಣೆಗಾರಿಕೆಯನ್ನು ವಹಿಸಿಕೊಂಡಿ …