ವಾಣಿಜ್ಯ ಅಡುಗೆ ಅನಿಲ ಬೆಲೆ ಹೆಚ್ಚಳ: ಕುಂಬಳೆಯಲ್ಲಿ ಕೆಎಚ್‌ಆರ್‌ಎಯಿಂದ ಪಂಜಿನ ಮೆರವಣಿಗೆ

ಕುಂಬಳೆ: ವಾಣಿಜ್ಯ ಅಗತ್ಯ ಗಳಿಗಾಗಿರುವ ಗ್ಯಾಸ್ ಸಿಲಿಂಡರ್‌ನ ಬೆಲೆ ಹೆಚ್ಚಿಸಿದ ಕೇಂದ್ರ ಸರಕಾರದ ನಿಲುವನ್ನು ಪ್ರತಿಭಟಿಸಿ ಕೇರಳ ಹೋಟೆಲ್ ಆಂಡ್ ರೆಸ್ಟೋರೆಂಟ್ ಅಸೋಸಿಯೇಶನ್ ಕುಂಬಳೆ ಯೂನಿಟ್ ಘಟಕ ಕುಂಬಳೆಯಲ್ಲಿ ಪಂಜಿನ ಮೆರವಣಿಗೆ ನಡೆಸಿತು. ಈ ವೇಳೆ ಮಾತನಾಡಿದ ಕೆಎಚ್‌ಆರ್‌ಎ ಜಿಲ್ಲಾ ಕಾರ್ಯದರ್ಶಿ ಬಿಜು ಚುಳ್ಳಿಕ್ಕರ ಸಿಲಿಂಡರ್‌ನ ಅಪರಿಮಿತ ಬೆಲೆ ಹೆಚ್ಚಳದಿಂದ ಹೋಟೆಲ್ ಆಹಾರ ಪದಾರ್ಥಗಳಿಗೆ ಬೆಲೆ ಹೆಚ್ಚಿಸಬೇಕಾದ ಸನ್ನಿವೇಶವಿದೆ ಎಂದು ಕೇಂದ್ರ ಸರಕಾರದ ಈ ನಿಲುವನ್ನು ಪ್ರತಿಭಟಿಸಿ ಹೋಟೆಲ್‌ಗಳನ್ನು ಮುಚ್ಚುವಂತಹ ಪ್ರತಿಭಟನೆಗಳನ್ನು ನಡೆಸಲಾಗುವುದೆಂದು ತಿಳಿಸಿದರು. ಪಂಜಿನ ಮೆರವಣಿಗೆಯನ್ನು …

ಕಾರು ಸ್ಕೂಟರ್‌ಗೆ ಢಿಕ್ಕಿ: ಮೋಟಾರ್ ವಾಹನ ಇಲಾಖೆ ಅಧಿಕಾರಿ ಮೃತ್ಯು

ತಿರುವನಂತಪುರ: ಕಾರು ಸ್ಕೂಟರ್‌ಗೆ ಢಿಕ್ಕಿ ಹೊಡೆದು ಮೋಟಾರ್ ವಾಹನ ಇಲಾಖೆ ಅಧಿಕಾರಿ ಮೃತಪಟ್ಟರು. ಕಲ್ಲಿಯೂರ್ ಪೆರಿಂಙಮಲ ಸಾಫಲ್ಯ ನಿವಾಸಿ ಎಸ್. ಮಧು (42) ಮೃತಪಟ್ಟವರು. ವಳುದಕ್ಕಾಡ್ ಟ್ರಾನ್ಸ್‌ಪೋರ್ಟ್ ಕಮಿಷನರೇಟ್‌ನ ನೌಕರನಾಗಿದ್ದಾರೆ. ವಿಳಿಂಞ ಭಾಗದಿಂದ ಬಾಲರಾಮಪುರ ಭಾಗಕ್ಕೆ ತೆರಳುತ್ತಿದ್ದ ಕಾರು ಮುಂಭಾಗದಿಂದ ಬಂದ ಸ್ಕೂಟರ್‌ಗೆ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಢಿಕ್ಕಿಯ ಆಘಾತಕ್ಕೆ ರಸ್ತೆಗೆ ಬಿದ್ದ ಮಧು ಅವರ ತಲೆಗೆ ಹಾಗೂ ಇತರ ಭಾಗಗಳಿಗೆ ಗಂಭೀರ ಗಾಯವುಂಟಾಗಿತ್ತು. ಕೂಡಲೇ ಆಂಬುಲೆನ್ಸ್‌ನಲ್ಲಿ ಕೊಂಡೊಯ್ದು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ. …

ಅಲ್ಟ್ರಾ ವಯಲೆಟ್ ರಶ್ಮಿ: ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸಲು ಕರೆ

ಕಾಸರಗೋಡು: ಸತತವಾಗಿ ಹೆಚ್ಚು ಸಮಯ ಅಲ್ಟ್ರಾವಯಲೆಟ್ ಕಿರಣಗಳು ದೇಹಕ್ಕೆ ತಗಲುವುದು ಸೂರ್ಯಾಘಾತ ಹಾಗೂ ಚರ್ಮ ರೋಗಗಳಿಗೆ, ನೇತ್ರ ರೋಗಗಳಿಗೆ ಮತ್ತು ಇತರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದೆಂದು ಮುನ್ನೆಚ್ಚರಿಕೆ ನೀಡಲಾಗಿದೆ. ಸಾರ್ವಜನಿಕರು ಸುರಕ್ಷಾ ಮುನ್ನೆಚ್ಚರಿ ಕೆಗಳನ್ನು ಸ್ವೀಕರಿಸಬೇಕಾಗಿದೆ. ಬೆಳಿಗ್ಗೆ 10ರಿಂದ ಸಂಜೆ 3 ಗಂಟೆವರೆಗಿನ ಸಮಯಗಳಲ್ಲಿ ಗರಿಷ್ಠ ಅಲ್ಟ್ರಾ ವಯಲೆಟ್ ಕಿರಣಗಳು ದಾಖಲಾಗುತ್ತಿದ್ದು, ಈ ಸಮಯಗಳಲ್ಲಿ ಹೆಚ್ಚು ಹೊತ್ತು ದೇಹಕ್ಕೆ ನೇರವಾಗಿ ಸೂರ್ಯಪ್ರಕಾಶ ಸ್ಪರ್ಶಿಸುವುದನ್ನು ಹೊರತುಪಡಿಸಬೇಕು. ಹೊರಗೆ ಕೆಲಸ ಮಾಡುವವರು, ಸಮುದ್ರದಲ್ಲಿ,  ಒಳನಾಡು ಮೀನುಗಾರಿಕೆಗಳಲ್ಲಿ ಏರ್ಪಟ್ಟಿರುವ ಮೀನು ಕಾರ್ಮಿಕರು, …