ಸ್ಕೂಟರ್ ಮಗುಚಿ ಚಿಕಿತ್ಸೆಯಲ್ಲಿದ್ದ ಯುವಕ ಮೃತ್ಯು

ಕಾಸರಗೋಡು: ಸ್ಕೂಟರ್ ಮಗುಚಿ ಯುವಕ ಮೃತಪಟ್ಟ ಘಟನೆಯಿಂದ ನಾಡು ದುಃಖಸಾಂ ದ್ರವಾಗಿದೆ. ದೇಳಿಯ ಆಟೋ ಚಾಲಕ ಅಬ್ದುಲ್ ರಜಾಕ್‌ರ ಪುತ್ರ ದೇಳಿ- ಅರಮಂಗಾನ ರಸ್ತೆಯ ಆರ್.ಎಸ್. ಅಹಮ್ಮದ್ ರಂಜಾನ್ (19) ಮಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ನಿನ್ನೆ ಮುಂಜಾನೆ 5 ಗಂಟೆಗೆ ಚಟ್ಟಂಚಾಲ್- ದೇಳಿ ರಸ್ತೆಯ ಶಿವಪುರ ಜಂಕ್ಷನ್‌ನಲ್ಲಿ ಅಪಘಾತ ಸಂಭವಿಸಿತ್ತು. ಮೃತರು ತಂದೆ, ತಾಯಿ ಸೈಬಿದ, ಸಹೋದರಿ ರುಮಾನ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಮೇಲ್ಪರಂಬ ಪೊಲೀಸರು ಕೇಸು ದಾಖಲಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page