ಬಾಲಕಿಯ ಮುಂದೆ ನಗ್ನತೆ ಪ್ರದರ್ಶನ: ಮಣಿಯಂಪಾರೆಯಲ್ಲಿ ವಾಸಿಸುವ ಯುವಕ ಸೆರೆ

ಕುಂಬಳೆ: 12ರ ಹರೆಯದ ಬಾಲಕಿಯ ಮುಂದೆ ನಗ್ನತೆ ಪ್ರದ ರ್ಶಿಸಿದ ಯುವಕನನ್ನು ಪೊಲೀಸರು ಪೋಕ್ಸೋ ಪ್ರಕಾರ ಬಂಧಿಸಿದ್ದಾರೆ. ವಯನಾಡ್ ಕಲ್ಪೆಟ್ಟ ನಿವಾಸಿಯೂ ಶೇಣಿ ಮಣಿಯಂಪಾರೆ ಯಲ್ಲಿ ವಾಸಿಸುವ ಅದ್‌ನುಲ್ ಫಾರಿಸ್ (22) ಎಂಬಾತನನ್ನು ಕುಂಬಳೆ ಪೊಲೀಸ್ ಇನ್ಸ್‌ಪೆಕ್ಟರ್ ಬೈಜು ಕೆ. ಜೋಸ್, ಎಸ್‌ಐಗಳಾದ ಕೆ. ಸನಿತ್, ಅನಂತಕೃಷ್ಣನ್ ಆರ್. ಮೆನೋನ್ ಎಂಬಿವರು ಸೇರಿ ಬಂಧಿಸಿದ್ದಾರೆ. ಆರೋಪಿಯನ್ನು ಇಂದು ನ್ಯಾಯಾ ಲಯದಲ್ಲಿ ಹಾಜರು ಪಡಿಸಲಾಗುವುದು. ನಿನ್ನೆ ಬಾಲಕಿ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ವೇಳೆ ಕಾರಿನೊಂದಿಗೆ ತಲುಪಿದ ಅದ್‌ನುಲ್ ಫಾರಿಸ್ …

ಮನೆಗೆ ನುಗ್ಗಿ ಬೆಲೆಬಾಳುವ ಸಾಮಗ್ರಿಗಳನ್ನು ಕಳವುಗೈದ ಇಬ್ಬರು ಆರೋಪಿಗಳ ಸೆರೆ

ಕಾಸರಗೋಡು: ಬೀಗ ಒಡೆದು ಮನೆಯೊಳಗೆ ನುಗ್ಗಿ ಭಾರೀ ಮೌಲ್ಯದ ಸಾಮಗ್ರಿಗಳನ್ನು ಕಳವುಗೈದ ಪ್ರಕರಣದ ಕುಖ್ಯಾತ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಪಾಲಕ್ಕಾಡ್ ನೈಮಾರ ನಿವಾಸಿ ಶೆಟ್ಟರ್ ಜಲೀಲ್ (38) ಮತ್ತು ಮಂಗಲಾಡಂ ನಿವಾಸಿ ವಿಶ್ವನಾಥನ್ (35) ಬಂಧಿತ ಆರೋಪಿಗಳು. ಕಳೆದವರ್ಷ ಡಿಸೆಂಬರ್ ೨೬ರಂದು ಅಂಬಲತ್ತರಕ್ಕೆ ಸಮೀಪದ ಮುಟ್ಟಿಚರಲಿಯ ಮನೆಯೊಂದರ ಬೀಗ ಒಡೆದು ಒಳನುಗ್ಗಿ ಲ್ಯಾಪ್‌ಟೋಪ್, ಕ್ಯಾಮರಾ ಸೇರಿದಂತೆ ಒಂದು ಲಕ್ಷ ರೂ. ಮೌಲ್ಯದ ಸಾಮಗ್ರಿಗಳನ್ನು ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಈ ಇಬ್ಬರು ಆರೋಪಿಗಳನ್ನು ಅಂಬಲತ್ತರ ಪೊಲೀಸರು ಬಂಧಿಸಿದ್ದಾರೆ. ಬೈಕ್‌ನಲ್ಲಿ …

ಹೃದಯಾಘಾತದಿಂದ ಯುವಕ ನಿಧನ

ಕುಂಬಳೆ: ಯುವಕನೋರ್ವ ಹೃದಯಾಘಾತದಿಂದ ನಿಧನ ಹೊಂದಿದರು. ಪೊನ್ನೆಂಗಳ ಮುಗು ರೋಡ್ ನಿವಾಸಿ ದಿ| ನಾರಾಯಣ ಎಂಬವರ ಪುತ್ರ ಕುಮಾರನ್ (40) ಮೃತಪಟ್ಟ ವ್ಯಕ್ತಿ. ಇವರು ಟೈಲ್ಸ್ ಕಾರ್ಮಿಕನಾಗಿದ್ದರು. ಇಂದು ಮುಂಜಾನೆ 3.30ರ ವೇಳೆ ಇವರಿಗೆ ಮನೆಯಲ್ಲಿ ಎದೆನೋವು ಕಾಣಿಸಿಕೊಂಡಿತ್ತೆನ್ನಲಾಗಿದೆ. ಕೂಡಲೇ ಮನೆಯವರು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಗೆ ತಲುಪಿಸಿದ್ದು, ಆದರೂ ಜೀವ ರಕ್ಷಿಸಲಾಗಲಿಲ್ಲ. ಈ ಬಗ್ಗೆ ಆಸ್ಪತ್ರೆ ಅಧಿಕಾರಿಗಳು ನೀಡಿದ ಮಾಹಿತಿಯಂತೆ ಕುಂಬಳೆ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತರು ತಾಯಿ ಜಾನಕಿ, ಸಹೋದರ ವಿಜಯ, …

ಬಿಜೆಪಿ ರೋಡ್‌ಶೋ 28ರಂದು: ತೇಜಸ್ವಿ ಸೂರ್ಯ ಬದಿಯಡ್ಕಕ್ಕೆ

ಬದಿಯಡ್ಕ: ಕಾಸರಗೋಡು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಶ್ವಿನಿ ಎಂ.ಎಲ್.ರ ಪ್ರಚಾರಾರ್ಥ ಬೆಂಗಳೂರು ಸಂಸದ, ಯುವಮೋರ್ಛಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಈ ತಿಂಗಳ 28ರಂದು ಸಂಜೆ 4 ಗಂಟೆಗೆ ಬದಿಯಡ್ಕಕ್ಕೆ ತಲುಪುವರು. ಅಂದು ಬದಿಯಡ್ಕದಲ್ಲಿ ನಡೆಯುವ ರೋಡ್‌ಶೋದಲ್ಲಿ ಅವರು ಭಾಗವಹಿಸುವರು. ಬೋಳುಕಟ್ಟೆ ಮೈದಾನ ಬಳಿಯಿಂದ ಆರಂಭವಾಗುವ ರೋಡ್‌ಶೋ ಪೇಟೆ ಸುತ್ತಿ ಸಮಾಪ್ತಿಗೊಳ್ಳಲಿದೆ.

ಅಬುದಾಬಿ ಕೆಎಂಸಿಸಿ ಮಾಜಿ ನೇತಾರ ನಿಧನ

ಕುಂಬಳೆ: ಸಾಮಾಜಿಕ, ಸಾಂಸ್ಕೃತಿಕ, ಕ್ಷೇಮ ಚಟುವಟಿಕೆಗಳಲ್ಲಿ ನಿರತನಾಗಿದ್ದ ಮಾಜಿ ಅಬುದಾಬಿ ಕೆಎಂಸಿಸಿ ನೇತಾರನೂ, ದುಬೈ ಮಲಬಾರ್ ಕಲಾ ಸಾಂಸ್ಕೃತಿಕೆಯ ವೇದಿಕೆ ಕೋಶಾಧಿಕಾರಿಯಾದ ಸಯ್ಯಿದ್ ಶಾಹುಲ್ ಹಮೀದ್ ತಂಙಳ್ ಮಾಳಿಗ ಕುಂಬೋಲ್ (53) ನಿಧನ ಹೊಂದಿದರು. ದುಬೈಯಲ್ಲಿ ಅಲ್‌ಜಬೀನ್ ಎಂಬ ಸಂಸ್ಥೆಯ ಮೆನೇಜಿಂಗ್ ಡೈರಕ್ಟರ್ ಆಗಿದ್ದರು. ಮಂಗಳೂರಿನ ಆಸ್ಪತ್ರೆಯಲ್ಲಿ ನಿನ್ನೆ ರಾತ್ರಿ ನಿಧನ ಸಂಭವಿಸಿದೆ. ದಿ| ಕುಂಬೋಲ್ ಸಯ್ಯಿದ್ ಮುಹಮ್ಮದ್ ತಂಙಳ್ ಮಾಳಿಗ-ಮೈಮೂನ ಬೀವಿ ದಂಪತಿ ಪುತ್ರನಾದ ಮೃತರು ಪತ್ನಿ ಸಯ್ಯಿದತ್ ಅಸ್ಮಾ ಬೀವಿ, ಮಕ್ಕಳಾದ ಸಯ್ಯಿದ್ ಇಸ್ಮಾಯಿಲ್, …

ಜಿಮ್ನೇಶ್ಯಮ್ ಮರೆಯಲ್ಲಿ ಮಾದಕವಸ್ತು ಮಾರಾಟ ನಡೆಸುತ್ತಿದ್ದ ಯುವತಿ ಸೆರೆ

ತೃಶೂರು: ಜಿಮ್ನೇಶ್ಯಮ್ ಹಾಗೂ ಬ್ಯೂಟಿ ಸೆಲೂನ್‌ನ ಮರೆಯಲ್ಲಿ  ಮಾದಕವಸ್ತು ಮಾರಾಟ ನಡೆಸುತ್ತಿದ್ದ ಯುವತಿಯನ್ನು ಪೊಲೀಸರು ಬಂಧಿಸಿದ್ದಾರೆ. ತೃಪ್ರಯಾರ್‌ನ ಜಿಮ್ನೇಶ್ಯಮ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಪೆರಿಂಙೋಟುಕರ ತಾನ್ಯಂ ನಿವಾಸಿ ಶ್ರೀಲಕ್ಷ್ಮಿ (30) ಸೆರೆಗೀಡಾದ ಯುವತಿ. ಈಕೆಯ ಕೈಯಿಂದ 2.270 ಕಿಲೋ ಗ್ರಾಂ ಹ್ಯಾಶಿಶ್ ಆಯಿಲ್, 90,500 ರೂ. ಹಾಗೂ ಹ್ಯಾಶಿಶ್ ಆಯಿಲ್ ಮಾರಾಟ ನಡೆಸಲು ಉಪಯೋಗಿತ್ತಿದ್ದ 50 ಖಾಲಿ ಪ್ಲಾಸ್ಟಿಕ್ ಬಾಟ್ಲಿ ಮೊದಲಾದವುಗಳನ್ನು ವಶಪಡಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಗುಪ್ತ ಮಾಹಿತಿ ಲಭಿಸಿದ ಆಧಾರದಲ್ಲಿ ತೃಶೂರು ರೂರಲ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯ …

ಎನ್‌ಡಿಎ ಅಭ್ಯರ್ಥಿ ಎಂ.ಎಲ್. ಅಶ್ವಿನಿ ವಿವಿಧೆಡೆ ಗೃಹ ಸಂಪರ್ಕ

ಕಾಸರಗೋಡು: ಕಾಸರಗೋಡು ವಿಧಾನಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಎಂ.ಎಲ್. ಅಶ್ವಿನಿ ಇಂದು  ಬೆಳಿಗ್ಗೆ ಮಧೂರು ಪೂರ್ವವಲಯ, ಮಧೂರು ಪಶ್ಚಿಮವಲಯದಲ್ಲಿ  ಗೃಹ ಸಂಪರ್ಕ ನಡೆಸಿ ಮತಯಾಚಿಸಿದರು. ಅಪರಾಹ್ನ ನಗರಸಭಾ ವೆಸ್ಟ್ ಏರಿಯಾ, ಸಂಜೆ ಮೊಗ್ರಾಲ್ ಪುತ್ತೂರಿನಲ್ಲಿ ಗೃಹ ಸಂಪರ್ಕ ನಡೆಸುವರು. ನಿನ್ನೆ ಬದಿಯಡ್ಕ ಪಂಚಾ ಯತ್‌ನ ವಿವಿಧ ಕಡೆಗಳಲ್ಲಿ ಮತ ಯಾಚನೆ ನಡೆಸಿದ್ದು, ಕಿಳಿಂಗಾರು ಸಾಯಿರಾಂ ಕೃಷ್ಣ ಭಟ್‌ರನ್ನು ಭೇಟಿ ಯಾದರು. ಬಳಿಕ ಅಳಕ್ಕೆ ತರವಾಡು ಮನೆ, ನೀರ್ಚಾಲು ಪೇಟೆ, ಕುಮಾರಮಂಗಲ ಪರಿಸರದಲ್ಲಿ ಮತ ಯಾಚಿಸಿದರು. ಇವರ ಜೊತೆ …

ಯುಡಿಎಫ್ ಮಂಜೇಶ್ವರ ಮಂಡಲ ಚುನಾವಣಾ ಸಮಾವೇಶ

ಉಪ್ಪಳ: ಯು.ಡಿ.ಎಫ್ ಮಂಜೇಶ್ವರ ಮಂಡಲ ಚುನಾವಣಾ ಸಮಾವೇಶ ನಿನ್ನೆ ನಯಬಜಾರಿ ನಲ್ಲಿರುವ ಫೆರೋ ಹಾಲ್‌ನಲ್ಲಿ ನಡೆಯಿತು. ಕರ್ನಾಟಕ ಆರೋಗ್ಯ ಮತ್ತು ದ.ಕ ಜಿಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಉದ್ಘಾಟಿಸಿದರು. ಅಜೀಜ್ ಮರಿಕೆ ಅಧ್ಯಕ್ಷತೆ ವಹಿಸಿದರು. ಸಂಸದ ರಾಜಮೋಹನ್ ಉಣ್ಣಿತ್ತಾನ್, ಅಭ್ಯರ್ಥಿ ಎ.ಕೆ.ಎಂ ಅಶ್ರಫ್, ಮಾಜಿ ಸಚಿವ ರಮಾನಾಥ ರೈ, ಆರ್.ಎಸ್.ಪಿ ನಾಯಕ ಬಾಲಕೃಷ್ಣನ್, ಎಂ.ಸಿ ಪ್ರಭಾಕರನ್, ಹಾದಿ ತಂಙಳ್, ಸುಬ್ಬಯ್ಯ ರೈ, ಸುಂದರ ಆರಿಕ್ಕಾಡಿ, ಅಶ್ರಫ್ ಕಾರ್ಲೆ, ಎ.ಕೆ ಆರೀಫ್, ಕಮಲಾಕ್ಷಿ, ಸೋಮಶೇಖರ ಜೆ.ಎಸ್, ಲಕ್ಷ÷್ಮಣ …

ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಬಿರುಸುಗೊಂಡ ಚುನಾವಣಾ ಪ್ರಚಾರ

ಉಪ್ಪಳ: ವಿಧಾನ ಸಭಾ ಕ್ಷೇತ್ರ ಚುನಾವಣೆಗೆ ಇನ್ನೂ ಕೆಲವೇ ದಿನಗಳು ಬಾಕಿ ಉಳಿದಿರುವಂತೆ ಮಂಜೇಶ್ವರ ವಿಧಾನ ಸಭಾ ಕ್ಷೇತ್ರದಲ್ಲಿ ಸ್ಪರ್ಧಾಕಣದಲ್ಲಿರುವ ಬಿಜೆಪಿ ಅಭ್ಯರ್ಥಿ ಕೆ.ಸುರೇಂದ್ರನ್, ಯು.ಡಿ.ಎಫ್ ಅಭ್ಯರ್ಥಿ ಎ.ಕೆ.ಎಂ ಅಶ್ರಫ್, ಎಡರಂಗ ಅಭ್ಯರ್ಥಿ ಕೆ.ಆರ್.ಜಯಾನಂದ ಹಾಗೂ ಎಸ್.ಡಿ.ಪಿ.ಐ ಅಭ್ಯರ್ಥಿ ಕೆ.ಎಂ ಅಶ್ರಫ್‌ರ ಪ್ರಚಾರ ಕಾರ್ಯ ಬಿರುಸುಗೊಂಡಿದೆ. ಬಿಜೆಪಿ ಅಭ್ಯರ್ಥಿ ಕೆ.ಸುರೇಂದ್ರನ್ ಸೋಂಕಾಲಿನಲ್ಲಿ ಗೋಡೆ ಬರಹದ ಮೂಲಕ ಪ್ರಚಾರಕ್ಕೆ ಚಾಲನೆ ನೀಡಿದ್ದರು. ಬಳಿಕ ವಿವಿಧ ಆರಾಧನಾಲಯದಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಹಾಗೂ ಹಿರಿಯರನ್ನು ಭೇಟಿ ಮಾಡಿ ಮತಯಾಚನೆ ನಡೆಸಿದ್ದಾರೆ. ಮಂಗಲ್ಪಾಡಿ …

ಮಲಯಾಳಂ ಭಾಷಾ ಮಸೂದೆ ವಿರುದ್ಧ ಉಚ್ಛ ನ್ಯಾಯಾಲಯದಲ್ಲ್ಲಿ ರಿಟ್ ಅರ್ಜಿ ಸಲ್ಲಿಸಲು ನಿರ್ಧಾರ

ಕಾಸರಗೋಡು: ಕೇರಳ ಸರಕಾರದ ಮಲಯಾಳ ಭಾಷಾ ಮಸೂದೆಯ ವಿರುದ್ಧ ಕಾಸರಗೋಡಿನ ಕನ್ನಡಿಗರು ಮತ್ತು ಕನ್ನಡ ಸಂಘಟ ನೆಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಈ ಕುರಿತು ಉಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಲು ಸಿದ್ಧತೆ ಅಂತಿಮ ಹಂತದಲ್ಲಿದೆ.ಈ ಮಸೂದೆಯು ಕನ್ನಡ ಭಾಷಾ ಅಲ್ಪಸಂಖ್ಯಾತರ ಹಕ್ಕುಗಳಿಗೆ ಧಕ್ಕೆ ತರುವ ಸಾಧ್ಯತೆ ಇದೆ ಎಂದು ತಜ್ಞರು ಅಭಿ ಪ್ರಾಯಪಟ್ಟಿದ್ದಾರೆ. ಮಸೂದೆಯಲ್ಲಿರುವ ವಿಧಿಗಳು ಸಂವಿಧಾನಾತ್ಮಕ ಹಕ್ಕುಗಳಿಗೆ ವಿರುದ್ಧವಾಗಿದ್ದು, ಕನ್ನಡ ಭಾಷೆಯ ಬಳಕೆ ಮತ್ತು ಅಭಿವೃದ್ದಿಗೆ ಅಡ್ಡಿಯಾಗಬಹುದು ಎಂಬ ಆತಂಕ ವ್ಯಕ್ತವಾಗಿದೆ.ಈ ಕುರಿತು ಕನ್ನಡ …