ರೋಗ ರುಜಿನಗಳಿಂದ ನಾಡನ್ನು ಪಾರುಮಾಡಲು ಆಟಿ ದೈವಗಳ ಸಂಚಾರ ಆರಂಭ

ಮುಳ್ಳೇರಿಯ: ಕರ್ಕಾಟಕ ತಿಂಗಳಲ್ಲಿ ಊರಿನಲ್ಲಿ ಉಂಟಾಗುವ ವಿವಿಧ ರೀತಿಯ ದೋಷಗಳನ್ನು ದೂರ ಮಾಡಲು, ರೋಗ ರುಜಿನಗ ಳಿಂದ ಪಾರು ಮಾಡಲು ದೈವಗಳು ಮನೆ ಮನೆಗೆ ತಲುಪುವುದಾಗಿ ನಂಬಿಕೆಯಲ್ಲಿ ಆಟಿಕಳಂಜ, ಆಟಿಬೇ ಡರು ಸಂಚಾರ ಆರಂಭಿಸಿದ್ದಾರೆ. ಕಾರಡ್ಕ ಗ್ರಾಮದಲ್ಲಿ ಕರ್ಕಾಟಕ 16ರಿಂದ ಈ ಸಂಚಾರ ಆರಂಭಗೊ ಳ್ಳುತ್ತಿದ್ದು, ಗ್ರಾಮ ದೇವಸ್ಥಾನವಾದ ಮುಂಡೋಳು ಶ್ರೀ ದುರ್ಗಾಪರಮೇಶ್ವರಿ, ಮಹಾವಿಷ್ಣು, ಶಾಸ್ತಾರ ದೇವಸ್ಥಾನಕ್ಕೆ ಪ್ರಥಮವಾಗಿ ತಲುಪಿ ಅಲ್ಲಿ ಕುಣಿದು ಬಳಿಕ ಊರಿನ ಗಣ್ಯ ವ್ಯಕ್ತಿಗಳ ಮನೆಗಳಿಗೆ ತೆರಳುವುದು ಸಂಪ್ರದಾಯವಾಗಿದೆ.

ಇದರಂತೆ ಈ ವರ್ಷ ಇಂದು  ಮುಂಡೋಳು ಕ್ಷೇತ್ರಕ್ಕೆ ಆಟಿದೈವಗಳು ತಲುಪಿದ ಬಳಿಕ ಮನೆ ಮನೆ ಸಂಚಾರ ಆರಂಭಿಸಿವೆ.

Leave a Reply

Your email address will not be published. Required fields are marked *

You cannot copy content of this page