ಶಬರಿಮಲೆ ಚಿನ್ನ ಕಳವು: ವಿಧಾನಸಭೆಯಲ್ಲಿ ಆಡಳಿತ-ವಿರೋಧ ಪಕ್ಷಗಳ ಮಧ್ಯೆ ವಾಗ್ವಾದ
ತಿರುವನಂತಪುರ: ಶಬರಿಮಲೆ ದೇಗುಲದ ಚಿನ್ನ ಕಳವು ಪ್ರಕರಣದ ಕಾವು ಇಂದು ಬೆಳಿಗ್ಗೆ ವಿಧಾನಸಭೆಯಲ್ಲೂ ಭುಗಿಲೆದ್ದಿತು. ಇದರ ಹೆಸರಲ್ಲಿ ಆಡಳಿತ ಮತ್ತು ವಿರೋಧಪಕ್ಷಗಳ ನಡುವೆ ಭಾರೀ ವಾಗ್ವಾದ ಹಾಗೂ ಸದ್ದುಗದ್ದಲದ ವಾತಾವರಣ ನಿರ್ಮಾಣಗೊಂಡಿದ್ದು, ಇದರಿಂದ ಸದನದ ಇಂದಿನ ಕಾರ್ಯಕಲಾಪಗಳನ್ನು ನಡೆಸಲು ಸಾಧ್ಯವಾಗದೆ ವಿಧಾನಸಭಾ ಅಧ್ಯಕ್ಷರು ಅಲ್ಲಿಗೇ ಕೊನೆಗೊಳಿಸಿದರು. ವಿಧಾನಸಭಾ ಅಧಿವೇಶನ ಇಂದು ಬೆಳಿಗ್ಗೆ ಆರಂಭಗೊಂಡಾಗಲೇ ಫಲಕ ಗಳನ್ನು ಹಿಡಿದುಕೊಂಡು ಸದನಕ್ಕೆ ಆಗಮಿಸಿದ ವಿಪಕ್ಷಗಳ ಶಾಸಕರು ಶಬರಿಮಲೆ ಚಿನ್ನ ಕಳವು ವಿಷಯಕ್ಕೆ ಸಂಬಂಧಿಸಿ ಪ್ರತಿಭಟನೆ ಆರಂಭಿಸಿದರು. ಇದೇ ಸಂದರ್ಭದಲ್ಲಿ ಮುಜರಾಯಿ …
Read more “ಶಬರಿಮಲೆ ಚಿನ್ನ ಕಳವು: ವಿಧಾನಸಭೆಯಲ್ಲಿ ಆಡಳಿತ-ವಿರೋಧ ಪಕ್ಷಗಳ ಮಧ್ಯೆ ವಾಗ್ವಾದ”