ನಾಲ್ಕೂವರೆ ವರ್ಷದ ಪುತ್ರಿಯನ್ನು ಪತಿಗೆ ನೀಡಿ ಪ್ರಿಯತಮನ ಜೊತೆ ತೆರಳಿದ ಯುವತಿ

ಕಾಸರಗೋಡು: ನಾಲ್ಕೂವರೆ ವರ್ಷದ ಪುತ್ರಿ ಸಹಿತ ನಾಪತ್ತೆಯಾದ ಯುವತಿ ಪ್ರಿಯ ತಮನೊಂದಿಗೆ ನ್ಯಾಯಾಲಯಕ್ಕೆ ಹಾಜರಾಗಿದ್ದಾಳೆ. ನ್ಯಾಯಾಲಯ ಈಕೆಯ ಇಚ್ಚೆಯಂತೆ ತೆರಳಲು ತಿಳಿಸಿದ ಹಿನ್ನೆಲೆಯಲ್ಲಿ ಪುತ್ರಿಯನ್ನು ಪತಿಗೆ ನೀಡಿ ಯುವತಿ ಪ್ರಿಯತಮನ ಜೊತೆ ತೆರಳಿದ್ದಾಳೆ. ದೇಲಂಪಾಡಿ ಮಯ್ಯಳ ನಿವಾಸಿ ಎಸ್.ಎ. ಕಾವ್ಯ (24) ಪ್ರಿಯತಮನಾದ ಅಣ್ಣಪ್ಪಾಡಿಯ ನಿವಾಸಿ ಅಶ್ವತ್ಥ್ ಜೊತೆ ತೆರಳಿದ್ದಾಳೆ. ಈ ತಿಂಗಳ 22ರಂದು ಬೆಳಿಗ್ಗೆ ಕಾವ್ಯ ಪುತ್ರಿಯ ಜೊತೆ ಮನೆಯಿಂದ ತೆರಳಿದ್ದಳು. ಮರಳಿ ಬಾರದ ಹಿನ್ನೆಲೆಯಲ್ಲಿ ಪತಿ ಆದೂರು ಪೊಲೀಸರಿಗೆ ದೂರು ನೀಡಿದ್ದಾರೆ. ಕಾವ್ಯ ಪ್ರಿಯತಮ …

ಯಶಸ್ವಿಯಾಗಿ ನಭಕ್ಕೆ ಚಿಮ್ಮಿದ ಎಲ್‌ವಿಎಂ3 –ಎಂ36 ಉಪಗ್ರಹ

ಶ್ರೀಹರಿಕೋಟಾ: ಅಮೆರಿಕಾದ ಬ್ಲೂ ಬರ್ಡ್ ಬ್ಲಾಕ್-2 ಉಪಗ್ರಹವನ್ನು ಹೊತ್ತ ಇಸ್ರೋದ ಎಲ್‌ವಿಎಂ 3-ಎಂ36 ರಾಕೆಟ್ ಯಶಸ್ವಿಯಾಗಿ ಉಡ್ಡಯನ ಮಾಡಲಾಯಿತು. ಆಂಧ್ರ ಪ್ರದೇಶದ ಶ್ರೀಹರಿಕೋಟಾದಲ್ಲಿರುವ  ನೆಲೆಯಿಂದ ಇಂದು ಬೆಳಿಗ್ಗೆ ೮.೫೪ಕ್ಕೆ ಯಶಸ್ವಿಯಾಗಿ  ಇದರ ಉಡಾವಣೆ ಯಾಗಿದೆ.  ಸಂವಹನ ಉಪಗ್ರಹ 6100 ಕಿಲೋ ತೂಕವಿದೆ. ಇದು ಯಶಸ್ವಿಯಾಗಿ ಕಕ್ಷೆ ಸೇರಿದ ಬಳಿಕ ಉಪಗ್ರಹದಿಂದ ನೇರವಾಗಿ ಪ್ರಪಂಚದಿಂದ ಯಾವುದೇ ಸ್ಥಳಕ್ಕೆ ಮೊಬೈಲ್‌ಗೆ  ಸಂಪರ್ಕ ಕಲ್ಪಿಸುವ ಸಂಸ್ಥೆಯಾಗಿ ಹೊರಹೊಮ್ಮಲಿದೆ. ಬ್ಲೂ ಬರ್ಡ್ ಉಪಗ್ರಹಗಳು ವಿಶೇಷ ಹಾರ್ಡ್ ವೇರ್ ಅಥವಾ ಫೋನ್ ಮಾರ್ಪಾಡುಗಳಿಲ್ಲದೆ ನೇರವಾಗಿ …

ಮನೆಯಿಂದ 2.50 ಲಕ್ಷ ರೂ.ನ ಚಿನ್ನದೊಡವೆ ಕಳವು

ಕಾಸರಗೋಡು: ಮನೆಯಿಂದ 2.50 ಲಕ್ಷ ರೂ. ಮೌಲ್ಯದ ಚಿನ್ನದೊಡವೆ ಕಳವುಗೈದ ಬಗ್ಗೆ ಕಾಸರಗೋಡು ಪೊಲೀಸರಿಗೆ ದೂರು ನೀಡಲಾಗಿದೆ. ನಗರದ ನೆಲ್ಲಿಕುಂಜೆ ಬಂಗರಗುಡ್ಡೆ ನಿವಾಸಿ ಬದರ್ ಬಿಲಾಲ್ ಸಿ.ಎಂ (37) ಎಂಬವರು ಈ ಬಗ್ಗೆ ದೂರು ನೀಡಿದ್ದು, ಅದರಂತೆ ಪೊಲೀಸರು ಪ್ರಕರಣ ದಾಖಲಿಸಿ ಕೊಂಡು ತನಿಖೆ ಆರಂಭಿಸಿದ್ದಾರೆ. ಡಿಸೆಂಬರ್ 23ರಂದು ಬಂಗರ ಗುಡ್ಡೆಯಲ್ಲಿ ತಾನು ವಾಸಿಸುತ್ತಿರುವ  ಬಾಡಿಗೆ ಮನೆಯೊಳಗಿನ ಕಪಾಟಿನ ಲ್ಲಿರಿಸಿದ್ದ 2.50 ಲಕ್ಷ ರೂ. ಮೌಲ್ಯದ  ಎರಡೂವರೆ ಪವನ್‌ನ ಚಿನ್ನದೊ ಡವೆಯನ್ನು ಕಳವುಗೈದಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ …

ಹೊಯ್ಗೆ ಸಾಗಿಸುತ್ತಿದ್ದ ಆಟೋ ರಿಕ್ಷಾ ವಶ

ಉಪ್ಪಳ: ಆಟೋ ರಿಕ್ಷಾದಲ್ಲಿ ಅನಧಿಕೃತವಾಗಿ ಸಾಗಿಸುತ್ತಿದ್ದ ಹೊಯ್ಗೆಯನ್ನು ಮಂಜೇಶ್ವರ ಪೊಲೀಸರು ವಶಪಡಿಸಿಕೊಂಡಿದ್ದಾರೆ. ನಿನ್ನೆ ಬೆಳಿಗ್ಗೆ ಹೊಸಂಗಡಿ ಭಾಗದಲ್ಲಿ ಎಸ್.ಐ ವೈಷ್ಣವ್ ರಾಮಚಂದ್ರನ್ ನೇತೃತ್ವದಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಹೊಯ್ಗೆ ತುಂಬಿಸಿದ ಆಟೋ ರಿಕ್ಷಾ ತಲುಪಿದೆ.  ಯಾವುದೋ ಹೊಳೆಯಿಂದ ಸಂಗ್ರಹಿಸಿದ ಹೊಯ್ಗೆಯನ್ನು ೧೦ ಗೋಣಿಚೀಲಗಳಲ್ಲಿ ತುಂಬಿಸಿ ರಿಕ್ಷಾದಲ್ಲಿ ಸಾಗಿಸಲಾಗುತ್ತಿತ್ತು. ಈ ಸಂಬಂಧ ರಿಕ್ಷಾವನ್ನು ವಶಕ್ಕೆ ತೆಗೆದುಕೊಂಡ ಪೊಲೀಸರು ಚಾಲಕ ಮಂಜೇಶ್ವರ ಕಡಪ್ಪುರ ಜಾರ ನಿವಾಸಿ ಆಶಿಫ್ (36) ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ.

ಸ್ಕೂಟರ್ ತಡೆದು ನಿಲ್ಲಿಸಿ ಸಿಪಿಎಂ ಕಾರ್ಯಕರ್ತರಿಗೆ ಆಕ್ರಮಣ : 10 ಮುಸ್ಲಿಂ ಲೀಗ್ ಕಾರ್ಯಕರ್ತರ ವಿರುದ್ಧ ಕೇಸು

ಕಾಸರಗೋಡು: ಪನೆಯಾಲ್,  ಪೆರಿಯಾಟಡ್ಕದಲ್ಲಿ ಸ್ಕೂಟರನ್ನು ತಡೆದು ನಿಲ್ಲಿಸಿ ಸಿಪಿಎಂ ಕಾರ್ಯಕರ್ತರಿಗೆ ಆಕ್ರಮಿಸಿರುವುದಾಗಿ ದೂರಲಾಗಿದೆ. ಪನೆಯಾಲ್  ತೋಕನಮೊಟ್ಟ ನಿವಾಸಿ ಎನ್.ಕೆ. ದಿಲೀಶ್ (24), ಲಿಜೇಶ್ ಎಂಬಿವರು ಗಾಯಗೊಂಡಿದ್ದಾರೆ. ಇದರಲ್ಲಿ ದಿಲೀಶ್‌ನನ್ನು ಕಾಞಂಗಾಡ್ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ನಿನ್ನೆ ರಾತ್ರಿ 10.30 ರ ವೇಳೆ ಘಟನೆ ನಡೆದಿದೆ. ಲಿಜೇಶ್‌ನ ಜೊತೆ ದಿಲೀಶ್ ಸ್ಕೂಟರ್‌ನಲ್ಲಿ ಸಂಚರಿಸುತ್ತಿದ್ದಾಗ ಪೆರಿಯಾಟಡ್ಕಕ್ಕೆ ತಲುಪಿದ ವೇಳೆ ಮುಸ್ಲಿಂ ಲೀಗ್ ಕಾರ್ಯಕರ್ತರ ತಂಡವೊಂದು ತಡೆದು ನಿಲ್ಲಿಸಿ ದೊಣ್ಣೆ, ಪಂಚ್‌ನಿಂದ  ಆಕ್ರಮಿಸಿರುವುದಾಗಿ ಸಿಪಿಎಂ ಕಾರ್ಯಕರ್ತರು ದೂರಿದ್ದಾರೆ. ಪಂಚ್‌ನಿಂದ ಗುದ್ದಿದ ಹಿನ್ನೆಲೆಯಲ್ಲಿ …

ಮಹಿಳೆ ಕಣ್ಣಿಗೆ ಮೆಣಸಿನ ಪುಡಿ ಎರಚಿ ಚಿನ್ನಾಭರಣ ದರೋಡೆ

ಮಲಪ್ಪುರಂ: ಮನೆಯಲ್ಲಿ ಏಕಾಂಗಿಯಾಗಿ ವಾಸಿಸುವ ಮಹಿ ಳೆಯ ಕಣ್ಣಿಗೆ ಮೆಣಸಿನ ಹುಡಿ ಎರಚಿದ ತಂಡ ಎರಡು ಪವನ್ ಚಿನ್ನಾಭರಣ ಕಸಿದು ಪರಾರಿಯಾದ ಘಟನೆ ನಡೆದಿದೆ. ಮಲಪ್ಪುರಂ ಜಿಲ್ಲೆಯ ಅಂಬಲಪಡಿ ಬೈಪಾಸ್‌ನ ಲ್ಲಿರುವ ನಿವೃತ್ತ ಯೋಧ ದಿ|  ಪಾಲಿಕ ತ್ತೊಟ್ಟಿಲ್ ವಿಜಯ ಕುಮಾರ್ ಎಂಬವರ ಪತ್ನಿ ಕೆ. ಚಂದ್ರಮತಿ (63) ಎಂಬವರ ಮನೆಗೆ ಮೂವರ ತಂಡ ತಲುಪಿ ಈ ಕೃತ್ಯವೆಸಗಿದೆ. ಮೊನ್ನೆ ರಾತ್ರಿ 9 ಗಂಟೆ ವೇಳೆ ಮನೆಯ ಹೊರಗೆ ಶಬ್ದ ಕೇಳಿಬಂದಿದ್ದು, ಇದರಿಂದ ಚಂದ್ರಮತಿ ಬಾಗಿಲು ತೆರೆದು …

ದೈವದಿಂದ ಅನುಗ್ರಹ ಪಡೆದ ಬಾಲಿವುಡ್ ನಟಿ ಮನೀಷಾ ಕೊಯಿರಾಲ

ಕಾಸರಗೋಡು: ಬಾಂಬೆ ಎಂಬ ಸಿನಿಮಾದ ಮೂಲಕ ಕೇರಳೀಯರಿಗೆ ಪರಿಚಿತಳಾದ ಬಾಲಿವುಡ್ ನಟಿ ಮನೀಷಾ ಕೊಯಿರಾಲ ದೈವನೇಮ ಕಾಣಲು ತಲುಪಿದರು. ಉದುಮ ಆರಾಟುಕಡವು ಕಣ್ಣಂಕುಳಂ ಶ್ರೀ ರಕ್ತೇಶ್ವರಿ ದೈವಸ್ಥಾನದಲ್ಲಿ ಕಳಿಯಾಟ ನೋಡಲು ಈಕೆ ತಲುಪಿದ್ದಾರೆ.  ತಾಯಿ ಸುಷ್ಮಾ ಕೊಯಿರಾಲರ ಜೊತೆ ಇವರು ಕ್ಷೇತ್ರಕ್ಕೆ ತಲುಪಿದ್ದಾರೆ. ರಕ್ತೇಶ್ವರಿ ಹಾಗೂ ವಿಷ್ಣುಮೂರ್ತಿ ದೈವದ ನೇಮದ ಸಂದರ್ಭದಲ್ಲಿ ಅಲ್ಲಿದ್ದು, ದೈವಾನುಗ್ರಹ ಪಡೆದು ನಟಿ ಹಿಂತಿರುಗಿದ್ದಾರೆ. ಬಾಂಬೆ ಸಿನಿಮಾ ಹಾಗೂ ಬಿಆರ್‌ಡಿಸಿಯ 30ನೇ ವಾರ್ಷಿಕಾಚರಣೆಯಲ್ಲಿ ಭಾಗವಹಿಸಲೆಂದು ಮನಿಷಾ ಹಾಗೂ ಕುಟುಂಬ ಬೇಕಲಕ್ಕೆ ತಲುಪಿದ್ದರು. ಬಿಆರ್‌ಡಿಸಿ …

ಎಸ್‌ಐಆರ್ ಕರಡು ಮತದಾರರ ಯಾದಿ ಪ್ರಕಟ: ಜಿಲ್ಲೆಯಲ್ಲಿ ಶೇ. 94.72 ಮಂದಿ ಕರಡು ಮತದಾರ ಪಟ್ಟಿಯಲ್ಲಿ; 56.911 ಮಂದಿ ಹೊರಕ್ಕೆ

ಕಾಸರಗೋಡು: ರಾಜ್ಯದಲ್ಲಿ ಮತದಾರ ಯಾದಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್)ಯ ಕರಡು ಮತದಾರ ಪಟ್ಟಿಯನ್ನು ಕೇಂದ್ರ ಚುನಾವಣಾ ಆಯೋಗ ವಿದ್ಯುಕ್ತವಾಗಿ ಪ್ರಕಟಿಸಿದ್ದು, ಇದರಲ್ಲಿ ಕಾಸರಗೋಡು  ಜಿಲ್ಲೆಯ ಮತದಾರ ಪಟ್ಟಿಯಿಂದ ೫೬,೯೧೧ ಮಂದಿ ಹೊರಬಿದ್ದಿದ್ದಾರೆ. ಮತದಾರ ಯಾದಿಯಲ್ಲಿ  10,21,345 ಮಂದಿ (ಶೇ. 94.72)  ಉಳಿದುಕೊಂಡಿದ್ದಾರೆ. ಕರಡು ಮತದಾರ ಯಾದಿಯಿಂದ ಹೊರಬಿದ್ದವರಲ್ಲಿ ನಿಧನಹೊಂದಿರುವ 18,386 ಮಂದಿ, ಪತ್ತೆಹಚ್ಚಲು ಸಾಧ್ಯವಾಗದ 13,689 ಮಂದಿ, ಖಾಯಂ ಆಗಿ ಬೇರೆಡೆಗೆ ವಾಸ್ತವ್ಯ ಬದಲಾಯಿಸಿದ 20,459 ಮಂದಿ, ಎರಡು ಕಡೆಗಳ ಮತದಾರ ಯಾದಿಯಲ್ಲಿ ಹೆಸರು ಹೊಂದಿರುವ …

ಟೋಲ್ ಪ್ಲಾಜಾ ವಿಷಯಕ್ಕೆ ಸಂಬಂಧಿಸಿ ಅಪಪ್ರಚಾರ: ಜಿಲ್ಲಾಧಿಕಾರಿ ಸ್ಪಷ್ಟನೆ

ಕಾಸರಗೋಡು: ಕುಂಬಳೆ ಆರಿಕ್ಕಾಡಿ ಟೋಲ್ ಪ್ಲಾಜಾಕ್ಕೆ ಸಂಬಂಧಿಸಿ ಜಿಲ್ಲಾಧಿಕಾರಿಯ ಚೇಂಬರ್‌ನಲ್ಲಿ ಚರ್ಚೆಗೆ ತಲುಪಿದ ಜನಪ್ರತಿನಿಧಿಗಳನ್ನು ಆಕ್ಷೇಪಿಸಿ ರುವುದಾಗಿ ಕೆಲವು ಮಾಧ್ಯಮಗಳಲ್ಲಿ ಪ್ರಕಟಗೊಂಡ ಸುದ್ಧಿ ಅಸತ್ಯವಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಟೋಲ್ ಪ್ಲಾಜಾ ವಿಷಯ ನ್ಯಾಯಾಲಯದಲ್ಲಿ ಪರಿಗಣನೆಯಲ್ಲಿದ್ದು, ಈ ಹಿನ್ನೆಲೆಯಲ್ಲಿ ತೀರ್ಮಾನ ಕೈಗೊಳ್ಳಲು ಸಾಧ್ಯವಾಗದು. ಈ ಬಗ್ಗೆ ಔದ್ಯೋಗಿಕವಾದ ಸಭೆ ಈ ತಿಂಗಳ 22ರಂದು ಕಲೆಕ್ಟ್ರೇಟ್‌ನಲ್ಲಿ ನಡೆಸಲಾಗಿಲ್ಲ. ಆದರೆ ಚೇಂಬರ್‌ಗೆ ತಲುಪಿ ಜಿಲ್ಲಾಧಿಕಾರಿಯವರನ್ನು ನೇರವಾಗಿ ಭೇಟಿಯಾದ ಜನಪ್ರತಿನಿಧಿ ಗಳಲ್ಲಿ, ರಾಜಕೀಯ ಪಕ್ಷದವರಲ್ಲಿ ನ್ಯಾಯಾಲ ಯದ ಆದೇಶ ಪ್ರಕಾರ ಕ್ರಮ …

ಉದ್ಯೋಗ ಖಾತರಿ ಯೋಜನೆ ಬುಡಮೇಲುಗೊಳಿಸುವ ಕೇಂದ್ರ ಸರಕಾರದ ನೀತಿ ವಿರುದ್ಧ ಸಿಪಿಎಂ ಪ್ರತಿಭಟನೆ

ಪೈವಳಿಕೆ: ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಹೆಸರನ್ನು ಬದಲಾಯಿಸಿ ಯೋಜನೆಯನ್ನೇ ಬುಡಮೇಲುಗೊಳಿ ಸಲಿರುವ ಕೇಂದ್ರ ಸರಕಾರದ ನೀತಿಯನ್ನು ಖಂಡಿಸಿ ಸಿಪಿಎಂ ಮಂಜೇಶ್ವರ ಏರಿಯಾ ಸಮಿತಿ ನೇತೃತ್ವದಲ್ಲಿ ಹೊಸಂಗಡಿಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಬಡ ಕಾರ್ಮಿಕರಿಗೆ ವರದಾನವಾಗಿದ್ದ ಉದ್ಯೋಗ ಖಾತರಿ ಯೋಜನೆಯ ನಿಬಂಧನೆಗಳನ್ನು ಬದಲಾಯಿಸಿ ಜನರಿಗೆ ಉಪಯೋಗವಿಲ್ಲದಂತೆ ಮಾಡಲು ಕೇಂದ್ರ ಯತ್ನಿಸುತ್ತಿದೆ ಎಂದು ಸಿಪಿಎಂ ಆರೋಪಿಸಿದೆ. ಅಬ್ದುಲ್ ರಜಾಕ್ ಚಿಪ್ಪಾರ್ ಅಧ್ಯಕ್ಷತೆ ವಹಿಸಿದರು. ಮುಖಂಡರಾದ ಕೆ.ಆರ್. ಜಯಾನಂದ ಉದ್ಘಾಟಿಸಿದರು. ಚಂದ್ರ ನಾಯ್ಕ್ ಮಾಣಿಪ್ಪಾಡಿ, ವಿನಯ ಕುಮಾರ್, ಭಾರತಿ …