ಎಡರಂಗ ಸರಕಾರದ ವಾರ್ಷಿಕ ದಿನಾಚರಣೆ: ಐಕ್ಯರಂಗದಿಂದ ಕಪ್ಪು ಪತಾಕೆ ಮೆರವಣಿಗೆ

ಕಾಸರಗೋಡು: ಎಡರಂಗ ಸರಕಾರದ ನಾಲ್ಕನೇ ವಾರ್ಷಿಕ ದಿನವಾದ ನಿನ್ನೆ ಐಕ್ಯರಂಗದ ನೇತೃತ್ವದಲ್ಲಿ ರಾಜ್ಯ ವ್ಯಾಪಕವಾಗಿ ನಡೆಸಿದ ಆಂದೋಲನದಂಗವಾಗಿ ಕಾಸರಗೋಡು ವಿಧಾನಸಭಾ ಮಂಡಲ ಸಮಿತಿ ಕಪ್ಪು ಪತಾಕೆ ಮೆರವಣಿಗೆ, ಪ್ರತಿಭಟನಾ ಸಮಾ ವೇಶವನ್ನು ನಡೆಸಿದೆ. ಜನವಿರೋಧಿ ನಿಲುವು, ಭ್ರಷ್ಟಾಚಾರವಾಗಿದೆ. ಪಿಣರಾಯಿ ವಿಜಯನ್‌ರ ದ್ವಿತೀಯ ಬಾರಿಯ ನಾಲ್ಕನೇ ವರ್ಷದ ಮುಖಮುದ್ರೆ ಎಂದು  ಯುಡಿಎಫ್ ಜಿಲ್ಲಾ ಅಧ್ಯಕ್ಷ ಕಲ್ಲಟ್ರ ಮಾಹಿನ್ ಹಾಜಿ ಆಪಾದಿಸಿದರು.

ಹೊಸ ಬಸ್ ನಿಲ್ದಾಣ ಪರಿಸರದಲ್ಲಿ ನಡೆದ ಸಭಯನ್ನು ಉದ್ಘಾಟಿಸಿ ಅವರು ಮತನಾಡುತ್ತಿದ್ದರು. ಕಾಸರಗೋಡು  ವಿಧಾನಸಭಾ ಮಂಡಲ ಅಧ್ಯಕ್ಷ ಮಾಹಿನ್ ಕೇಳೋಟ್ ಅಧಕ್ಷತೆ ವಹಿಸಿದರು. ಪ್ರಧಾನ ಸಂಚಾಲಕ ಕೆ. ಖಾಲಿದ್, ಶಾಸಕ ಎನ್.ಎ ನೆಲ್ಲಿಕುನ್ನು, ಅಬ್ದುಲ್ ರಹಿಮಾನ್, ಕೆ. ನೀಲಕಂಠನ್, ಎ. ಗೋವಿಂದನ್ ನಾಯರ್. ಪಿ.ಎ.ಅಶ್ರಫಲಿ, ಅಬ್ದುಲ್ಲ ಕುಂಞಿ ಚೆರ್ಕಳ ಸಹಿತ ಹಲವರು ಮಾತನಾಡಿದರು.

Leave a Reply

Your email address will not be published. Required fields are marked *

You cannot copy content of this page