ನಾಯ್ಕಾಪಿನ ನ್ಯಾಯವಾದಿ ಮನೆಯಿಂದ ಕಳವುಗೈದ ಆರೋಪಿ ಬಂಧನ: ಸೆರೆಗೀಡಾದುದು ಅಡ್ಯನಡ್ಕ ಬ್ಯಾಂಕ್ನಿಂದ ಕಳವುಗೈದ ಪ್ರಕರಣದ ಆರೋಪಿ
ಕುಂಬಳೆ: ನಾಯ್ಕಾಪು ನಿವಾಸಿಯೂ ಕಾಸರಗೋಡು ಬಾರ್ನ ನ್ಯಾಯವಾದಿಯಾದ ಚೈತ್ರಾ ಎಂಬವರ ಮನೆಯಿಂದ 29 ಪವನ್ ಚಿನ್ನ, 25 ಸಾವಿರ ರೂ.ಗಳ ಬೆಳ್ಳಿ ಆಭರಣಗಳು, ೫ ಸಾವಿರ ರೂಪಾಯಿಗಳನ್ನು ಕಳವು ನಡೆಸಿದ ಪ್ರಕರಣದಲ್ಲಿ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಕರ್ನಾಟಕ ನಿವಾಸಿಯೂ, ಕಾಸರಗೋಡು, ಕುಂಬಳೆ ಪೊಲೀಸ್ ಠಾಣೆಯ ವಿವಿಧ ಸ್ಥಳಗಳ ಕ್ವಾರ್ಟರ್ಸ್ನಲ್ಲಿ ವಾಸಿಸುವ ಇಬ್ರಾಹಿಂ ಯಾನೆ ಕಲಂದರ್ ಇಬ್ರಾಹಿಂ ಎಂಬಾ ತನನ್ನು ಕರ್ನಾಟಕದಿಂದ ಕುಂಬಳೆ ಪೊಲೀಸ್ ಇನ್ಸ್ಪೆಕ್ಟರ್ ಟಿ.ಕೆ. ಮುಕುಂದನ್, ಎಸ್ಐ ಕೆ.ಶ್ರೀಜೇಶ್ ಎಂಬಿವರ ನೇತೃತ್ವದಲ್ಲಿರುವ ಪ್ರತ್ಯೇಕ ತನಿಖಾ ತಂಡ …