ಮಲ್ಲ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರ ವಾರ್ಷಿಕ ಮಹೋತ್ಸವ ಆರಂಭ

ಮಲ್ಲ: ಮಲ್ಲ ಶ್ರೀ ದುರ್ಗಾ ಪರಮೇಶ್ವರಿ ಕ್ಷೇತ್ರದಲ್ಲಿ   ವಾರ್ಷಿಕ ಮಹೋತ್ಸವಕ್ಕೆ ನಿನ್ನೆ ರಾತ್ರಿ ಧ್ವಜಾರೋಹಣ ನಡೆಸಲಾಯಿತು. ತಂತ್ರಿ ಎಂ. ರಾಧೇಶ್ಯಾಂ ಭಟ್ ಧ್ವಜಾರೋಹಣ ನಡೆಸಿದರು. ಕ್ಷೇತ್ರದ ಆಡಳಿತ ಮೊಕ್ತೇಸರ ಆನೆಮಜಲು ಸತ್ಯನಾರಾಯಣ ಭಟ್ ಸಹಿತ ಹಲವರು ಉಪಸ್ಥಿತರಿದ್ದರು. ಇಂದು ಬೆಳಿಗ್ಗೆ ಶ್ರೀ ಭೂತಬಲಿ, ತುಲಾಭಾರ ಸೇವೆ ನಡೆಯಿತು. ಮಧ್ಯಾಹ್ನ ಮಹಾಪೂಜೆ, ರಾತ್ರಿ ೯ಕ್ಕೆ ಶ್ರೀ ಭೂತಬಲಿ, ಪಾಲಕಿಸೇವೆ, ನೃತ್ಯ ನಡೆಯಲಿರುವುದು.  ವಾರ್ಷಿಕ ಮಹೋತ್ಸವ ಮಾರ್ಚ್ 5ರಂದು ಬೆಳಿಗ್ಗೆ ಶ್ರೀ ಧೂಮಾವತಿ ದೈವದ ನೇಮದೊಂದಿಗೆ ಸಮಾಪ್ತಿಗೊಳ್ಳಲಿದೆ. ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ …

ಜಿಲ್ಲೆಯಲ್ಲಿ 3 ಹೊಸ ಕೈಗಾರಿಕಾ ಪಾರ್ಕ್‌ಗಳಿಗೆ ಅನುಮತಿ

ಕಾಸರಗೋಡು: ಜಿಲ್ಲೆಯಲ್ಲಿ ನೂತನ ಮೂರು ಖಾಸಗಿ ಕೈಗಾರಿಕಾ ಪಾರ್ಕ್‌ಗಳಿಗೆ ರಾಜ್ಯ ಸರಕಾರ ಅನುಮತಿ ನೀಡಿದೆ. ಇದರೊಂದಿಗೆ ಈ ಮೊದಲು ಅನುಮತಿ ಲಭಿಸಿದ ಪಾರ್ಕ್‌ಗಳು ಸಹಿತ ಜಿಲ್ಲೆಯಲ್ಲಿ ಖಾಸಗಿ ಕೈಗಾರಿಕಾ ಪಾರ್ಕ್‌ಗಳ ಸಂಖ್ಯೆ ಆರು ಆಗಿ ಹೆಚ್ಚಳಗೊಂಡಿದೆ. ಕೈಗಾರಿಕಾ ಅಗತ್ಯಗಳಿಗೆ ಹೆಚ್ಚು ಭೂಮಿ ಲಭ್ಯಗೊಳಿಸುವುದಕ್ಕಾಗಿ ರಾಜ್ಯ ಸರಕಾರ ಆವಿಷ್ಕರಿಸಿದ ಯೋಜನೆಯಾಗಿದೆ ಖಾಸಗಿ ಕೈಗಾರಿಕಾ ಪಾರ್ಕ್ ಯೋಜನೆ. ಕನಿಷ್ಠ 10 ಎಕ್ರೆ ಭೂಮಿ ಸ್ವಂತವಾಗಿ ಇರುವ ಖಾಸಗಿ ವ್ಯಕ್ತಿಗಳಿಗೆ, ಗ್ರೂಪ್‌ಗಳಿಗೆ, ಕಂಪೆನಿಗಳಿಗೆ ಕೈಗಾರಿಕಾ ಪಾರ್ಕ್ ಸ್ಥಾಪಿಸುವುದಕ್ಕೆ 3 ಕೋಟಿ ರೂ.ವರೆಗೆ …

ದಿನೇಶ್ ಬೀಡಿ ನೌಕರೆಗೆ ಬೀಳ್ಕೊಡುಗೆ 

ಬದಿಯಡ್ಕ: ದಿನೇಶ್ ಬೀಡಿ ಕಂಪೆನಿಯ ಬದಿಯಡ್ಕ ಶಾಖೆಯಲ್ಲಿ 40 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಓಮನ ಅವರಿಗೆ ಬೀಳ್ಕೊಡುಗೆ ನೀಡಲಾಯಿತು. ದಿನೇಶ್ ಬೀಡಿ ಶಾಖೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಖೆಯ ಕಾರ್ಯದರ್ಶಿ ಶ್ರೀಜ ಅವರು ಕಾಲುದೀಪ ನೀಡಿ ಓಮನರನ್ನು ಸನ್ಮಾನಿಸಿದರು. ನೌಕರರಾದ  ಚಂದ್ರನ್, ಸರೋಜಿನಿ ಸ್ಮರಣಿಕೆ ನೀಡಿ, ಶಾಲು ಹೊದಿಸಿ ಗೌರವಿಸಿದರು. ಓಮನ ೧೯೮೬ರಲ್ಲಿ  ದಿನೇಶ್ ಬೀಡಿ ಕಂಪೆನಿಯಲ್ಲಿ ಕೆಲಸಕ್ಕೆ ಸೇರ್ಪಡೆಗೊಂಡಿದ್ದರು.  ಇವರು ಬದಿಯಡ್ಕದಲ್ಲಿ ಪತ್ರಿಕೆ ವಿತರಣೆ ನಡೆಸುವ  ಬಾಲಕೃಷ್ಣರ ಪತ್ನಿಯಾಗಿದ್ದಾರೆ. ವಿನೋದ್, ಚಿತ್ರ ಎಂಬಿವರು ಮಕ್ಕಳಾಗಿದ್ದಾರೆ.

ಐಲ ಶ್ರೀ ದುರ್ಗಾಪರಮೇಶ್ವರಿ ಮಹಿಳಾ ಸಂಘದ ಬೆಳ್ಳಿಹಬ್ಬ ಆಚರಣೆ

ಉಪ್ಪಳ: ಐಲ ಶ್ರೀ ದುರ್ಗಾ ಪರಮೇಶ್ವರೀ ಕ್ಷೇತ್ರದಲ್ಲಿ ಕಳೆದ 25 ವರ್ಷಗಳಿಂದ ಧಾರ್ಮಿಕ, ಸಾಂಸ್ಕೃತಿಕ, ಸೇವೆ ಹಾಗೂ ಸಮಾಜಮುಖಿ ಕಾರ್ಯಕ್ರಮಗಳಿಂದ ತೊಡಗಿಸಿಕೊಂ ಡಿದ್ದ ಶ್ರೀ ದುರ್ಗಾ ಪರಮೇಶ್ವರೀ ಮಹಿಳಾ ಸಂಘದ ಬೆಳ್ಳಿಹಬ್ಬ ಇತ್ತೀಚೆಗೆ ಐಲ ಕ್ಷೇತ್ರ ಪರಿಸರದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ, ಸಭಾ ಕಾರ್ಯ ಕ್ರಮ ಗಳಿಂದೊಡಗೂಡಿ ನೆರವೇರಿತು. ಐಲ ಕ್ಷೇತ್ರದಲ್ಲಿ ಬೆಳಿಗ್ಗೆ ಗಣಹೋಮ, ಶ್ರೀ ದುರ್ಗಾ ಪರಮೇಶ್ವರೀ ಮಹಿಳಾ ಸಂಘದಿಂದ, ಕುಕ್ಕಾಡಿ ಶ್ರೀ ಭಗವತೀ ಮಹಿಳಾ ಸಂಘದ ಸದಸ್ಯೆಯರಿಂದ ಭಜನೆ ಸೇವೆ ನಡೆಯಿತು. ವೇದ ಮೂರ್ತಿ …