ಚರಂಡಿಗೆ ಮಲಿನ ಜಲ ಹರಿಯಬಿಟ್ಟ ಅಪಾರ್ಟ್‌ಮೆಂಟ್ ಮಾಲಕನಿಗೆ ದಂಡ

ಉಪ್ಪಳ: ಸಾರ್ವಜನಿಕರ ಆರೋಗ್ಯಕ್ಕೆ ಮಾರಕವಾಗುವ ರೀತಿಯಲ್ಲಿ ಉಪ್ಪಳ ಪತ್ವಾಡಿ ರಸ್ತೆಯ ಚೆರಂಡಿಗೆ ಮಲಿನ ಜಲವನ್ನು ಹರಿಯಬಿಟ್ಟ ಬಗ್ಗೆ ನೀಡಿದ ದೂರಿನಂತೆ ಕಾಸರಗೋಡು ಜಿಲ್ಲಾ ಎನ್‌ಫೋರ್ಸ್‌ಮೆಂಟ್ ಸ್ಕ್ವಾಡ್ ಜಲವನ್ನು ಹರಿಯಬಿಟ್ಟ ಅಪಾರ್ಟ್‌ಮೆಂಟ್ ಮಾಲಕನನ್ನು ಪತ್ತೆಹಚ್ಚಿ ೨೦,೦೦೦ ರೂ. ದಂಡ ವಸೂಲು ಮಾಡಿದೆ. ಮಲಿನಜಲ  ಹರಿದುಹೋಗುವಂತೆ ಮಾಡಲು ಸಿದ್ಧಪಡಿಸಿದ್ದ ಪೈಪ್‌ಲೈನನ್ನು ನಾಲ್ಕು ದಿನದೊಳಗೆ ತೆರವುಗೊಳಿಸಬೇಕೆಂದು ನಿರ್ದೇಶಿಸಲಾಗಿದೆ. ಪತ್ವಾಡಿ ಪ್ರಧಾನ ರಸ್ತೆ ಬದಿಯ ಖಾಸಗಿ ಸ್ಥಳದಲ್ಲಿ ಜೈವಿಕ ಸಹಿತ ತ್ಯಾಜ್ಯಗಳನ್ನು ಉಪೇಕ್ಷಿಸುವುದಕ್ಕೆ ಸೌಕರ್ಯ ಮಾಡಿಕೊಟ್ಟ ಸ್ಥಳದ ಮಾಲಕನಿಗೂ ದಂಡ ಹೇರಲಾಗಿದೆ. ಪೇಟೆಯ …

ರಿಪಬ್ಲಿಕ್ ದಿನಾಚರಣೆ: ಸಿದ್ಧತೆ ಪೂರ್ಣ

ಕಾಸರಗೋಡು: ಜನವರಿ 26ರ ಗಣರಾಜ್ಯ ದಿನಾಚರಣೆಗೆ ಜಿಲ್ಲೆಯಲ್ಲಿ ವಿಪುಲ ಸಿದ್ಧತೆ ನಡೆಸಲಾಗಿದೆ. ಅಂದು ಬೆಳಿಗ್ಗೆ ವಿದ್ಯಾನಗರ ನಗರಸಭಾ ಮೈದಾನದಲ್ಲಿ ನಡೆಯುವ ದಿನಾಚರಣೆಯಲ್ಲಿ  ಕಾರ್ಯಕ್ರಮದಲ್ಲಿ ಅರಣ್ಯ ಇಲಾಖೆ ಸಚಿವ ಎ.ಕೆ. ಶಶೀಂದ್ರನ್ ರಾಷ್ಟ್ರೀಯ ಧ್ವಜಾರೋಹಣಗೈ ಯ್ಯುವರು. ಪರೇಡ್‌ನಲ್ಲಿ ವೀಕ್ಷಿಸುವ ಅವರು ಬಳಿಕ ರಿಪಬ್ಲಿಕ್ ದಿನ ಸಂದೇಶ ನೀಡುವರು. ಇಂದು ಬೆಳಿಗ್ಗೆ ವಿದ್ಯಾನಗರ ಮೈದಾನದಲ್ಲಿ ಸಮವಸ್ತ್ರ ಧರಿಸಿರುವ ಪರೇಡ್ ರಿಹರ್ಸಲ್ ನಡೆಯಿತು. ಎಆರ್ ಕ್ಯಾಂಪ್ ಅಸಿಸ್ಟೆಂಟ್ ಕಮಾಂಡೆಂಟ್ ನೇತೃತ್ವ ನೀಡುವರು. ಪ್ಲಾಸ್ಟಿಕ್ ಮುಕ್ತವಾಗಿ ಪ್ರೊಟೋಕಾಲ್ ಪಾಲಿಸಿಕೊಂಡು ಕಾರ್ಯಕ್ರಮ ನಡೆಯಲಿದೆ. ಪರೇಡ್‌ನಲ್ಲಿ …