ಅಸೌಖ್ಯ: ಚಿಕಿತ್ಸೆಯಲ್ಲಿದ್ದ ಮಹಿಳೆ ನಿಧನ
ಬದಿಯಡ್ಕ: ಅಸೌಖ್ಯ ತಗಲಿ ಚಿಕಿತ್ಸೆಯಲ್ಲಿದ್ದ ಮಹಿಳೆ ಮೃತಪಟ್ಟರು. ಪೆರಡಾಲ ಪ್ರಶಾಂತಿ ನಿಲಯದ ಪ್ರೇಮಲತ (60) ನಿಧನ ಹೊಂದಿದವರು. ಇವರು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದು, ಅಲ್ಲಿ ನಿಧನ ಸಂಭವಿಸಿದೆ. ಮೃತರು ಪತಿ ಕೃಷ್ಣಪ್ರಸಾದ್ ರೈ (ಪೆರಡಾಲ ಎಜ್ಯುಕೇಷನ್ ಸೊಸೈಟಿ ಮೆನೇಜಿಂಗ್ ಕಮಿಟಿ ಸದಸ್ಯ), ಪುತ್ರಿ ಪ್ರಜ್ಞ, ಅಳಿಯ ಪ್ರತಿವಿಂಧು, ಸಹೋದರರಾದ ಗಂಗಾಧರ್ ರೈ, ಲೋಕನಾಥ ಶೆಟ್ಟಿ, ಸುರೇಶ್ ರೈ, ಸಹೋದರಿಯರಾದ ಕೃಷ್ಣವೇಣಿ, ಬೇಬಿ, ಕಸ್ತೂರಿ, ಅನುರಾಧ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.