ಮುಂಗಡಪತ್ರದಲ್ಲಿ ಸರಕಾರಿ ನೌಕರರನ್ನು ಅವಗಣಿಸಿರುವುದಾಗಿ ಆರೋಪಿಸಿ ಎನ್‌ಜಿಒ ಅಸೋಸಿಯೇಶನ್ ಪ್ರತಿಭಟನೆ

ಕಾಸರಗೋಡು: ನಾಲ್ಕು ತಿಂಗಳ ಒಳಗೆ ಕಾಲಾವಧಿ ಮುಗಿಸುವ ಸರಕಾರ ವೇತನ ಆಯೋಗವನ್ನು ನೇಮಕಗೊಳಿಸಿ ಮೂರು ತಿಂಗಳೊಳಗೆ ವೇತನ ಪರಿಷ್ಕರಣೆ ನಡೆಸುವುದಾಗಿ ಬಜೆಟ್‌ನಲ್ಲಿ ಘೋಷಿಸಿರುವುದು ನೌಕರರ ಕಣ್ಣಿಗೆ ಮಣ್ಣು ಹಾಕಲಿರುವ ಯತ್ನವಾಗಿದೆ ಎಂದು ಎನ್‌ಜಿಒ ಅಸೋಸಿಯೇಶನ್ ಆರೋಪಿಸಿದೆ. ವೇತನ ಪರಿಷ್ಕರಣೆಯನ್ನು ಕಳೆದ ೫ ವರ್ಷದಿಂದ ಸರಕಾರ ಬುಡಮೇಲುಗೊಳಿಸಲು ಯತ್ನ ನಡೆಸಿರುವುದಾಗಿಯೂ ಎನ್‌ಜಿಒ ಅಸೋಸಿಯೇಶನ್ ಜಿಲ್ಲಾಧ್ಯಕ್ಷ ಎ.ಟಿ. ಶಶಿ ನುಡಿದರು. ರಾಜ್ಯ ಮುಂಗಡ ಪತ್ರದಲ್ಲಿ ನೌಕರರನ್ನು ಅವಗಣಿಸಿರುವು ದನ್ನು ಪ್ರತಿಭಟಿಸಿ ಜಿಲ್ಲಾಧಿಕಾರಿ ಕಚೇರಿ ಬಳಿ ಕೇರಳ ಎನ್‌ಜಿಒ ಅಸೋಸಿ ಯೇಶನ್ …

ಉಪ್ಪಳ ಶ್ರೀ ಭಗವತೀ ಕ್ಷೇತ್ರದಲ್ಲಿ ಕಳಿಯಾಟ ಮಹೋತ್ಸವ ಆರಂಭ

ಉಪ್ಪಳ: ಉಪ್ಪಳ ಶ್ರೀ ಭಗವತೀ ಕ್ಷೇತ್ರದಲ್ಲಿ ವರ್ಷಾವಧಿ ಕಳಿಯಾಟ ಮಹೋತ್ಸವ ಆರಂಭಗೊಂಡಿದೆ. ಬೆಳಿಗ್ಗೆ ಭಂಡಾರ ಕ್ಷೇತ್ರದಲ್ಲಿ ಗಣಹೋಮ, ಕಳಿಯಾಟ ಮಹೋತ್ಸವಕ್ಕೆ ಗೊನೆ ಮುಹೂರ್ತ, ಚಪ್ಪರ ಮುಹೂರ್ತ, ಶ್ರೀ ನಾಗ ಸನ್ನಿಧಿಯಲ್ಲಿ ನಾಗತಂಬಿಲ, ಭಜನೆ, ಭಂಡಾರ ಆಗಮನ, ನಡಾವಳಿ ಉತ್ಸವದೊಂದಿಗೆ ನಿನ್ನೆ ಮೊದಲ ಕಳಿಯಾಟ ನಡೆಯಿತು. ಇಂದು ನಡು ಕಳಿಯಾಟ ಆರಂಭಗೊಂಡಿದೆ. ಫೆ.1ರಂದು ರಾತ್ರಿ 12ರಿಂದ ಹೂ ಮುಡಿ ದೈವ, ಭಗವತೀ ದರ್ಶನ, ಕೆಂಡಸೇವೆ, ಬಲಿ ಉತ್ಸವ, ವಿಷ್ಣುಮೂರ್ತಿ ದೈವ, ಭಂಡಾರ ನಿರ್ಗಮನದೊಂದಿಗೆ ಕಳಿಯಾಟ ಮಹೋತ್ಸವ ಸಮಾಪ್ತಿಗೊಳ್ಳಲಿದೆ.

ಪ್ರತಾಪನಗರ ಒಳ ರಸ್ತೆಯಲ್ಲಿ ಚರಂಡಿ, ಸ್ಲ್ಯಾಬ್ ನಿರ್ಮಾಣ: ಸ್ಥಳೀಯರಿಗೆ ನೆಮ್ಮದಿ

ಮಂಗಲ್ಪಾಡಿ: ಮಂಗಲ್ಪಾಡಿ ಪಂಚಾಯತ್‌ನ 7ನೇ ವಾರ್ಡ್ ಪ್ರತಾಪನಗರ ಒಳ ರಸ್ತೆಯಲ್ಲಿ ವ್ಯವಸ್ಥಿತ ಚರಂಡಿ ಹಾಗೂ ಸ್ಲಾಬ್ ನಿರ್ಮಿಸಲಾಗಿದ್ದು, ಸ್ಥಳೀಯರಲ್ಲಿ ಆತಂಕ ದೂರವಾಗಿದೆ. ಈ ಪರಿಸರದಲ್ಲಿ ಮಳೆ ನೀರು ರಸ್ತೆಯಲ್ಲಿ ಹರಿದು ಶೋಚನೀಯÁವಸ್ಥೆ ಉಂಟಾಗುತ್ತಿತ್ತು. ತೆರೆದ ಸ್ಥಿತಿಯಲ್ಲಿದ್ದ ಚರಂಡಿಯಿAದ ವಾಹನ ಸಂಚಾರಕ್ಕೆ ಸಮಸ್ಯೆ ಹಾಗೂ ಅಪಘಾತಕ್ಕೆ ಕಾರಣವಾಗುತ್ತಿತ್ತು. ಸೂಕ್ತ ಚರಂಡಿ ನಿರ್ಮಾಣಕ್ಕೆ ಈ ಹಿಂದೆ ಊರವರು ಒತ್ತಾಯಿಸಿದ್ದರು. ಇದಕ್ಕೆ ಸ್ಪಂದಿಸಿದ ಈ ಹಿಂದಿನ ವಾರ್ಡ್ ಸದಸ್ಯೆ ಸುಧಾ ಗಣೇಶ್‌ರ ಮುತುವರ್ಜಿಯಿಂದ ಪಂಚಾಯತ್ ನಿಂದ ಮಂಜೂರುಗೊAಡ ಸುಮಾರು 5ಲಕ್ಷ ರೂ …

ಉತ್ತಮ ಬೂತ್ ಲೆವೆಲ್ ಆಫೀಸರ್ ರಾಜೇಶ್ ಸಿ.ಎಚ್‌ಗೆ ಜಿಲ್ಲಾಧಿಕಾರಿ ಅಭಿನಂದನೆ

ಕಾಸರಗೋಡು: ಎಸ್‌ಐಆರ್ ಚಟುವಟಿಕೆಗೆ ಸಂಬಂಧಿಸಿ ಅತ್ಯುತ್ತಮ ಬೂತ್ ಲೆವೆಲ್ ಆಫೀಸರ್ ಆಗಿ ಆಯ್ಕೆಯಾದ ನೆಕ್ರಾಜೆ ನಿವಾಸಿ ರಾಜೇಶ್ ಸಿ.ಎಚ್.ರನ್ನು ಜಿಲ್ಲಾಧಿಕಾರಿ ಕೆ. ಇಂಭ ಶೇಖರ್ ಗೌರವಿಸಿದರು. ಕಾಸರಗೋಡು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಗೌರವಿಸಿದ್ದು, ಇವರು ಕಾಸರಗೋಡು ವಿಧಾನಸಭಾ ಕ್ಷೇತ್ರದ ೧೪೨ನೇ ಬೂತ್ ಲೆವೆಲ್ ಆಫೀಸರ್ ಆಗಿದ್ದಾರೆ. ಎಸ್‌ಐಆರ್‌ಗೆ ಸಂಬಂಧಿಸಿ ಎನ್ಯುಮರೇಶನ್ ಫಾರ್ಮ್ ವಿತರಿಸಿ ಭರ್ತಿ ಗೊಳಿಸಿ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದವರಲ್ಲಿ ಇವರು ಪ್ರಥಮರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಇವರಿಗೆ ಅಭಿನಂದನೆ ಸಲ್ಲಿಸಲಾಗಿದೆ.