ಕಾರಡ್ಕ ಅಗ್ರಿಕಲ್ಚರಿಸ್ಟ್ ವೆಲ್ಫೇರ್ ಸೊಸೈಟಿಯಿಂದ 4.76 ಕೋಟಿ ರೂ.ಗಳ ವಂಚನೆ: ಮತ್ತೆ ನಾಲ್ಕು ಮಂದಿ ಸೆರೆ

ಮುಳ್ಳೇರಿಯ: ಕಾರಡ್ಕ ಅಗ್ರಿಕಲ್ಚ ರಿಸ್ಟ್ ವೆಲ್ಫೇರ್ ಸಹಕಾರಿ ಸಂಘದಲ್ಲಿ 4.76 ಕೋಟಿ ರೂಪಾಯಿಗಳ ವಂಚನೆ ನಡೆಸಿದ ಪ್ರಕರಣದಲ್ಲಿ ಮತ್ತೆ ನಾಲ್ಕು ಮಂದಿಯನ್ನು ಬಂಧಿಸಲಾಗಿದೆ. ಪಳ್ಳಿಕರೆಯ ಅಬೂಬಕ್ಕರ್ (61), ಪೈವಳಿಕೆ ಬಾಯಾರಿನ ಅಬ್ದುಲ್ ಅಸೀಸ್ (55), ಏತಡ್ಕದ ಆರಿಫ್ (43), ನೆಕ್ರಾಜೆ ಮವ್ವಾರಿನ ಶಂಸುದ್ದೀನ್ (41) ಎಂಬಿವರನ್ನು ಕಣ್ಣೂರು ಕ್ರೈಂ ಬ್ರಾಂಚ್ ಬಂಧಿಸಿದೆ. ಸಿಪಿಎಂ ನಿಯಂತ್ರಣದಲ್ಲಿರುವ ಸಹಕಾರಿ ಸಂಘದಲ್ಲಿ ಈ ವಂಚನೆ ನಡೆದಿದೆ. ವಂಚನಾ ತಂಡಕ್ಕೆ ವಿವಿಧ ಸ್ಥಳಗಳಲ್ಲಿ ವಂಚನೆ ನಡೆಸಲು ಸೂಕ್ತ ಸಂಸ್ಥೆಗಳನ್ನು ತೋರಿಸಿಕೊಟ್ಟು ಹೇಗೆ ವಂಚನೆ …

ಹೊಸಂಗಡಿಯಲ್ಲಿ ಯುವಕ- ಗೆಳತಿಯ ಅರೆನಗ್ನ ವೀಡಿಯೋ ಚಿತ್ರೀಕರಿಸಿದ ಪ್ರಕರಣ: ಇನ್ನೋರ್ವ ಸೆರೆ

ಹೊಸಂಗಡಿ: ವಸತಿಗೃಹಕ್ಕೆ ಅತಿಕ್ರಮಿಸಿ ನುಗ್ಗಿ ಯುವಕ ಹಾಗೂ ಗೆಳತಿಯ ಅರೆನಗ್ನ ವೀಡಿಯೋ ಹಾಗೂ ಫೊಟೋ ಚಿತ್ರೀಕರಿಸಿ ಬೆದರಿಕೆಯೊಡ್ಡಿ ಹಣ ಹಾಗೂ ಮೊಬೈಲ್ ಫೋನ್ ಅಪಹರಿಸಿದ ಪ್ರಕರಣದಲ್ಲಿ ಇನ್ನೋರ್ವನನ್ನು ಸೆರೆ ಹಿಡಿಯಲಾಗಿದೆ. ಬಡಾಜೆ ಕಾಜೂರ್ ಮಾಲಿ ನಿವಾಸಿ ಟಿ.ಕೆ. ಮೊಹಮ್ಮದ್ ಫೈಸಲ್ (42)ನನ್ನು ಮಂಜೇಶ್ವರ ಪೊಲೀಸರು ಸೆರೆ ಹಿಡಿದಿದ್ದಾರೆ. ಈತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸ ಲಾಗಿದ್ದು, 2 ವಾರಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಪ್ರಕರಣದಲ್ಲಿ ಇನ್ನೋರ್ವ ಆರೋಪಿಯಾದ ಮಂಜೇಶ್ವರ ಪಿರಾರಮೂಲೆ ನಿವಾಸಿ ಹಾಗೂ ಕಡಂಬಾರ್‌ನಲ್ಲಿ ವಾಸವಾಗಿರುವ ಕೆ.ಎ. ಹಾರಿಸ್ (40)ನನ್ನು …

ಹೊಯ್ಗೆ ಬೇಟೆಗಿಳಿದ ಪೊಲೀಸರಿಗೆ ಲಭಿಸಿದ್ದು ಎಂಡಿಎಂಎ: ಓರ್ವ ಸೆರೆ

ಉಪ್ಪಳ: ಹೊಯ್ಗೆ ಬೇಟೆಗಿಳಿದ ಪೊಲೀಸರು ಮಾದಕವಸ್ತು ಸಹಿತ ಓರ್ವನನ್ನು ಬಂಧಿಸಿದ್ದಾರೆ. ಮೂಸೋಡಿ ನಿವಾಸಿ ಮುನೀರ್ ಎಂ (36)  ಎಂಬಾತನ ಕೈಯಿಂದ 1.01 ಗ್ರಾಂ ಎಂಡಿಎಂಎ ವಶಪಡಿಸ ಲಾಗಿದೆ. ಇಂದು ಮುಂಜಾನೆ 3.15 ರ ವೇಳೆ ಉಪ್ಪಳ ಬಳಿಯ ಮೈದಾನದಲ್ಲಿ ಸಂಶಯಾಸ್ಪದವಾಗಿ ಕಂಡುಬಂದ ಮುನೀರ್‌ನನ್ನು ಎಸ್‌ಐ ವೈಷ್ಣವ್ ನೇತೃತ್ವದ ತಂಡ ತಪಾಸಣೆ ನಡೆಸಿ ದಾಗ  ಎಂಡಿಎಂಎ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಈತನನ್ನು ಬಂಧಿಸಲಾಗಿದೆ. ಉಪ್ಪಳ, ಮಣಿ ಮುಂಡ ಭಾಗಗಳ ಹೊಳೆಯಿಂದ ಅನಧಿಕೃತವಾಗಿ ಹೊಯ್ಗೆ ಸಾಗಾಟ ನಡೆಯುತ್ತಿದೆಯೆಂಬ ಮಾಹಿತಿಯ ಹಿನ್ನೆಲೆಯಲ್ಲಿ …

ಶಬರಿಮಲೆ ಚಿನ್ನ ಕಳವು: ನಟ ಜಯರಾಮ್‌ರಿಂದ ಹೇಳಿಕೆ ದಾಖಲಿಸಿಕೊಂಡ ಎಸ್‌ಐಟಿ

ಚೆನ್ನೈ: ಶಬರಿಮಲೆ ದೇಗುಲದಿಂದ ಚಿನ್ನ ಕಳವು ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಮಲೆಯಾಳ ಸಿನಿಮಾ ನಟ ಜಯರಾಮ್‌ರನ್ನು ವಿಶೇಷ ತನಿಖಾ ತಂಡ(ಎಸ್‌ಐಟಿ) ಸಮಗ್ರ ವಿಚಾರಣೆ ಗೊಳಪಡಿಸಿ  ಹೇಳಿಕೆ ದಾಖಲಿಸಿಕೊಂಡಿದೆ. ಶಬರಿಮಲೆ ಚಿನ್ನ ಕಳವು ಪ್ರಕರಣದ ಪ್ರಮುಖ ಆರೋಪಿ ಉಣ್ಣಿಕೃಷ್ಣನ್ ಪೋತ್ತಿಯೊಂದಿಗೆ ಜಯರಾಮ್ ನಿಕಟ ಸಂಬಂಧ ಹೊಂದಿದ್ದು ಆ ಬಗ್ಗೆ  ಮಾಹಿತಿ ಸಂಗ್ರಹಿಸಲು ಎಸ್‌ಐಟಿ ಚೆನ್ನೈಯಲ್ಲಿರುವ  ಜಯರಾಮ್‌ರ ನಿವಾಸಕ್ಕೆ ತೆರಳಿ ಅವರಿಂದ ಹೇಳಿಕೆ ದಾಖಲಿಸಿಕೊಂಡಿದೆ.  ಹಲವು ಪೂಜೆಗಳಿಗಾಗಿ ಉಣ್ಣಿಕೃಷ್ಣನ್ ಪೋತ್ತಿ ತನ್ನ ಮನೆಗೆ ಬಂದಿದ್ದನು. ಅಲ್ಲದೆ ಪೋತ್ತಿ ಹೊಂದಿರುವ ಆರ್ಥಿಕ …

ಹಲವು ವರ್ಷಗಳಿಂದ ಧಾರಾಳ ಮಾವಿನಹಣ್ಣು ಲಭಿಸುತ್ತಿದ್ದ ಮರದಲ್ಲಿ ಈ ಬಾರಿ ಹೂವುಗಳೇ ಬಿಟ್ಟಿಲ್ಲ…!

ಕಾಸರಗೋಡು: ನಾಡಿನಾದ್ಯಂತ ಮಾವಿನ ಮರಗಳು ಹೂವು ಬಿಟ್ಟು ಜನರ ಕಣ್ಮನ ಸೆಳೆಯುತ್ತಿರುವಾಗ ಇಲ್ಲೊಂದೆಡೆ ಹೂವು ಬಿಡದೆ ಮರ ಆಶ್ಚರ್ಯ ಮೂಡಿಸುತ್ತಿದೆ. ಪ್ರತೀ ವರ್ಷ ಈ ಕಾಲಾವಧಿಯಲ್ಲಿ ಹೂವು ಅರಳಿ ಮಾವಿನ ಮಿಡಿಗಳು ತುಂಬಿ ತುಳುಕುತ್ತಿದ್ದ ಈ ಮರದಲ್ಲಿ ಈಗ ಎಲೆಗಳು ಮಾತ್ರವೇ ಕಂಡುಬರುತ್ತಿದೆ.  ಮಧೂರು ಪಂಚಾಯತ್ ಮಾಜಿ ಅಧ್ಯಕ್ಷ ಕೆ. ಗೋಪಾಲಕೃಷ್ಣರ ಕೂಡ್ಲುನಲ್ಲಿರುವ ಮನೆ ಮುಂದೆ ಇರುವ ಮಾವಿನ ಮರದಲ್ಲಿ ಈ ಬಾರಿ ಮಾವಿನ ಕಾಯಿ ಇಲ್ಲ. ಮಧೂರು-ಕಾಸರಗೋಡು ರಸ್ತೆ ಬದಿಯಲ್ಲೇ ಇರುವ ಈ ಮಾವಿನ ಮರದಲ್ಲಿ …

ಎಡರಂಗದ ಅಭಿವೃದ್ಧಿ ಮುನ್ನಡೆ ಯಾತ್ರೆ ಮುಖ್ಯಮಂತ್ರಿ ಫೆ.1ರಂದು ಕುಂಬಳೆಗೆ

ಕಾಸರಗೋಡು: ಎಡರಂಗ ರಾಜ್ಯ ಸಮಿತಿ ನೇತೃತ್ವದಲ್ಲಿ ಉತ್ತರವಲಯ ಅಭಿವೃದ್ಧಿ ಮುನ್ನಡೆ ಜಾಥಾ ಫೆ.1ರಂದು ಸಂಜೆ 3 ಗಂಟೆಗೆ ಕುಂಬಳೆಯಿಂದ ಆರಂಭಗೊಳ್ಳಲಿದೆ. ಸಿಪಿಎಂ ರಾಜ್ಯ ಕಾರ್ಯದರ್ಶಿ ಎಂ.ವಿ. ಗೋವಿಂದನ್ ಮಾಸ್ತರ್ ಜಾಥಾ ನಾಯಕರಾಗಿರುವ ಯಾತ್ರೆಗೆ ಸಿದ್ಧತೆ ಪೂರ್ಣಗೊಂಡಿದ್ದು, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಉದ್ಘಾಟಿಸುವರು ಎಂದು ಈ ಬಗ್ಗೆ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಎಡರಂಗ ಸಂಚಾಲಕ ಕೆ.ಪಿ. ಸತೀಶ್ಚಂದ್ರನ್ ತಿಳಿಸಿದ್ದಾರೆ. ಸಿಪಿಐ ರಾಷ್ಟ್ರೀಯ ಎಕ್ಸಿಕ್ಯೂಟಿವ್ ಸದಸ್ಯ, ಸಂಸದ ಪಿ. ಸಂತೋಷ್ ಕುಮಾರ್ ಜಾಥಾ ಮೆನೇಜರ್ ಆಗಿರುವರು. ಮೊದಲ ದಿನದ ಪ್ರಚಾರ ನುಳ್ಳಿಪ್ಪಾಡಿಯಲ್ಲಿ …

ಯುಡಿಎಫ್‌ನಿಂದ ಕುಂಬಳೆ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ: ಪೊಲೀಸರು ಗೂಂಡಾ ನೀತಿಯನ್ನು ಕೊನೆಗೊಳಿಸಬೇಕು- ಸುಬ್ಬಯ್ಯ ರೈ

ಕುಂಬಳೆ: ಜನಸಾಮಾನ್ಯರೊಂದಿಗೆ ಪೊಲೀಸರು ಗೂಂಡಾಗಳಂತೆ ವರ್ತಿಸುತ್ತಿದ್ದಾರೆ. ಇಂತಹ ನೀತಿಯನ್ನು ಪೊಲೀಸರು ಕೊನೆಗೊಳಿಸಬೇಕೆಂದು ಕೆಪಿಸಿಸಿ ಕಾರ್ಯದರ್ಶಿ ಬಿ. ಸುಬ್ಬಯ್ಯ ರೈ ತಿಳಿಸಿದ್ದಾರೆ. ಪೊಲೀಸರು ಅಕ್ರಮಣ ನೀತಿಯನ್ನು ವಿರೋಧಿಸಿ ಯುಡಿಎಫ್ ಮಂಜೇಶ್ವರ ಮಂಡಲ ಸಮಿತಿ ನೇತೃತ್ವದಲ್ಲಿ ನಿನ್ನೆ ಕುಂಬಳೆ ಪೊಲೀಸ್ ಠಾಣೆ ಮುಂದೆ ನಡೆದ ಪ್ರತಿಭಟನಾ ಧರಣಿಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಕುಂಬಳೆ ಟೋಲ್ ಗೇಟ್‌ನಲ್ಲಿ ಮೊನ್ನೆ ಕಾರುಚಾಲಕನನ್ನು ಪೊಲೀಸರು ಬಲಪ್ರಯೋಗಿಸಿ ಕಾರಿನಿಂದಿಳಿಸಿ, ಪುಟ್ಟಮಕ್ಕಳು ದೀರ್ಘ ಹೊತ್ತು ರಸ್ತೆಯಲ್ಲೇ ಉಳಿಯಬೇಕಾದ ಸ್ಥಿತಿಯನ್ನು ಪ್ರತಿಭಟಿಸಿ ಯುಡಿಎಫ್  ನಿನ್ನೆ ಧರಣಿ ಹಮ್ಮಿಕೊಂಡಿತ್ತು. ಕಾರ್ಯಕ್ರಮದಲ್ಲಿ …

ಸಹಕಾರಿ ಪಿಂಚಣಿದಾರರ ಅನಿರ್ದಿಷ್ಟ ಹೋರಾಟ ವಾಹನ ಜಾಥಾಕ್ಕೆ ಹೊಸಂಗಡಿಯಲ್ಲಿ ಚಾಲನೆ

ಮಂಜೇಶ್ವರ: ಸಹಕಾರಿ ಪಿಂಚಣಿದಾರರ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಕೇರಳ ಕೋ-ಆಪರೇಟಿವ್ ಸರ್ವೀಸ್ ಪೆನ್ಶನರ್ಸ್ ಅಸೋಸಿಯೇಶÀನ್ ಕಾಸರಗೋಡು ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಅನಿಶ್ಚಿತಾವಧಿ ಹೋರಾಟಕ್ಕೆ ಚಾಲನೆ ನೀಡಲಾಯಿತು. ಇದರಂಗವಾಗಿ ರಾಜ್ಯ ಸಮರ ಪ್ರಚಾರ ವಾಹನ ಜಾಥಾ ನಿನ್ನೆ ಹೊಸಂಗಡಿಯಲ್ಲಿ ಉದ್ಘಾಟನೆಗೊಂಡಿತು. ರಾಜ್ಯ ಪ್ರಧಾನ ಕಾರ್ಯದರ್ಶಿ ಮುಂಡೂರು ರಾಮಕೃಷ್ಣನ್ ನೇತೃತ್ವದಲ್ಲಿ ನಡೆದ ಕಾರ್ಯ ಕ್ರಮದಲ್ಲಿ ಕೆ.ಆರ್. ಜಯಾನಂದ ಅಧ್ಯಕ್ಷತೆ ವಹಿಸಿದ್ದರು. ಎ.ಎಂ. ಮೇರಿ ಟೀಚರ್ ಜಾಥಾ ಉದ್ಘಾಟಿಸಿದರು. ಸಹಕಾರ ಜನತಾಂತ್ರಿಕ ವೇದಿಕೆ ಜಿಲ್ಲಾ ಅಧ್ಯಕ್ಷ ಕೆ. ನೀಲಕಂಠನ್, ಮಂಜೇಶ್ವರ ಬ್ಲಾಕ್ …

ಪಯ್ಯೋಳಿ ಎಕ್ಸ್‌ಪ್ರೆಸ್ ಪಿ.ಟಿ. ಉಷಾರ ಪತಿ ನಿಧನ

ಕಲ್ಲಿಕೋಟೆ: ರಾಜ್ಯಸಭಾ ಸದಸ್ಯೆ ಹಾಗೂ ಭಾರತೀಯ ಒಲಿಂಪಿಕ್ಸ್ ಅಸೋಸಿಯೇಶನ್ ಅಧ್ಯಕ್ಷೆಯಾಗಿರುವ ಡಾ. ಪಿ.ಟಿ. ಉಷಾರ ಪತಿ ಶ್ರೀನಿವಾಸನ್ (64) ನಿಧನ ಹೊಂದಿದರು. ಪಯ್ಯೋಳಿ ತಿಕ್ಕೋಡಿ ಪೆರುಮಾಳ್‌ಪುರಂನ ಮನೆಯಲ್ಲಿ ಕುಸಿದು ಬಿದ್ದ ಇವರನ್ನು ಕೂಡಲೇ ಆಸ್ಪತ್ರೆಗೆ ತಲುಪಿಸಲಾಯಿತಾದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಇಂದು ಮುಂಜಾನೆ 1 ಗಂಟೆ ವೇಳೆ ಘಟನೆ ನಡೆದಿದೆ. ಪಾರ್ಲಿಮೆಂಟ್ ಸಮ್ಮೇಳನ ದಲ್ಲಿ ಭಾಗವಹಿಸಲು ತೆರಳಿದ್ದ ಪಿ.ಟಿ. ಉಷಾ ಊರಿಗೆ ಮರಳಿದ್ದಾರೆ. ಶ್ರೀನಿವಾಸನ್ ಕೇಂದ್ರ ಕೈಗಾರಿಕಾ ಭದ್ರತಾ ಸೇನೆಯ ಡಿವೈಎಸ್‌ಪಿಯಾ ಗಿದ್ದರು. ಮೃತರು ಪತ್ನಿ, ಪುತ್ರ …

ಪ್ರಯಾಣಿಕನ ವಿರುದ್ಧ ಕುಂಬಳೆ ಟೋಲ್‌ಗೇಟ್‌ನಲ್ಲಿ ಪೊಲೀಸ್ ಕ್ರಮ: ಶಾಸಕರಿಂದ ಮುಖ್ಯಮಂತ್ರಿಗೆ ದೂರು

ಕುಂಬಳೆ: ತಲಪಾಡಿಯಲ್ಲಿ ಟೋಲ್ ಬೂತ್ ಇರುವಾಗ ದೂರ ಮಿತಿಯನ್ನು ಉಲ್ಲಂಘಿಸಿ 22 ಕಿಲೋ ಮೀಟರ್‌ನೊಳಗೆ ಕುಂಬಳೆ ಆರಿಕ್ಕಾಡಿ ಯಲ್ಲಿ ಎರಡನೇ ಟೋಲ್ ಸ್ಥಾಪಿಸಲಾ ಗಿದ್ದು, ಅಲ್ಲಿಯೂ ಹಣ ಪಾವತಿಸಿದರೂ ವಾಹನಗಳನ್ನು ತಡೆದು ನಿಲ್ಲಿಸುವ ರಾಡ್ ಕಾರಿನ ಮೇಲೆ ಗುದ್ದಿರುವುದನ್ನು ಪ್ರಶ್ನಿಸಿದ ಪ್ರಯಾಣಿಕನನ್ನು ಕುಂಬಳೆ ಸಿಐಯ ನೇತೃತ್ವದಲ್ಲಿ ಕಾರಿನಿಂದ ಇಳಿಸಿ ಕುಟುಂಬದ ಮುಂದೆಯೇ ಅಪರಾಧಿ ಯಂತೆ ಕೊಂಡುಹೋಗಿರುವುದು ಖಂಡನೀಯವೆಂದು ಶಾಸಕ ಎಕೆಎಂ ಅಶ್ರಫ್ ನುಡಿದಿದ್ದಾರೆ. ಈ ಪೊಲೀಸ್ ಅಧಿಕಾರಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ. ಈ …