ಚೆಟ್ಟುಂಗುಳಿ ನಿವಾಸಿ ಖತ್ತರ್ನಲ್ಲಿ ನಿಧನ
ವಿದ್ಯಾನಗರ: ವಿದ್ಯಾನಗರ ಚೆಟ್ಟುಂಗುಳಿ ನಿವಾಸಿ ಅಶ್ರಫ್ (45) ಖತ್ತರ್ನ ಹಮಾದ್ ಜನರಲ್ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಅಸೌಖ್ಯದ ಹಿನ್ನೆಲೆಯಲ್ಲಿ ಚಿಕಿತ್ಸೆಯಲ್ಲಿದ್ದರು. ಮೃತರು ಪತ್ನಿ ರಿಶಾನ, ಮಕ್ಕಳಾದ ಸಲ್ಮಾನ್ ಫಾರೀಸ್, ಫಾತಿಮ ಸಫಾ, ಸೈಮ್, ಲಹಾನ್ ಹೈಬಾಕ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಮೃತದೇಹವನ್ನು ಊರಿಗೆ ತಂದು ಇಂದು ಮಧ್ಯಾಹ್ನ ಚೆಟ್ಟುಂಗುಳಿ ಜುಮಾ ಮಸೀದಿಯಲ್ಲಿ ಅಂತ್ಯ ಸಂಸ್ಕಾರ ನಡೆಸಲಾಯಿತು.