ರಾಜ್ಯದಲ್ಲಿ ಬೆಳಿಗ್ಗಿನಿಂದಲೇ ಭರ್ಜರಿ ಮತದಾನ: ಮಂಜೇಶ್ವರ ಕಯ್ಯಾರಿನ 128ನೇ ಮತಗಟ್ಟೆಯಲ್ಲಿ ನಕಲಿ ಮತದಾನ ಆರೋಪ: ಓರ್ವ ಸೆರೆ

ತಿರುವನಂತಪುರ: ಕೇರಳ ವಿಧಾನ ಸಭಾ ಚುನಾವಣೆಗಿರುವ ಮತದಾನ ಇಂದು ಬೆಳಿಗ್ಗೆ 7 ಗಂಟೆಗೆ ಆರಂಭಗೊಂಡ ಕ್ಷಣದಿಂದಲೇ ರಾಜ್ಯದಾದ್ಯಂತವಾಗಿ ಭರ್ಜರಿ ಮತದಾನ ನಡೆಯುತ್ತಿದೆ. ಬೆಳಿಗ್ಗೆ 12.45 ಗಂಟೆ ವೇಳೆಗೆ ರಾಜ್ಯದಲ್ಲಿ ಶೇ. 40.80ರಷ್ಟು ಮತದಾನ ನಡೆದಿದೆ. ಇದೇ ಸಮಯದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಶೇ.39.50 ಮತದಾನ ನಡೆದಿದೆ. ರಾಜ್ಯದ ಒಟ್ಟು 140 ವಿಧಾನಸಭಾ ಕ್ಷೇತ್ರಗಳಲ್ಲಿ   ಮತದಾರರ ಭಾರೀ ಸಾಲುಗಳೇ ಗೋಚರಿಸಿದ್ದು  ಇದು ಜನರು ಅತ್ಯುತ್ತಮ ರೀತಿಯ ಪ್ರತಿಕ್ರಿಯೆ ನೀಡುತ್ತಿದ್ದಾರೆಂಬುದನ್ನು ಸೂಚಿಸುತ್ತದೆ. ಮತದಾನ ಪ್ರಕ್ರಿಯೆ ಈತನಕ ಶಾಂತರೀತಿಯಲ್ಲಿ ಮುಂದುವರಿದಿದೆ. ಎಲ್ಲಾ ಮತಗಟ್ಟೆಗಳಲ್ಲೂ …

ಹಿರಿಯ ವ್ಯಾಪಾರಿ, ಕಾರವಲ್ ಏಜೆಂಟ್ ನಿಧನ

ವರ್ಕಾಡಿ: ಬೋರ್ಕಳ ನಿವಾಸಿ ಹಾಗೂ ಬೇಕರಿ ಜಂಕ್ಷನ್‌ನಲ್ಲಿ ವ್ಯಾಪಾರಿಯಾಗಿದ್ದ ವಾಮನ ಬೋರ್ಕಳ (56) ನಿಧನ ಹೊಂದಿ ದರು. ಹೃದಯ ಸಂಬಂಧ ಕಾಯಿಲೆ ಯಿಂದ ಬಳಲುತ್ತಿದ್ದ ಇವರು ಮಂ ಗಳೂರಿನ ಆಸ್ಪತ್ರೆಯಲ್ಲಿ ದಾಖಲಾ ಗಿದ್ದರು. ನಿನ್ನೆ ಮಧ್ಯಾಹ್ನ ನಿಧನ ಸಂಭವಿಸಿದೆ. ಕಾರವಲ್ ಪತ್ರಿಕೆ ಏಜೆಂಟ್ ಆಗಿದ್ದರು. ವಿವಿಧ ಪತ್ರಿಕೆ ಗಳಿಗೆ ಸ್ಥಳೀಯ ಸುದ್ಧಿಗಳನ್ನು ಬರೆದು ಕಳುಹಿಸುತ್ತಿದ್ದರು. ಯಕ್ಷಗಾನಪ್ರೇಮಿ ಯಾಗಿದ್ದ ಇವರು ಹಲವಾರು ಕಾರ್ಯಕ್ರಮಗಳಿಗೆ ಪ್ರಾಯೋಜ ಕತ್ವ ವಹಿಸಿದ್ದರು. ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ  ರಂಗಗಳಲ್ಲೂ ಗುರುತಿಸಿ ಕೊಂಡಿದ್ದರು. ಮೃತರು ಪತ್ನಿ …

ವಾಹನ ಅಪಘಾತದಲ್ಲಿ ಗಂಭೀರ ಗಾಯಗೊಂಡ ಯುವಕ ಸಾವು

ಕಾಸರಗೋಡು: ಕಾರು-ಸ್ಕೂಟರ್ ಢಿಕ್ಕಿ ಹೊಡೆದು ಗಂಭೀರ ಗಾಯ ಗೊಂಡು ಚಿಕಿತ್ಸೆಯಲ್ಲಿದ್ದ ಯುವಕ ಸಾವ ನ್ನಪ್ಪಿದ ಘಟನೆ ನಡೆದಿದೆ.  ಚೆಟ್ಟುಂಗುಳಿ ಕೆ.ಎಸ್. ಅಬ್ದುಲ್ಲ ಆಂಗ್ಲಮಾಧ್ಯಮ ಹೈಯರ್ ಸೆಕೆಂಡರಿ ಶಾಲೆ ಸಮೀಪದ ಸಿ.ಎಚ್. ಮಂಜಿಲ್‌ನ ಮೊಹಮ್ಮದ್ ನಿಹಾಲ್ (19) ಸಾವನ್ನಪ್ಪಿದ ಯುವಕ. ಇರಿಯಣ್ಣಿ ಸರಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಕಳೆದ ವರ್ಷ ವಿಎಚ್‌ಸಿಇ ಪರೀಕ್ಷೆಯಲ್ಲಿ ಉತ್ತೀರ್ಣನಾದ ಮೊಹಮ್ಮದ್ ನಿಹಾಲ್ ಬಳಿಕ ವಿದ್ಯಾನಗರದ ಸುಗಂಧ ದ್ರವ್ಯ ಮಾರಾಟದಂಗಡಿಯಲ್ಲಿ ಕೆಲಸಕ್ಕೆ ಸೇರಿದ್ದನು.  ಮೊಹಮ್ಮದ್ ನಿಹಾಲ್ ಸ್ಕೂಟರ್‌ನಲ್ಲಿ ಕಳೆದ ರವಿವಾರ ಉಳಿಯತ್ತಡ್ಕ ಇಸ್ಸತ್‌ನಗರದ …

ಉದಯಗಿರಿ ಶ್ರೀ ವಿಷ್ಣುಮೂರ್ತಿ ಒತ್ತೆಕೋಲ ನಾಳೆಯಿಂದ

ವಿದ್ಯಾನಗರ: ಉದಯಗಿರಿ ಶ್ರೀ ವಿಷ್ಣುಮೂರ್ತಿ ಕ್ಷೇತ್ರದ ಒತ್ತೆಕೋಲ ಮಹೋತ್ಸವ ನಾಳೆಯಿಂದ 12ರ ತನಕ ವಿವಿಧ ಕಾರ್ಯಕ್ರಮ ಗಳೊಂದಿಗೆ ನಡೆಯಲಿದೆ. ನಾಳೆ ಬೆಳಿಗ್ಗೆ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರರಿಗೆ ಪೂರ್ಣಕುಂಭ ಸ್ವಾಗತ, 7.30ಕ್ಕೆ ಆನೆಚಪ್ಪರ ಏರಿಸುವುದು, ಗಣಪತಿ ಹೋಮ, ತಂಬಿಲ, ಸಂಜೆ 4 ಗಂಟೆಗೆ  ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ಕೈಲಾಸಪುರ ಶ್ರೀ ರಕ್ತೇಶ್ವರಿ ಗುಳಿಗ ಸನ್ನಿಧಿಯಿಂದ ಆರಂಭ, ಉಗ್ರಾಣ ತುಂಬಿಸುವುದು ನಡೆಯಲಿದೆ. 6.30ಕ್ಕೆ ದೀಪಾರಾಧನೆ, 7.30ರಿಂದ ಕೈಕೊಟ್ಟಿ ಕಳಿ, 8ಕ್ಕೆ ಮೆಗಾ ಫ್ಯೂಶನ್ ಡ್ಯಾನ್ಸ್, 9 ಗಂಟೆಗೆ ಪೂರಕಳಿ …

ಜಿಲ್ಲೆಯ ರೈಲು ಪ್ರಯಾಣಿಕರಿಗೆ ವಿಷು ಕೊಡುಗೆ 6 ಸ್ಪೆಷಲ್ ರೈಲುಗಾಡಿಗಳ ಘೋಷಣೆ

ಕಾಸರಗೋಡು: ಕೇರಳೀಯರಿಗೆ ರೈಲ್ವೇಯ ವಿಷು ಕೊಡುಗೆ. 6 ಸ್ಪೆಷಲ್ ರೈಲುಗಾಡಿಗಳನ್ನು ವಿಷು ಹಬ್ಬದಂಗವಾಗಿ ರೈಲ್ವೇ ಘೋಷಿಸಿದೆ. ಚೆನ್ನೈಯಿಂದ ನಿನ್ನೆ ಮಂಗಳೂರಿಗೆ ಸ್ಪೆಷಲ್ ರೈಲುಗಾಡಿ ಸಂಚಾರ ಆರಂಭಿಸಿದೆ. ನಿನ್ನೆ ರಾತ್ರಿ 11.55ಕ್ಕೆ ಚೆನ್ನೈ ಸೆಂಟ್ರಲ್‌ನಿಂದ ಹೊರಟ ರೈಲುಗಾಡಿ ಇಂದು ಸಂಜೆ ೪ ಗಂಟೆಗೆ ಮಂಗಳೂರು ಜಂಕ್ಷನ್ ರೈಲು ನಿಲ್ದಾಣಕ್ಕೆ ತಲುಪುವ ರೀತಿಯಲ್ಲಿ 06127 ನಂಬ್ರ ಸ್ಪೆಷಲ್ ಗಾಡಿ ಸಂಚಾರ ನಡೆಸುತ್ತಿದೆ. ಇಂದು ಮಂಗಳೂರು ಜಂಕ್ಷನ್- ಚೆನ್ನೈ ಎಗ್ಮೋರ್ 06128 ನಂಬ್ರ ಸ್ಪೆಷಲ್ ರೈಲು ಸಂಚಾರ ನಡೆಸಲಿದೆ. ಇಂದು ರಾತ್ರಿ …

ಕಾಳ್ಯಂಗಾಡು ಶ್ರೀ ಮೂಕಾಂಬಿಕಾ ಕ್ಷೇತ್ರ ಬ್ರಹ್ಮಕಲಶೋತ್ಸವಕ್ಕೆ ಚಪ್ಪರ ಮುಹೂರ್ತ

ಕಾಸರಗೋಡು: ಕಾಳ್ಯಂಗಾಡು ಶ್ರೀ ಮೂಕಾಂಬಿಕಾ ಕ್ಷೇತ್ರದಲ್ಲಿ ಎ.26ರಿಂದ ಮೇ 2ರ ತನಕ ಜರಗಲಿರುವ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಚಪ್ಪರ ಮುಹೂರ್ತ ಕ್ಷೇತ್ರ ಧರ್ಮದರ್ಶಿ ನಾರಾಯಣ ಕಾಳ್ಯಂಗಾಡು, ಅರ್ಚಕ ಯೋಗೀಶ್, ಚಪ್ಪರ ಸಮಿತಿಯ ಲವ ಮೀಪುಗುರಿ, ಸುರೇಶ್ ಅಭಿನಂದನ್‌ರ ನೇತೃತ್ವದಲ್ಲಿ ಜರಗಿತು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕೆ.ಎನ್. ವೆಂಕಟ್ರಮಣ ಹೊಳ್ಳ, ಕ್ಷೇತ್ರ ಮೊಕ್ತೇಸರ ಅಚ್ಯುತ ಕಾಳ್ಯಂಗಾಡ್, ಪ್ರಧಾನ ಕಾರ್ಯದರ್ಶಿ ದಯಾನಂದ ಕೊಳ್ಕೆಬೈಲು, ಉಪಾಧ್ಯಕ್ಷ ಮಿಥುನ್ ಕಾಳ್ಯಂಗಾಡ್, ಕಾರ್ಯದರ್ಶಿ ರಂಜಿತ್ ಮನ್ನಿಪ್ಪಾಡಿ, ಪುಷ್ಪಮ್ಮ ಕಾಳ್ಯಂಗಾಡ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಮೋಹನ್‌ರಾಜು …

ಯುವಕನಿಗೆ ಮಾರಕಾಯುಧಗಳೊಂದಿಗೆ ಹಲ್ಲೆ: ಓರ್ವ ಆರೋಪಿ ಠಾಣೆಯಲ್ಲಿ ಶರಣು

ಕುಂಬಳೆ: ಒಬ್ಬನ ಪ್ರಿಯತಮೆ ಯನ್ನು ಬೇರೊಬ್ಬ ಪ್ರೀತಿಸುತ್ತಿದ್ದಾನೆ ಎಂಬ ಕಾರಣದಿಂದ  ಯುವಕರ ಮೇಲೆ ಮಾರಕಾಯುಧಗಳಿಂದ ಆಕ್ರಮಿಸಿದ ಪ್ರಕರಣದಲ್ಲಿ ಓರ್ವ ಆರೋಪಿ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾನೆ.  ಕುಂಟಂಗೇರಡ್ಕ ನಿವಾಸಿ ಮೊಹಮ್ಮದ್ ಅನಸ್ (22) ಎಂಬಾತ ಶರಣಾಗಿದ್ದು, ಈತನಿಗೆ ನ್ಯಾಯಾಲಯ ರಿಮಾಂಡ್ ವಿಧಿಸಿದೆ.  ಮಾರ್ಚ್ ೩೦ರಂದು ಕುಂಬಳೆ ಮಾಟೆಂಗುಳಿಯ ಮೊಹಮ್ಮದ್ ಅಫ್ನಾನ್ ಫಹದ್ (19)ನ ಮೇಲೆ ಹಲ್ಲೆಗೈದು ಗಂಭೀರ ಗಾಯಗೊಳಿಸ ಲಾಗಿತ್ತು. ಈ ಪ್ರಕರಣದಲ್ಲಿ  ಮೊಹ ಮ್ಮದ್ ಅನಸ್ ಆರೋಪಿಯಾಗಿ ದ್ದಾನೆಂದು ಪೊಲೀಸರು ತಿಳಿಸಿದ್ದಾರೆ.   ಮೊಹಮ್ಮದ್ ಅಫ್ನಾನ್ ಫಹದ್ ಹಾಗೂ …

ಯುವಕನಿಗೆ ಹಲ್ಲೆ: ಆರೋಪಿ ಬಂಧನ

ಮಂಜೇಶ್ವರ: ಕೊಡ್ಲಮೊಗರು ಸುಂಕದಕಟ್ಟೆ ಓರ್ಕಳ ನಿವಾಸಿ ಹರಿಪ್ರಕಾಶ್ ಡಿ’ಸೋಜಾ (37) ಎಂಬವರಿಗೆ ಹಲ್ಲೆಗೈದ ಪ್ರಕರಣದಲ್ಲಿ ಆರೋಪಿಯಾದ  ಬೋರ್ಕಳದ  ಆರಿಫ್ ಬಿ (38) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈತನಿಗೆ ನ್ಯಾಯಾಲಯ ರಿಮಾಂಡ್ ವಿಧಿ ಸಿದೆ.  ಈ ತಿಂಗಳ ೬ರಂದು ಸಂಜೆ ಬೋರ್ಕಳದ ಅಂಗಡಿಯೊಂದರ ಮುಂಭಾಗದಲ್ಲಿ ಹರಿಪ್ರಕಾಶ್ ಡಿ’ಸೋಜಾರನ್ನು ತಡೆದು ನಿಲ್ಲಿಸಿ ಹಲ್ಲೆಗೈದಿರುವುದಾಗಿ ದೂರಲಾಗಿದೆ.  ಈ ಸಂಬಂಧ ಆರಿಫ್ ವಿರುದ್ಧ ಮಂಜೇಶ್ವರ ಪೊಲೀಸರು ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂ ಡಿದ್ದರು. ಹೊಯ್ಗೆ ಸಾಗಾಟ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿರುವು ದಾಗಿ …

ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ಕಿರುಕುಳ: ಆರೋಪಿ ಬಂಧನ

ಕೊಚ್ಚಿ: ಪ್ರಾಯಪೂರ್ತಿ ಯಾಗದ ಇಬ್ಬರು ಸಹೋದರಿಯರಿಗೆ ಲೈಂಗಿಕ ಕಿರುಕುಳ ನೀಡಿದ ಯುವಕ ಸೆರೆಗೀಡಾಗಿದ್ದಾನೆ. ಕಾಸರಗೋಡು ನಿವಾಸಿಯೆನ್ನಲಾದ  ಅಬ್ದುಲ್ ರಜಾಕ್ (38) ಎಂಬಾತ ಸೆರೆಗೀಡಾದ ವ್ಯಕ್ತಿಯೆಂದು ಹೇಳಲಾ ಗುತ್ತಿದೆ. ಈತ  ಪೆರುಂಬಾವೂರಿನ ಬಾಡಿಗೆ ಮನೆಯಲ್ಲಿ ವಾಸಿಸಿ ಡ್ರೈವಿಂಗ್  ಸಹಿತ ವಿವಿಧ ಕೆಲಸ ನಿರ್ವಹಿಸುತ್ತಿದ್ದನು. ಈ ಮಧ್ಯೆ ಅನ್ಯ ರಾಜ್ಯ ಕಾರ್ಮಿಕರ ಕುಟುಂಬ ವೊಂದರ 12 ಹಾಗೂ 9 ವರ್ಷ ಪ್ರಾಯದ ಇಬ್ಬರು  ಬಾಲಕಿಯರಿಗೆ ಈತ ಲೈಂಗಿಕ ಕಿರುಕುಳ ನೀಡಿರುವುದಾಗಿ ದೂರಲಾಗಿದೆ. ಅಬ್ದುಲ್ ರಜಾಕ್ ವಾಸಿಸುತ್ತಿದ್ದ ಬಾಡಿಗೆ ಮನೆ ಸಮೀಪದ …

ವಾಹನದಿಂದ ಸರಳು ಇಳಿಸುತ್ತಿದ್ದ ವೇಳೆ ದೇಹದ ಮೇಲೆ ಬಿದ್ದು ಚಾಲಕ ಮೃತ್ಯು

ಕಾಸರಗೋಡು: ವಾಹನದಿಂದ ಸರಳುಗಳನ್ನು ಇಳಿಸುತ್ತಿದ್ದ ವೇಳೆ ಮೈ ಮೇಲೆ ಬಿದ್ದು ಚಾಲಕ ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ. ಕಾಸರಗೋಡು ಅಣಂಗೂರು ಕೊಲ್ಲಂಪಾಡಿ ನಿವಾಸಿ ಅಶ್ರಫ್ (56) ಸಾವನ್ನಪ್ಪಿದ ದುರ್ದೈವಿ. ನುಳ್ಳಿಪ್ಪಾಡಿ ಯಲ್ಲಿರುವ ಕಟ್ಟಡ ನಿರ್ಮಾಣ ಸಾಮಗ್ರಿ ಮಾರಾಟದಂಗಡಿಯ ವಾಹನ ಚಾಲಕನಾಗಿರುವ ಅಶ್ರಫ್ ನಿನ್ನೆ ಮಧ್ಯಾಹ್ನ ವಾಹನದಲ್ಲಿ ಸರಳು ಸಹಿತ ಕಟ್ಟಡ ನಿರ್ಮಾಣ ಸಾಮಗ್ರಿಗಳನ್ನು ಹೇರಿ ಚೆಂಗಳ ಸಂತೋಷ್‌ನಗರಕ್ಕೆ ತಲುಪಿ  ಅದನ್ನು ಅಲ್ಲಿ ಇಳಿಸಲೆಂದು ವಾಹನದ ಮೇಲೇರಿ ಹಗ್ಗವನ್ನು ಬಿಡಿಸುವ ವೇಳೆ ಲಾರಿ ಒಂದು ಭಾಗಕ್ಕೆ ವಾಲಿ ಸರಳು …