ಪೇರಾಲ್‌ನಲ್ಲಿ ಎರಡು ದಶಕಗಳಿಂದ ದುರಸ್ತಿಯಾಗದೆ ರಸ್ತೆ ಶೋಚನೀಯ ಸ್ಥಿತಿಯಲ್ಲಿ ಅಭಿವೃದ್ಧಿಯೆಂದರೆ ಇದಾಗಿದೆಯೇ ಎಂದು ಪ್ರಶ್ನಿಸುತ್ತಿರುವ ನಾಗರಿಕರು

ಕುಂಬಳೆ:  ನಾಡಿನ ಅಭಿವೃದ್ಧಿಯಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳಿಗೂ ಜವಾಬ್ದಾ ರಿಯಿಲ್ಲವೇ ಎಂದು ನಾಗರಿಕರು ಪ್ರಶ್ನಿಸ ತೊಡಗಿ ದ್ದಾರೆ. ನಾಡಿನಲ್ಲಿ ಪರಿಹರಿಸ ಲಾಗದ ಹಲವು ಸಮಸ್ಯೆಗಳಿದ್ದು, ವಿಧಾನಸಭಾ ಚುನಾವಣೆಯ ಈ ಸಂದರ್ಭದಲ್ಲಿ ನಾಗರಿಕರು ಈ ಬಗ್ಗೆ ಪ್ರಶ್ನಿಸುತ್ತಿರುವು ದು ರಾಜಕೀಯ ಪಕ್ಷ ಗಳಿಗೆ ತಲೆನೋವಾಗಿ ಪರಿಣಮಿಸಿದೆ. ಕುಂಬಳೆ ಪೇರಾಲ್ ವಾರ್ಡ್‌ನ ‘ತಾಯಲ್’ ಶಾಲೆ ರಸ್ತೆಯನ್ನು  ಸಂಚಾರಯೋಗ್ಯಗೊಳಿಸಬೇಕೆಂದು ನಾಗರಿಕರು ಕಳೆದ ಎರಡು ದಶಕಗಳಿಂದಲೇ ಬೇಡಿಕೆ ಮುಂದಿರಿಸಿ ದ್ದಾರೆ. ಹಲವು ವರ್ಷಗಳಿಂದ  ಮರು ಡಾಮರೀಕರಣ ನಡೆಯದ ಈ ರಸ್ತೆ ಇದೀಗ ಶೋಚನೀಯ ಸ್ಥಿತಿಯಲ್ಲಿದೆ.  …

ಸುಂದರ ಕಟ್ಟಡವಿದೆ ಕುಂಬಳೆ ಮೃಗಾಸ್ಪತ್ರೆಗೆ ಆದರೆ ಒಳಗೆ ಶೂನ್ಯ; ಕ್ಷೀರ ಕೃಷಿಕರು ಸಂಕಷ್ಟದಲ್ಲಿ

ಕುಂಬಳೆ: ಅತೀ ವಿಶಾಲವಾದ ಕಟ್ಟಡ ಕುಂಬಳೆ ಮೃಗಾಸ್ಪತ್ರೆಗೆ ಇದ್ದರೂ ಇದರಿಂದ ಯಾವುದೇ ಪ್ರಯೋಜನ ಕೃಷಿಕರಿಗೆ ಲಭಿಸುತ್ತಿಲ್ಲವೆಂದು ದೂರ ಲಾಗಿದೆ. ಇಲ್ಲಿ ಮೃಗಗಳಿಗೆ ಚುಚ್ಚುಮದ್ದು ಇಲ್ಲ. ಔಷಧಿ ಇಲ್ಲ. ಇದರಿಂದಾಗಿ ಕ್ಷೀರ ಕೃಷಿಕರು ಸಂಕಷ್ಟದಲ್ಲಿದ್ದಾರೆ. ಹಲವಾರು ತಿಂಗಳಿಗಳಿಂದ ಇದೇ ಸ್ಥಿತಿ ಮುಂದುವರಿಯುತ್ತಿದ್ದರೂ ಈ ಬಗ್ಗೆ ಗಮನ ಹರಿಸಲು ಯಾರೂ ಮುಂದಾಗುತ್ತಿಲ್ಲವೆಂದು ಕ್ಷೀರ ಕೃಷಿಕರು ದೂರುತ್ತಾರೆ.ಪಂಚಾಯತ್ ವ್ಯಾಪ್ತಿಯಲ್ಲಿ ಸಣ್ಣ ಹಾಗೂ ದೊಡ್ಡ ಮಟ್ಟಿನ ನೂರಾರು ಮಂದಿ ಹೈನುಗಾರರು ಇದ್ದು, ಅಲ್ಲದೆ ಇತರ ಪ್ರಾಣಿ ಪ್ರೇಮಿಗಳು ಕೂಡಾ ತಮ್ಮ ಮನೆಯಲ್ಲಿ ಸಾಕುಪ್ರಾಣಿಗಳನ್ನು …

ದಾಖಲುಪತ್ರಗಳಿಲ್ಲದೆ ಕಾರಿನಲ್ಲಿ ಸಾಗಿಸುತ್ತಿದ್ದ 11.40 ಲಕ್ಷ ರೂ. ಪತ್ತೆ: ಕಣ್ಣೂರು ನಿವಾಸಿ ಕಸ್ಟಡಿಗೆ

ಕಾಸರಗೋಡು: ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕಾಸರಗೋಡು ಪೊಲೀಸರು ಇಂದು ಮುಂಜಾನೆ ನಡೆಸಿದ ಭರ್ಜರಿ ಕಾರ್ಯಾಚರಣೆಯಲ್ಲಿ ಸರಿಯಾದ ದಾಖಲುಪತ್ರಗಳಿಲ್ಲದೆ ಕಾರಿನಲ್ಲಿ ಸಾಗಿಸುತ್ತಿದ್ದ 11,40,000 ರೂ. ನಗದು ಪತ್ತೆಹಚ್ಚಿ ವಶಪಡಿಸಿಕೊಂ ಡಿದ್ದಾರೆ. ಇದಕ್ಕೆ ಸಂಬಂಧಿಸಿ ಕಣ್ಣೂರು ಅಳಿಕ್ಕಲ್ ಪಾದಿರಾಪರಂ ಬಿಲ್‌ಪಾರಯಿಲ್ ನಿವಾಸಿ ಅನೂಪ್ (37) ಎಂಬವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು  ಆತನ ಹೇಳಿಕೆ ದಾಖಲಿಸಿ ಕೊಂಡಿದ್ದಾರೆ. ನಗರದ ಶ್ರೀ ಮಲ್ಲಿಕಾರ್ಜುನ ಕ್ಷೇತ್ರ ಬಳಿಯ ಟ್ರಾಫಿಕ್ ಜಂಕ್ಷನ್ ನಲ್ಲಿ ಕಾಸರಗೋಡು ಪೊಲೀಸರು ಇಂದು ಮುಂಜಾನೆ 2 ಗಂಟೆ ವೇಳೆವಾಹನ ತಪಾಸಣೆಯಲ್ಲಿ ತೊಡಗಿದ್ದಾಗ …

ವಾಣಿಜ್ಯ ಎಲ್.ಪಿ.ಜಿ ಸಿಲಿಂಡರ್ ಬೆಲೆಯಲ್ಲಿ 195.50 ರೂ. ಏರಿಕೆವಾಣಿಜ್ಯ ಎಲ್.ಪಿ.ಜಿ ಸಿಲಿಂಡರ್ ಬೆಲೆಯಲ್ಲಿ 195.50 ರೂ. ಏರಿಕೆ

ನವದೆಹಲಿ: ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಛಾ ತೈಲ ಬೆಲೆ ಏರಿಕೆಯಾದ ಹಿನ್ನೆಲೆಯಲ್ಲಿ ಸಾರ್ವಜನಿಕ ತೈಲ ಕಂಪೆನಿಗಳು ವಾಣಿಜ್ಯ ಬಳಕೆಯ 19 ಕೆ.ಜಿ ತೂಕದ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಇಂದಿನಿಂದ 195/5- ರೂ.ನಂತೆ  ಹೆಚ್ಚಳಮಾಡಿವೆ.ಇದರಿಂದಾಗಿ ಕೇರಳದಲ್ಲಿ 19 ಕೆ.ಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆ ಈಗ 2092 ರೂ.ಗೇರಿದೆ.  ಇದಕ್ಕೂ ಮೊದಲು ಮಾರ್ಚ್ 1ರಂದು ಪ್ರತೀ ಸಿಲಿಂಡರ್ ಬೆಲೆಯಲ್ಲಿ ತಲಾ 114/5 ರೂ.ನಂತೆ ಹೆಚ್ಚಿಸಲಾಗಿತ್ತು. ಅದಾದ ಬೆನ್ನಲ್ಲೇ ಎಪ್ರಿಲ್ ತಿಂಗಳ ಮೊದಲ ದಿನದಿಂದಲೇ  ಬೆಲೆಯಲ್ಲಿ ಮತ್ತೆ 195.50  ರೂ.ನಂತೆ ಹೆಚ್ಚಿಸಲಾಗಿದೆ. ಇದು …

ಬೇಡಗಂನಲ್ಲಿ ಬಾಲಕಿ ಗರ್ಭಿಣಿ: ವಿವಿಧ ಕಡೆಗಳ ದೌರ್ಜನ್ಯ ಪ್ರಕರಣಗಳಲ್ಲಿ 82ರ ವೃದ್ದ ಸೇರಿ 3 ಮಂದಿ ವಿರುದ್ಧ ಪೋಕ್ಸೋ ಕೇಸು; ತಂದೆ ಸೆರೆ

ಕಾಸರಗೋಡು: ವಿಭಿನ್ನ ಘಟನೆಗಳಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ನಿನ್ನೆ ಪೊಲೀಸರು ಮೂರು ಪೋಕ್ಸೋ ಪ್ರಕರಣಗಳನ್ನು ನೋಂದಾಯಿಸಿದ್ದಾರೆ. 10ನೇ ತರಗತಿ ವಿದ್ಯಾರ್ಥಿನಿ ಗರ್ಭಿಣಿ ಯಾದ ಘಟನೆಯಲ್ಲಿ ಬೇಡಗಂ ಪೊಲೀಸರು ಪೋಕ್ಸೋ ಪ್ರಕಾರ ಕೇಸು ದಾಖಲಿಸಿದ್ದಾರೆ. 15ರ ಹರೆಯದ ಬಾಲಕಿ ನೀಡಿದ ದೂರಿನಂತೆ ಕುತ್ತಿಕ್ಕೋಲ್ ಪಂಚಾಯತ್‌ನಲ್ಲಿ ವಾಸವಾಗಿರುವ ಸಂಬಂಧಿಕನಾದ ಯುವಕನ ವಿರುದ್ಧ ಕೇಸು ದಾಖಲಿಸ ಲಾಗಿದೆ. ಬಾಲಕಿ ಗರ್ಭಿಣಿ ಎಂದು ಸ್ಪಷ್ಟವಾಗಿರುವುದರೊಂದಿಗೆ ದೌರ್ಜನ್ಯ ಘಟನೆ ಬಹಿರಂಗ ಗೊಂಡಿದೆ. ಆರೋಪಿಯನ್ನು ಪತ್ತೆಹಚ್ಚಲು ಬೇಡಗಂ ಪೊಲೀಸರು ತನಿಖೆ ಆರಂಭಿಸಿದ್ದಾರೆ.೮ನೇ ತರಗತಿಯ ಬಾಲಕಿಯನ್ನು ದೌರ್ಜನ್ಯಗೈದ ತಂದೆಯ …

ಸ್ವಾತಿ ಕಲ್ಲಗ ಅವರಿಗೆ ಡಾಕ್ಟರೇಟ್

ಮುಳರಿಯ: ಕಂಪ್ಯೂಟರ್ ಸಯನ್ಸ್‌ಗೆ ಸಂಬಂಧಿಸಿ ಸಂಶೋಧನಾ ಪ್ರಬಂಧ ಮಂಡಿಸಿದ ಬೆಳ್ಳೂರು ಕಲ್ಲಗದ ಸ್ವಾತಿ.ಕೆ ಅವರಿಗೆ ಮಂಗಳೂರು ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿ ನೀಡಿ  ಗೌರವಿಸಿದೆ. ಸ್ವಾತಿಯವರು ಮಂಡಿಸಿದ ‘ಅಲ್ಗೋರಿಥಮ್ಸ್ ಫಾರ್ ಅಥೆಂಟಿಕೇಶನ್ ಆಫ್ ಡಿಜಿಟಲ್ ಟ್ರಾನ್ಸಾಕ್ಷನ್ಸ್ ಬೇಸ್ಡ್ ಆನ್ ಮಲ್ಟಿ ಬಯೋಮೆಟ್ರಿಕ್ಸ್’ ಎಂಬ ಮಹಾ ಪ್ರಬಂಧವನ್ನು  ಸ್ವೀಕರಿಸಿ ವಿಶ್ವವಿದ್ಯಾಲಯ ಡಾಕ್ಟರೇಟ್ ನೀಡಿದೆ. ಮಂಗಳೂರು ವಿ.ವಿಯ ಹಿರಿಯ ಪ್ರಾಧ್ಯಾಪಕ ಡಾ. ಬಿ.ಎಚ್. ಶೇಖರ್‌ರ ಮಾರ್ಗದರ್ಶನದಲ್ಲಿ ಪ್ರಬಂಧ ರಚಿಸಲಾಗಿದೆ.ಕಾರ್ಕಳದ ಶ್ರೀ ಭುವನೇಂದ್ರ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥೆಯಾಗಿರುವ ಡಾ. ಸ್ವಾತಿಯವರು …

ಬಿಎಂಎಸ್ ಜಿಲ್ಲಾ ಕಾರ್ಯಾಲಯಕ್ಕೆ 3ರಂದು ಶಿಲಾನ್ಯಾಸ

ಕಾಸರಗೋಡು: ಭಾರತೀಯ ಮಜ್ದೂರ್ ಸಂಘದ ಕಾಸರಗೋಡು ಜಿಲ್ಲಾ ಕಾರ್ಯಾಲಯಕ್ಕೆ ಕರಂದಕ್ಕಾಡ್ ಶಿವಾಜಿನಗರದಲ್ಲಿ ಎ. 3ರಂದು ಭೂಮಿಪೂಜೆ ಹಾಗೂ ಶಿಲಾನ್ಯಾಸ ನಡೆಸಲಾಗುವುದು. ಅಂದು ಬೆಳಿಗ್ಗೆ 9.30ಕ್ಕೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಕ್ಷೇತ್ರ ಪ್ರಚಾರಕ್ ಪಿ.ಎನ್. ಹರಿಕೃಷ್ಣ ಕುಮಾರ್ ಶಿಲಾನ್ಯಾಸ ನೆರವೇರಿಸುವರು. ಬಿಎಂಎಸ್ ಅಖಿಲಭಾರತ ಉಪಾಧ್ಯಕ್ಷ ಸಿ. ಉಣ್ಣಿಕೃಷ್ಣನ್ ಉಣ್ಣಿತ್ತಾನ್, ದಕ್ಷಿಣ ಕ್ಷೇತ್ರ ಸಂಘಟನಾ ಕಾರ್ಯದರ್ಶಿ ಎಂ.ಪಿ. ರಾಜೀವನ್, ರಾಜ್ಯಾಧ್ಯಕ್ಷ ಬಿ. ಶಿವಜಿ ಸುದರ್ಶನನ್, ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಕೆ. ಅಜಿತ್, ಸಂಘಟನಾ ಕಾರ್ಯದರ್ಶಿ ಕೆ. ಮಹೇಶ್ …

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವಿಶೇಷ ಪ್ರಶಸ್ತಿಗೆ ಶ್ರೀಕಾಂತ್ ಕಾಸರಗೋಡು ಆಯ್ಕೆ

ಕಾಸರಗೋಡು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವಿಶೇಷ ಪ್ರಶಸ್ತಿ ಛಾಯಾಗ್ರಾಹಕ ಶ್ರೀಕಾಂತ್ ಕಾಸರಗೋಡುರಿಗೆ ಲಭಿಸಿದೆ. ಎಪ್ರಿಲ್ 11, 12ರಂದು ಬೀದರ್‌ನಲ್ಲಿ ನಡೆಯಲಿರುವ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ. ಶ್ರೀಕಾಂತ್‌ರ ಛಾಯಾಚಿತ್ರ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಧಾರ್ಮಿಕ, ಸಾಂಸ್ಕೃತಿಕ ಸಂಘಟನೆಗಳಲ್ಲೂ ತೊಡಗಿಸಿಕೊಂಡಿದ್ದಾರೆ. ಆಲ್ ಕೇರಳ ಫೊಟೋಗ್ರಾಫರ್ಸ್ ಅಸೋಸಿಯೇಶನ್ ಕಾಸರಗೋಡು ಘಟಕದ ಮಾಜಿ ಅಧ್ಯಕ್ಷ, ಈಸ್ಟ್ ಘಟಕದ ಕೋಶಾಧಿಕಾರಿಯಾಗಿ, ಕೇರಳ ಸರಕಾರದ ವಾರ್ತಾ ಇಲಾಖೆಯ ಜಿಲ್ಲಾಕೇಂದ್ರದ ಛಾಯಾಗ್ರಾಹಕರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಇವರನ್ನು  ಕಾಸರಗೋಡು …

ಚುನಾವಣೆ: ಬಿಜೆಪಿಯಿಂದಲೂ ಉಚಿತ ಕೊಡುಗೆಗಳ ಘೋಷಣೆ

ತಿರುವನಂತಪುರ: ಕೇರಳ ವಿಧಾನಸಭಾ ಚುನಾವಣೆಗೆ ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯನ್ನು ನಿನ್ನೆ ಬಿಡುಗಡೆಮಾಡಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಬಿನ್ ನವೀನ್ ಮತ್ತು ಪಕ್ಷದ  ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್ ಹಾಗೂ ಪಕ್ಷದ ಹಿರಿಯ ನಾಯಕರ ಸಮಕ್ಷಮದಲ್ಲಿ ಈ ಪ್ರಣಾಳಿಕೆ ಬಿಡುಗಡೆಮಾಡ ಲಾಯಿತು.  ಪ್ರಣಾಳಿಕೆಯಲ್ಲಿ ಹಲವು ಕೊಡುಗೆಗಳನ್ನು ನೀಡಲಾಗಿದೆ. ಇದರಲ್ಲಿ ಪ್ರಮುಖ ಅಂಶಗಳು ಇಂತಿವೆ: ಅರ್ಹ ಕುಟುಂಬಗಳಿಗೆ ವಾರ್ಷಿಕ ಎರಡು ಉಚಿತ ಎಲ್‌ಪಿಜಿ ವಿತರಣೆ, ಕುಟುಂಬಗಳಿಗೆ ದಿನಸಿ ಮತ್ತು ಔಷಧಿ ಖರೀದಿಗೆ ತಿಂಗಳಿಗೆ 2500 ರೂ. ಮೊತ್ತದ ರೀಚಾರ್ಜ್ ಕಾರ್ಡ್, …

ಐಕ್ಯರಂಗದ ಅಭ್ಯರ್ಥಿ ಕಲ್ಲಟ್ರ ಮಾಹಿನ್‌ರ ಇಂದಿನ ಪರ್ಯಟನೆ

ಕಾಸರಗೋಡು: ಕಾಸರಗೋಡು ವಿಧಾನಸಭಾ ಮಂಡಲದ ಐಕ್ಯರಂಗದ ಅಭ್ಯರ್ಥಿ ಕಲ್ಲಟ್ರ ಮಾಹಿನ್‌ರವರ ಮೂರನೇ ಹಂತದ ಚುನಾವಣಾ ಪ್ರಚಾರ ಇಂದು ಆರಂಭಗೊಂಡಿತು. ಬೆಳಿಗ್ಗೆ ಬೆಳ್ಳೂರು ಪಂಚಾಯತ್‌ನ ಕಿನ್ನಿಂಗಾರಿನಲ್ಲಿ ಕಾರ್ನರ್ ಸಭೆಯನ್ನು ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ಉದ್ಘಾಟಿಸಿದರು. ಬಳಿಕ ಕೋಟಿಮೂಲೆ, ಬಜ, ನೆಟ್ಟಣಿಗೆ, ಪಳ್ಳಪ್ಪಾಡಿ, ಮದಕ, ನಾಟೆಕಲ್ಲು ಮೊದಲಾದೆಡೆಗಳ ಮೂಲಕ ಸಂಚರಿಸಿದರು. ಅಪರಾಹ್ನ ಪೂತಪ್ಪಲಂ, ಕಾಯಿಮಲೆ, ಕುಂಬ್ಡಾಜೆ ಪಂಚಾಯತ್‌ನ ಕಜೆ ಎಸ್‌ಸಿನಗರ, ಬೆಳಿಂಜ, ಗೋಸಾಡದ ಮೂಲಕ ಸಾಗಿ ರಾತ್ರಿ ಮಾರ್ಪನಡ್ಕದಲ್ಲಿ ಸಮಾಪ್ತಿಯಾಗಲಿದೆ.ನಿನ್ನೆ ಕಾಸರಗೋಡು ರೈಲು ನಿಲ್ದಾಣಕ್ಕೆ ತಲುಪಿ ಪ್ರಯಾಣಿಕರಲ್ಲಿ ಮತ ಯಾಚಿಸಿದರು. …