ಕಾಡುಹಂದಿ ಮಾಂಸ ನಾಡಕೋವಿ ಸಹಿತ ಇಬ್ಬರ ಸೆರೆ

ಕಾಸರಗೋಡು: ಅರಣ್ಯಪಾಲ ಕರು ಪಿಲಿಕ್ಕೋಡು ಪರಿಸರದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಕಾಡುಹಂದಿ ಮಾಂಸ ಮತ್ತು ನಾಡಕೋವಿ ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ.

ಇದಕ್ಕೆ ಸಂಬಂಧಿಸಿ ಪಿಲಿಕ್ಕೋ ಡು ವೆಂಙುಪ್ಪಾರ ಒರೋಟಿಚ್ಚಾಲ್‌ನ ರಜಿನ್ (25) ಮತ್ತು ಆಮಿಯಂ ಕಂಡತ್ತಿಲ್ ಸಂದೀಪ್ (38) ಎಂಬಿವ ರನ್ನು  ಬಂಧಿಸಿದ್ದಾರೆ. ಕಾಡುಹಂದಿ ಯನ್ನು ಕೊಲ್ಲಲು ಉಪಯೋಗಿಸಿ ದ್ದೆಂದು ಹೇಳಲಾಗುತ್ತಿರುವ ನಾಡಬಂದೂಕನ್ನು ಅರಣ್ಯಪಾಲಕರು ವಶಕ್ಕೆ ತೆಗೆದುಕೊಂಡಿದ್ದಾರೆ.  ಅರಣ್ಯ ಇಲಾಖೆಯ ಭೀಮನಡಿ ಸೆಕ್ಷನ್‌ನ ಬೀಟ್ ಆಫೀಸರ್‌ಗಳಾದ ಕೆ. ವೈಶಾಖ್, ಡೋನಾ.ಕೆ, ಅಗಸ್ಟಿನ್, ಯದುಕೃಷ್ಣನ್, ಅಜಿತ್ ಕುಮಾರ್, ಸ್ಪೆಷ್ ಡ್ಯೂಟಿ ಬೀಟ್ ಆಫೀಸರ್ ಜಿತಿನ್ ಎಂಬವರು ಈ ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಒಳಗೊಂಡಿದ್ದರು. ಬಂಧಿ ತರನ್ನು ನಂತರ ನ್ಯಾಯಾಲಯದಲ್ಲಿ ಹಾಜರುಪಡಿಸಲಾಯಿತು.

Leave a Reply

Your email address will not be published. Required fields are marked *

You cannot copy content of this page