ಅನಧಿಕೃತ ಹಣ ವ್ಯವಹಾರ: ರಾಜ್ಯದಲ್ಲಿ ಆಪರೇಶನ್ ಸೈಬರ್ ಹಂಟ್‌ಗೆ ಚಾಲನೆ

ಕಾಸರಗೋಡು: ಡಿಜಿಟಲ್ ಪ್ಲಾಟ್ ಫಾಂ ಮೂಲಕ ಅನಧಿಕೃತ ವಾಗಿ ಹಣ ಹಸ್ತಾಂತರಿಸುವುದನ್ನು ಪತ್ತೆಹಚ್ಚಲು ರಾಜ್ಯದಲ್ಲಿ  ಪ್ರತ್ಯೇಕ ಕಾರ್ಯಾಚರಣೆ ಆರಂಭಿಸಲಾಗಿದೆ. ‘ಸೈಬರ್ ಹಂಟ್’ ಎಂಬ ಹೆಸರಲ್ಲಿ ನಡೆಯುವ ಈ ಕಾರ್ಯಾಚರಣೆಗೆ ಇಂದು ಬೆಳಿಗ್ಗೆ ಚಾಲನೆ ನೀಡಲಾಗಿದೆ. ರಾಜ್ಯದಲ್ಲಿ ಏಕ ಕಾಲದಲ್ಲಿ ನಡೆಯುತ್ತಿರುವ ಕಾರ್ಯಾ ಚರಣೆಗೆ ಸೈಬರ್ ಪೊಲೀಸರು ನೇತೃತ್ವ ನೀಡುತ್ತಿದ್ದಾರೆ. ಆದರೆ ಇದುವರೆಗೆ ಎಲ್ಲಿಯೂ ಕೇಸು ದಾಖಲಿಸಿಕೊಂಡ ಬಗ್ಗೆ ಮಾಹಿತಿ ಲಭಿಸಿಲ್ಲ.  ಈ ಹಿಂದೆ ಕರೆನ್ಸಿಯಾಗಿ ಅನಧಿಕೃತ ಹಣ ಹಸ್ತಾಂತರ ನಡೆಯುತ್ತಿತ್ತು. ಇದು ಪತ್ತೆಹಚ್ಚಲ್ಪಡುವ ಹಿನ್ನೆಲೆಯಲ್ಲಿ ಡಿಜಿಟಲ್ ಪ್ಲಾಟ್ …

ತಂದೆಯ ಅಪರಿಮಿತ ಮದ್ಯಪಾನ: ಪ್ಲಸ್‌ವನ್ ವಿದ್ಯಾರ್ಥಿನಿ ಕೈಯ ನರ ಕತ್ತರಿಸಿ ಆಸ್ಪತ್ರೆಯಲ್ಲಿ ದಾಖಲು

ಕಾಸರಗೋಡು: ತಂದೆಯ ಅಪರಿಮಿತ ಮದ್ಯಪಾನದಿಂದ ಮನನೊಂದು ಪ್ಲಸ್‌ವನ್ ವಿದ್ಯಾರ್ಥಿನಿ ಆತ್ಮಹತ್ಯೆಗೆತ್ನಿಸಿ ಆಸ್ಪತ್ರೆಯಲ್ಲಿ ದಾಖಲಾದ ಘಟನೆ ನಡೆದಿದೆ.  ಮೇಲ್ಪರಂಬ ಪೊಲೀಸ್ ಠಾಣೆಯಲ್ಲಿ ವಾಸಿಸುವ ೧೬ರ ಹರೆಯದ ಬಾಲಕಿ ಕೈಯ ನರ ಕತ್ತರಿಸಿ ಅಸ್ವಸ್ಥಗೊಂಡಿದ್ದು, ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದಾಳೆ. ಬಾಲಕಿ ಅಪಾಯದಿಂದ ಪಾರಾಗಿದ್ದಾಳೆಂದು  ಆಸ್ಪತ್ರೆ ಮೂಲಗಳು ತಿಳಿಸಿವೆ. ಕಳೆದ ದಿನ ರಾತ್ರಿ ಈ ಘಟನೆ ನಡೆದಿದೆ.  ತಂದೆ  ಅಪರಿಮಿತವಾಗಿ ಮದ್ಯ ಸೇವಿಸುತ್ತಿರುವುದರಿಂದ ಕುಟುಂಬದಲ್ಲಿ ಉಂಟಾಗುವ ಸಮಸ್ಯೆಗಳನ್ನು ನೆನೆದು  ಬಾಲಕಿ ತೀವ್ರವಾಗಿ ನೊಂದುಕೊಂಡಿ ದ್ದಳೆನ್ನಲಾಗಿದೆ.  ಮದ್ಯ ಸೇವಿಸದಂತೆ ಹಲವು ಬಾರಿ …

ಜ್ಯುವೆಲ್ಲರಿ ಮಾಲಕ ನಿಧನ

ಉಪ್ಪಳ: ಕುಂಬಳೆ ಶ್ರೀ ಗೋಪಾಲಕೃಷ್ಣ ಕ್ಷೇತ್ರ ರಸ್ತೆಯಲ್ಲಿ ಸುಮಾರು 45 ವರ್ಷಗಳಿಂದ ಕಾರ್ಯಾಚರಿಸುತ್ತಿದ್ದ ಗೀತಾ ಜ್ಯುವೆಲ್ಲರಿ ಮಾಲಕ ಕುಂಬಳೆ ಹೈಸ್ಕೂಲ್ ಬಳಿಯ ನಿವಾಸಿ ಕೆ.ಜನಾರ್ದನ ಆಚಾರ್ಯ (86) ನಿಧನ ಹೊಂದಿದರು. ನಿನ್ನೆ ಸಂಜೆ ಮನೆಯಿಂದ ಕುಂಬಳೆ ಪೇಟೆಗೆ ತಲುಪಿದ್ದ ಇವರಿಗೆ ಹೃದಯÁ ಘಾತ ಉಂಟಾಗಿದ್ದು, ಕೂಡಲೇ ಸ್ಥಳೀಯರು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಗೆ ತಲುಪಿಸಿದರೂ ಅಷ್ಟರಲ್ಲಿ ನಿಧನ ಸಂಭವಿಸಿದೆ. ಇವರು ಆರ್.ಎಸ್.ಎಸ್ ಹಿರಿಯ ಸ್ವಯಂ ಸೇವಕರಾಗಿದ್ದರು. ಬಂಗ್ರಮAಜೇಶ್ವರ ಶ್ರೀ ಕಾಳಿಕಾಪರಮೇಶ್ವರೀ ಕ್ಷೇತ್ರದ ಮಾಜಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.ಮೃತರು …

ಮಜಿಬೈಲು ಬಳಿ ಜುಗಾರಿ ದಂಧೆ: ಓರ್ವ ಸೆರೆ; ಹಲವರು ಪರಾರಿ

ಮಂಜೇಶ್ವರ: ಜುಗಾರಿ ಕೇಂದ್ರಕ್ಕೆ ಮಂಜೇಶ್ವರ ಪೊಲೀಸರು ದಾಳಿ ನಡೆಸಿ ಓರ್ವನನ್ನು ಸೆರೆಹಿಡಿದಿದ್ದಾರೆ. ಈ ವೇಳೆ ಹಲವರು ಓಡಿ ಪರಾರಿಯಾಗಿದ್ದಾರೆ. ಕಡಂಬಾರು ದುರ್ಗಿಪಳ್ಳ ಚೇತನ್ ನಗರದ ಪ್ರಶಾಂತ್ ಕುಮಾರ್ ಟಿ (38) ಬಂಧಿತ ವ್ಯಕ್ತಿಯಾಗಿದ್ದಾನೆ. ಜುಗಾರಿ ಸ್ಥಳದಿಂದ 3540 ರೂ. ವಶಪಡಿಸಿರುವುದಾಗಿ ಪೊಲೀಸರು  ತಿಳಿಸಿದ್ದಾರೆ.  ಮಜಿಬೈಲು ಪಟ್ಟತ್ತೂರು ಕ್ಷೇತ್ರ ಸಮೀಪದ ಹಿತ್ತಿಲಲ್ಲಿ ಇಂದು ಮುಂಜಾನೆ 4.30ರ ವೇಳೆ ಜುಗಾರಿ ದಂಧೆ ನಡೆಯುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಎಸ್‌ಐ ವೈಷ್ಣವ್ ನೇತೃತ್ವದ ಪೊಲೀಸರು ಅಲ್ಲಿಗೆ ದಾಳಿ …

ಮಲೆಯಾಳಂ ಇನ್ನು ಕೇರಳದ ಅಧಿಕೃತ ಭಾಷೆ: ಮಸೂದೆಗೆ ರಾಜ್ಯಪಾಲರ ಅಂಕಿತ: ಮುಂದುವರಿಯುತ್ತಿರುವ ಕಾಸರಗೋಡು ಕನ್ನಡಿಗರ ಆತಂಕ

ತಿರುವನಂತಪುರ: ಮಲೆಯಾಳಂ ಭಾಷೆಗೆ ಕೇರಳದ ಏಕೈಕ ಅಧಿಕೃತ ಭಾಷಾ ಸ್ಥಾನಮಾನ ಕಲ್ಪಿಸುವ ಉದ್ದೇಶದಿಂದ ರಾಜ್ಯ ವಿಧಾನಸಭೆ ಕಳೆದ ಅಕ್ಟೋಬರ್ ೯ರಂದು ಅನುಮೋದನೆ ನೀಡಿದ ಮಲೆಯಾಳಂ  ಭಾಷಾ ಮಸೂದೆ-೨೦೨೫ಕ್ಕೆ ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಅಂಕಿತ ಹಾಕಿದ್ದಾರೆ. ಈ ಮೂಲಕ ಮಲೆಯಾಳಂ ಕೇರಳದ ಏಕೈಕ ಅಧಿಕೃತ ಭಾಷೆಯಾಗಿ  ವಿದ್ಯುಕ್ತವಾಗಿ ಕಾಯ್ದೆ ರೂಪದಲ್ಲಿ ಜ್ಯಾರಿಗೆ ಬಂದಿದೆ. ಕೇರಳದಲ್ಲಿ  ಮಲೆಯಾಳಂ ಭಾಷಾ ಕಲಿಕೆಯನ್ನು ಕಡ್ಡಾಯಗೊಳಿಸುವ ಉದ್ದೇಶದಿಂದ ೨೦೧೫ ಡಿಸೆಂಬರ್‌ನಲ್ಲಿ  ರಾಜ್ಯ ವಿಧಾನಸಭೆ  ಅಂಗೀಕರಿಸಿದ ಮಲೆಯಾಳಂ ಭಾಷೆ (ವಿಸ್ತರಣೆ ಹಾಗೂ ಪರಿಪಾಲನೆ) ಮಸೂದೆಗೆ ಅಂದು …

ಪುತ್ತಿಗೆಯಲ್ಲಿ  ವಿರಾಟ್ ಹಿಂದೂ ಸಂಗಮ: ಶ್ರೀ ಆನಂದವನ ಭಾರತೀ ಸ್ವಾಮೀಜಿಯವರಿಂದ ಆಶೀರ್ವಚನ

ಸೀತಾಂಗೋಳಿ : ಭಾರತದ ನಾಗಸಾಧುಗಳ ಪಂಥ (ಅಖಾಡ) ಗಳಲ್ಲಿ ಅತ್ಯಂತ ಪ್ರಾಚೀನ ಹಾಗೂ 13 ಪಂಥಗಳಲ್ಲಿಯೇ ಅತ್ಯಂತ ಪ್ರಬಲ ಹಾಗೂ ಮೊದಲ ಪಂಥವಾದ ‘ಜೂನಾ ಪಂಥದ’ ಮಹಾ ಮಂಡಲೇಶ್ವರ ಶ್ರೀ ಆನಂದವನ ಭಾರತಿ ಸ್ವಾಮೀಜಿ ಮಾ.8ರಂದು ಪುತ್ತಿಗೆಗೆ ಆಗಮಿಸಲಿದ್ದಾರೆ.ಸುಮಾರು 271 ವರ್ಷಗಳ ಹಿಂದೆ ಬ್ರಿಟಿಷರು ನಿಲುಗಡೆಗೊಳಿಸಿದ ಮಲಪ್ಪುರಂನ ಭಾರತಹೊಳೆಯ ತೀರದಲ್ಲಿ ತಿರುನಾವಾಯ ಎಂಬಲ್ಲಿನ ಶ್ರೀ ಮುಕುಂದೇಶ್ವರ ದೇವಾಲಯದಲ್ಲಿ ‘ಮಹಾಮಾ ಮಾಂಕಂ’ ಅಥವಾ ಕೇರಳದ ಕುಂಭಮೇಳನ್ನು ಮರು ಆರಂ ಭಿಸಿದ ಸ್ವಾಮೀಜಿ ಎನ್ನುವ ಗೌರವನ್ನು ಹೊಂದಿರುವ ಇವರ ಮೊದಲ …

ಶಾಸಕರ ಅನಾಸ್ಥೆಯಿಂದ ಮಲೆಯಾಳಂ ಭಾಷಾ ಮಸೂದೆ ಜ್ಯಾರಿಯಾಗಿದೆ- ಕೆ. ಸುರೇಂದ್ರನ್ ಆರೋಪ

ಹೊಸಂಗಡಿ: ಕೇರಳದಲ್ಲಿ ಎಡಂರಂಗ ಸರಕಾರ ಭಾಷಾ ಮಸೂದೆ ಜ್ಯಾರಿಗೆ ತಂದಿರುವುದು  ಭಾಷಾ ಅಲ್ಪಸಂಖ್ಯಾತರಾದ ಗಡಿನಾಡು ಕನ್ನಡಿಗರಿಗೆ ಅನ್ಯಾಯವಾಗಲಿದೆ ಎಂದು ಬಿಜೆಪಿ ರಾಜ್ಯ ಮಾಜಿ ಅಧ್ಯಕ್ಷ ಕೆ. ಸುರೇಂದ್ರನ್ ನುಡಿದರು. ಇನ್ನು ಮುಂದೆ ರಾಜ್ಯದ ಶಾಲೆಗಳಲ್ಲಿ ಕಡ್ಡಾಯ ಮಲೆಯಾಳಂ ಕಲಿಕೆ ಜ್ಯಾರಿಯಾಗಲಿದೆ. ಪಿಎಸ್‌ಸಿ ಪರೀಕ್ಷೆಯಲ್ಲಿ ಕನ್ನಡಿಗರಿಗೆ ಅನ್ಯಾಯವಾಗಲಿದೆ. ಸರಕಾರಿ ಉದ್ಯೋಗ ಗಡಿನಾಡ ಕನ್ನಡಿಗರಿಗೆ ಮರೀಚಿಕೆಯಾಗಲಿದೆ ಎಂದು, ಇದಕ್ಕೆ ವಿಧಾನಸಭೆಯಲ್ಲಿ ಭಾಷಾ ಮಸೂದೆ ಮಂಡನೆಯಾಗುವಾಗ ಗೈರುಹಾಜರಾದ ಶಾಸಕ ಎಕೆಎಂ ಅಶ್ರಫ್‌ರ ಬೇ ಜವಾಬ್ದಾರಿ ಕಾರಣವೆಂದು ಸುರೇಂದ್ರನ್ ದೂರಿದರು. ಕಡ್ಡಾಯ ಮಲೆಯಾಳ …

ಶುಚಿತ್ವ, ಕುಡಿಯುವ ನೀರಿಗೆ ಪೈವಳಿಕೆ ಪಂ.ಬಜೆಟ್‌ನಲ್ಲಿ ಆದ್ಯತೆ

ಪೈವಳಿಕೆ: ಶುಚಿತ್ವ ಹಾಗೂ ಕುಡಿಯುವ ನೀರಿನ ಯೋಜನೆಗಳಿಗೆ  ಪ್ರಾಮುಖ್ಯತೆ ನೀಡಿ ಪೈವಳಿಕೆ ಪಂಚಾಯತ್ ಮುಂಗಡಪತ್ರ ಮಂಡಿಸಲಾಗಿದೆ. ಉಪಾಧ್ಯಕ್ಷ ರಾಘವೇಂದ್ರ ಭಟ್ ಬಜೆಟ್ ಮಂಡಿಸಿದರು. ಅಧ್ಯಕ್ಷೆ ಬದರುನ್ನೀಸ ಸಲೀಂ ಅಧ್ಯಕ್ಷತೆ ವಹಿಸಿದ್ದರು. ತ್ಯಾಜ್ಯ ಸಂಸ್ಕರಣ ಪ್ಲಾಂಟ್ ಅಭಿವೃದ್ಧಿ ಪಡಿಸಿ ಪೂರ್ಣ ಪ್ರಮಾಣದಲ್ಲಿ ಸಂಸ್ಕರಿಸುವ ಮೂಲಕ ಪಂಚಾಯತ್‌ನ ಎಲ್ಲಾ ಪ್ರದೇಶಗಳಿಂದಲೂ ನಿಯಮಿತವಾಗಿ ತ್ಯಾಜ್ಯ ಸಂಗ್ರಹಿಸಲು ಯೋಜನೆ ರೂಪೀಕರಿಸಲಾಗಿದೆ. ಕೃಷಿ ಹಾಗೂ ಆರೋಗ್ಯರಂಗಕ್ಕೂ ಬಜೆಟ್‌ನಲ್ಲಿ ಅನುದಾನ ಮೀಸಲಿಡಲಾಗಿದೆ. ಮಹಿಳಾ ಶಿಶು ಅಭಿವೃದ್ಧಿ ವಿಭಾಗಕ್ಕೂ ಅಗತ್ಯದ ಪರಿಗಣನೆ ನೀಡಲಾಗಿದೆ. ಬಜೆಟ್ ಮಂಡನಾ ಸಭೆಯಲ್ಲಿ …

ಮುನಿಯೂರು ದೇವಸ್ಥಾನದಲ್ಲಿ ಪ್ರತಿಷ್ಠೆ ನಾಳೆ

ಕುಂಬ್ಡಾಜೆ: ಮುನಿಯೂರು ಮುನಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಪ್ರಯುಕ್ತ ಇಂದು ಜೀವ ಕಲಶಪೂಜೆ ಸಹಿತ ವಿವಿಧ ವೈದಿಕ ಕಾರ್ಯಕ್ರಮಗಳು ನಡೆಯಲಿದೆ. ಸಂಜೆ 5.30ರಿಂದ ಮಾರ್ಪನಡ್ಕ ಜಯನಗರ ಶ್ರೀ ಗೋಪಾಲಕೃಷ್ಣ ಭಜನಾಮಂದಿರದಿಂದ ಹೊರೆಕಾಣಿಕೆ ಮೆರವಣಿಗೆ, ರಾತ್ರಿ ವಿದ್ವಾನ್ ಬಾಲಕೃಷ್ಣ ಮಾಸ್ತರ್ ಮಂಜೇಶ್ವರ ಇವರ ಶಿಷ್ಯವೃಂದದವರಿಂದ ಭರತನಾಟ್ಯ ಪ್ರದರ್ಶನಗೊಳ್ಳಲಿದೆ. ನಾಳೆ ಬೆಳಿಗ್ಗೆ 108 ತೆಂಗಿನಕಾಯಿ ಗಣಪತಿ ಹೋಮ, ಪ್ರತಿಷ್ಠಾಪಾಣಿ ಶ್ರೀ ದೇವರ ಪ್ರತಿಷ್ಠೆ, ಅಂಕುರ ಪೂಜೆ ಮೊದಲಾದ ವೈದಿಕ ಕಾರ್ಯಕ್ರಮಗಳು, ಸಂಜೆ 7ರಿಂದ ಪ್ರೊಫೆಸರ್ …

ಮುಜುಂಗಾವಿನಲ್ಲಿ 8 ಎಕ್ರೆಯಷ್ಟು ಪಾರೆಯ ಹುಲ್ಲಿಗೆ ಬೆಂಕಿ ತಗಲಿ ಆತಂಕ: ಅಗ್ನಿಶಾಮಕದಳ, ಸ್ಥಳೀಯರಿಂದ ನಿಯಂತ್ರಣ

ಕುಂಬಳೆ: ಮುಜುಂಗಾವುನಲ್ಲಿ ಸಂಭವಿಸಿದ ಬೆಂಕಿ ಆಕಸ್ಮಿಕ ಆತಂಕಕ್ಕೆ ಕಾರಣವಾಗಿದೆ. ಮಾಹಿತಿ ತಿಳಿದು ಉಪ್ಪಳದಿಂದ ತಲುಪಿದ ಅಗ್ನಿಶಾಮಕದಳ ಹಾಗೂ ಸ್ಥಳೀಯರು ಸೇರಿ ಬೆಂಕಿ ನಿಯಂತ್ರಿಸಿದರು. ಮುಜುಂಗಾವಿನ ಎಂಟು ಎಕ್ರೆಯಷ್ಟು ಇರುವ ಪಾರೆಯಲ್ಲಿದ್ದ ಹುಲ್ಲಿಗೆ ಬೆಂಕಿ ತಗಲಿದೆ. ಇದೇ ವೇಳೆ ಬೀಸಿದ ಗಾಳಿಯಿಂದಾಗಿ ಬೆಂಕಿ ಆ ಪರಿಸರವನ್ನೆಲ್ಲಾ ಆವರಿಸಿದೆ. ಈ ಪರಿಸರದಲ್ಲಿರುವ ಕಟ್ಟಡದ ಜನರು ಹಾಗೂ ಸ್ಥಳೀಯರು ಭೀತಿಗೊಂಡಿದ್ದು, ನೀರು ಸಿಂಪಡಿಸಿ ಬೆಂಕಿ ಹರಡುವುದನ್ನು ನಿಯಂತ್ರಿಸಿದರು. ಬೆಂಕಿ ಸೃಷ್ಟಿಗೆ ಕಾರಣವೇನೆಂದು ತಿಳಿದು ಬಂದಿಲ್ಲ.