ನರೇಂದ್ರ ಮೋದಿಯವರ ಪ್ರಮಾಣವಚನ: ಶ್ರೀ ಮಲ್ಲಿಕಾರ್ಜುನ ಕ್ಷೇತ್ರದಲ್ಲಿ ವಿಶೇಷ ಪೂಜೆ

ಕಾಸರಗೋಡು: ನಮೋ ಅಭಿ ಮಾನಿ ಬಳಗ ಮಲ್ಲಿಕಾರ್ಜುನ ಕಾಸರಗೋಡು” ಇದರ ವತಿಯಿಂದ ನಗರದ ಶ್ರೀ ಮಲ್ಲಿಕಾರ್ಜುನ ದೇವ ಸ್ಥಾನದಲ್ಲಿ ನರೇಂದ್ರ ಮೋದಿಜಿಯ ವರು ಸತತ ಮೂರನೇ ಬಾರಿಗೆ ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಸಂದರ್ಭದಲ್ಲಿ ಶ್ರೀ ವೆಂಕಟ್ರ ಮಣ ಮಹಿಳಾ ಭಜನಾ ವೃಂದದ ವರಿಂದ ಭಜನೆ, ಶ್ರೀ ವೆಂಕಟ್ರಮಣ ಬಾಲಗೋಕುಲದ ಮಕ್ಕಳಿಂದ ಕುಣಿತ ಭಜನೆ ನಡೆಯಿತು. ಶ್ರೀ ಹರಿನಾರಾ ಯಣ ಮಯ್ಯ ಕಣಿಪುರ ಇವರ ಆಚಾರ್ಯತ್ವದಲ್ಲಿ ಶ್ರೀ ದೇವರಿಗೆ ವಿಶೇಷ ಶ್ರೀರಂಗ ಪೂಜೆ ಮತ್ತು ಕಾರ್ತಿಕ ಪೂಜೆ ಜರಗಿತು. ಈ ಸಂದರ್ಭದಲ್ಲಿ ಭಾರ ತೀಯ ಜನತಾ ಪಕ್ಷದ ಕಾಸರಗೋಡು ಜಿಲ್ಲಾಧ್ಯಕ್ಷ ರವೀಶ್ ತಂತ್ರಿ ಕುಂಟಾರು, ವಾರ್ಡು ಸದಸ್ಯೆ ಶ್ರೀಲತಾ ಟೀಚರ್, ಜಿಲ್ಲಾ ಕಾರ್ಯದರ್ಶಿ ಉಮಾ ಕಡಪ್ಪುರ, ಕಾಸರಗೋಡು ಮಂಡಲ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ್ ಪ್ರಭು, ಧಾರ್ಮಿಕ, ಸಾಮಾಜಿಕ ಮುಂದಾಳು ಕೆ.ಎನ್. ವೆಂಕಟ್ರಮಣ ಹೊಳ್ಳ, ನಮೋ ಅಭಿಮಾನಿ ಬಳಗದ ಕಾರ್ಯಕರ್ತ ರಾದ ರಾಮಕೃಷ್ಣ ಹೊಳ್ಳ, ಕಿಶೋರ್ ಕುಮಾರ್, ಶಂಕರ ಅಡಿಗ, ರವಿ ಕೇಸರಿ, ಪುರಂದರ ಶೆಟ್ಟಿ, ಸಾಯಿನಾಥ್ ರಾವ್, ಶಿವಶಂಕರ ಅಡಿಗ, ಶ್ರೀಕಾಂತ್ ವೈ.ಎಸ್, ಪ್ರಮೋದ್, ರಾಮಕೃಷ್ಣ ರಾವ್, ಪ್ರೇಮ್ಜಿತ್, ನಾಮದೇವ್, ವಾರ್ಡ್ ಮಾಜಿ ಕೌನ್ಸಿಲರ್ ವಿಜಯ ಶೆಟ್ಟಿ ಪಕ್ಷದ ಹಲವು ಗಣ್ಯರು ಕಾರ್ಯರ್ಕರು ಭಾಗವಹಿಸಿದರು. ಭಕ್ತಾದಿಗಳಿಗೆ ಸಿಹಿ, ಭೋಜನ ವ್ಯವಸ್ಥೆಯನ್ನು ಮಾಡಲಾಯಿತು.

Leave a Reply

Your email address will not be published. Required fields are marked *

You cannot copy content of this page