ದಿನನಿತ್ಯ ನೂರಾರು ವಾಹನಗಳು ಸಂಚರಿಸುವ ರಸ್ತೆ ದುಸ್ಥಿತಿಯಲ್ಲಿ: ಪೆರ್ಲ-ಸ್ವರ್ಗ ರಸ್ತೆ ಅಭಿವೃದ್ಧಿಆಗ್ರಹಿಸಿ ಶಾಸಕರಿಗೆ ಮನವಿ

ಪೆರ್ಲ: ಸ್ವರ್ಗ- ಪೆರ್ಲ (ಸೂರಂಬೈಲ್) ರಸ್ತೆ ಅಭಿವೃದ್ಧಿ ಆಗ್ರಹಿಸಿ ಎಣ್ಮಕಜೆ ಮಂಡಲ ೮ನೇ ವಾರ್ಡ್ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಶಾಸಕ ಎಕೆಎಂ ಅಶ್ರಫ್‌ರಿಗೆ ಮನವಿ ನೀಡಲಾಯಿತು. ಪೆರ್ಲ ಪೇಟೆಯಿಂದ ಪಾಣಾಜೆ ಮೂಲಕ ಪುತ್ತೂರು ಸಂಪರ್ಕಿಸುವ ಪೆರ್ಲ-ಸ್ವರ್ಗ ರಸ್ತೆಯನ್ನು ಅಗಲಗೊಳಿಸಿ ನವೀಕರಿಸುವಂತೆ ಸಮಿತಿ ಸಲ್ಲಿಸಿದ ಮನವಿಯಲ್ಲಿ ಆಗ್ರಹಿಸಿದೆ. ಕರ್ನಾಟಕದ ಪುತ್ತೂರು ಮಾತ್ರವಲ್ಲದೆ ಬೆಳ್ಳೂರು ಪಂಚಾಯತ್ ವ್ಯಾಪ್ತಿ ಮೂಲಕ ಸುಳ್ಯಪದವು, ಈಶ್ವರಮಂಗಲ, ಮುಳ್ಳೇರಿಯ, ಕುಂಬ್ಡಾಜೆ ಪಂಚಾಯತ್‌ನ ಏತಡ್ಕ ಸಹಿತ ವಿವಿಧ ಭಾಗಗಳಿಗೆ ಸಂಪರ್ಕಿಸುವ ಪ್ರಧಾನ ರಸ್ತೆ ಇದಾಗಿದೆ. ಕಾಸರಗೋಡು, ಕುಂಬಳೆ, …

ಸರಕಾರಿ ನೌಕರರ ಸೌಲಭ್ಯಗಳನ್ನು ಬಜೆಟ್‌ನಲ್ಲಿ ಒಳಪಡಿಸಿ ಮಂಜೂರು ಮಾಡಬೇಕು- ಎನ್‌ಜಿಒ ಅಸೋಸಿಯೇಶನ್

ಕಾಸರಗೋಡು: ಸರಕಾರಿ ನೌಕರರ, ಅಧ್ಯಾಪಕರ ಸೌಲಭ್ಯಗಳನ್ನು ಬಜೆಟ್‌ನಲ್ಲಿ ಒಳಪಡಿಸಿ ಮಂಜೂರು ಮಾಡಬೇಕೆಂದು ಕೇರಳ ಎನ್‌ಜಿಒ ಅಸೋಸಿಯೇಶನ್ ರಾಜ್ಯ ಕಾರ್ಯದರ್ಶಿ ಸುರೇಶ್ ಪೆರಿಯಂಗಾನಂ ಆಗ್ರಹಿಸಿದ್ದಾರೆ. ಪಿಂಚಣಿ ಪ್ರಾಯ ಹೆಚ್ಚಿಸಿ ಸಂಯೋಜಿಸಬೇಕು, ನೌಕರರಿಗೆ ಉಪಯುಕ್ತವಾದ ರೀತಿಯಲ್ಲಿ ವೇತನ ಪರಿಷ್ಕರಣೆ ಜ್ಯಾರಿಗೊಳಿಸಬೇಕು, ಮೆಡಿಸೆಫ್ ದ್ವಿತೀಯ ಹಂತ ನೌಕರರಿಗೆ ಉಪಕಾರಪ್ರದಗೊಳಿಸಬೇಕು, ಸಹಭಾಗಿತ್ವ ಪಿಂಚಣಿ ವಿಭಾಗ ನೌಕರರ ಆತಂಕಗಳನ್ನು ಪರಿಹರಿಸಬೇಕು ಮೊದಲಾದ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಅಸೋಸಿಯೇಶನ್ ಜಿಲ್ಲಾ ಸಮಿತಿ ಸಿವಿಲ್ ಸ್ಟೇಶನ್‌ನಲ್ಲಿ ನಡೆಸಿದ ಹಕ್ಕು ಸಂರಕ್ಷಣಾ ಪ್ರತಿಭಟನೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಕ್ಷಾಮಭತ್ತೆಯ ಇದುವರೆಗಿನ …

12 ವರ್ಷದ ನರೇಂದ್ರ ಮೋದಿ ಆಡಳಿತ ದೇಶದ ಅಭಿವೃದ್ಧಿ ಸುವರ್ಣ ಕಾಲ- ಕೆ. ಶ್ರೀಕಾಂತ್

ಕಾಸರಗೋಡು: ಮೋದಿ ಸರಕಾರದ 12 ವರ್ಷದ ಆಡಳಿತ ದೇಶದ ಅಭಿವೃದ್ಧಿರಂಗದ ಸುವರ್ಣ ಕಾಲವಾಗಿದೆ ಎಂದು ಬಿಜೆಪಿ ವಲಯಾಧ್ಯಕ್ಷ ಕೆ. ಶ್ರೀಕಾಂತ್ ನುಡಿದರು. ಕೇರಳದ ಸಮಸ್ತ ವಲಯಗಳಲ್ಲೂ ಪ್ರಯೋಜನಪ್ರದ ವಾದ ಅಭಿವೃದ್ಧಿ ಮಾದರಿಗಳನ್ನು ಸೃಷ್ಟಿಸಲು ಮೋದಿ ಸರಕಾರಕ್ಕೆ ಸಾಧ್ಯವಾಗಿದೆ ಎಂದು ಕಾಸರಗೋಡಿ ನಲ್ಲಿ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಅವರು ನುಡಿದರು. ಯುಪಿಎ ಸರಕಾರದ ಕಾಲದಲ್ಲಿ ರೈಲ್ವೇ ಅಭಿವೃದ್ಧಿಗೆ ಕೇರಳಕ್ಕೆ ಲಭಿಸಿರುವುದು 372 ಕೋಟಿ ರೂ. ಆಗಿತ್ತು. ಇದೇ ವೇಳೆ ಕಳೆದ ಆರ್ಥಿಕ ವರ್ಷದಲ್ಲಿ ಕೇಂದ್ರ ಸರಕಾರ 3,042 ಕೋಟಿ ರೂ. …

ಹನುಮಾನ್ ನಗರ ಸಮುದ್ರ ತೀರದಲ್ಲಿ ರಾಶಿ ಬಿದ್ದ ತ್ಯಾಜ್ಯ: ಪರಿಸರವಿಡೀ ದುರ್ವಾಸನೆ

ಉಪ್ಪಳ: ಮಂಗಲ್ಪಾಡಿ ಪಂಚಾಯತ್‌ನ ಹನುಮಾನ್ ನಗರ ಸಮುದ್ರ ತೀರ ಪ್ರದೇಶದಲ್ಲಿ ರಾಶಿಬಿದ್ದಿರುವ ತ್ಯಾಜ್ಯದಿಂದ ಸ್ಥಳೀಯರಿಗೆ ಸಮಸ್ಯೆ ಉಂಟಾಗಿರುವುದಾಗಿ ದೂರಲಾಗಿದೆ.ಹೆದ್ದಾರಿ ಬದಿಯ ಸರ್ವೀಸ್ ರಸ್ತೆಯ ವಿವಿಧೆಡೆ ತ್ಯಾಜ್ಯ ಉಪೇಕ್ಷಿಸುತ್ತಿರುವುದು ದಿನನಿತ್ಯ ವ್ಯಾಪಕಗೊಂಡಿರುವ ಮಧ್ಯೆ ಸಮುದ್ರ ತೀರದಲ್ಲಿ ಕೂಡಾ ತ್ಯಾಜ್ಯವನ್ನು ಉಪೇಕ್ಷಿಸುವುದು ಆರಂಭಗೊoಡಿದೆ. ಈ ಪರಿಸರದಲ್ಲಿ ಹಸಿರು ಕ್ರಿಯÁ ಸೇನೆ ಕಾರ್ಯಕರ್ತೆಯರಿಗೆ ತ್ಯಾಜ್ಯ ಸಂಗ್ರಹಿಸಿಡಲು ಇರಿಸಲಾದ ಪೆಟ್ಟಿಗೆಯ ಪರಿಸರದಲ್ಲಿಯೇ ತ್ಯಾಜ್ಯ ಉಪೇಕ್ಷಿಸಲಾಗುತ್ತಿದೆ. ವಿವಿಧ ಫ್ಯ್ಲಾಟ್‌ಗಳ ತ್ಯಾಜ್ಯವನ್ನು ತಂದು ಉಪೇಕ್ಷಿಸುತ್ತಿರುವುದಾಗಿ ಸ್ಥಳೀಯರು ದೂರಿದ್ದಾರೆ. ಈಗ ಸಮುದ್ರ ತೀರ ಪ್ರದೇಶ ತ್ಯಾಜ್ಯದಿಂದ ಊರವರಿಗೂ …