ಪ್ರತಾಪನಗರದಲ್ಲಿ ಶ್ರೀ ಸತ್ಯಸಾಯಿ ಅಭಯನಿಕೇತನ್ ವತಿಯಿಂದ ಉಚಿತ ಕನ್ನಡಕ ವಿತರಣೆ
ಮಂಗಲ್ಪಾಡಿ: ತಾಳಿಪಡ್ಪು ಭಗವಾನ್ ಶ್ರೀ ಸತ್ಯಸಾಯಿ ಅಭಯನಿಕೇತನ್ ಕಾಸರಗೋಡು ಹಾಗೂ ಸಾರ್ವಜನಿಕ ಶ್ರೀ ಗೌರೀ ಗಣೇಶೋತ್ಸವ ಸಮಿತಿ ಪ್ರತಾಪನಗರ ಇದರ ಜಂಟಿ ಆಶ್ರಯದಲ್ಲಿ ಭಗವಾನ್ ಶ್ರೀ ಸತ್ಯಸಾಯಿ ಬಾಬರವರ ಜನ್ಮ ಶತಾಬ್ದಿ ಪ್ರಯುಕ್ತ ಇತ್ತೀಚೆಗೆ ಜರಗಿದ ಉಚಿತ ನೇತ್ರ ಚಿಕಿತ್ಸಾ ಶಿಬಿರದ ಫಲಾನುಭವಿಗಳಿಗೆ ಉಚಿತ ಕನ್ನಡಕ ವಿತರಣೆ ಕಾರ್ಯಕ್ರಮ ನಿನ್ನೆ ಬೆಳಿಗ್ಗೆ ಪ್ರತಾಪನಗರ ಸಾರ್ವಜನಿಕ ಶ್ರೀ ಗೌರೀ ಗಣೇಶ ಮಂದಿರದಲ್ಲಿ ದೀಪ ಪ್ರಜ್ವಲನೆಯೊಂದಿಗೆ ನಡೆಯಿತು. ನ್ಯಾಯವಾದಿ ಮುರಳೀಧರ ಬಳ್ಳುಕ್ಕುರಾಯ ಅಧ್ಯಕ್ಷತೆ ವಹಿಸಿದರು. ಕಾಸರಗೋಡು ಶ್ರೀ ಸತ್ಯಸಾಯಿ ಅಭಯಾನಿಕೇತನ ಸೇವಾಶ್ರಮದ ಕಾರ್ಯದರ್ಶಿ ಲತಾ.ಪಿ ಸಂಸ್ಥೆಯ ಪರಿಚಯವನ್ನು ಮಾಡಿದರು.
ಮಂಗಲ್ಪಾಡಿ ಸೇವಾಭಾರತಿ ಪ್ರಧಾನ ಕಾರ್ಯದರ್ಶಿ ಸತೀಶ್ ಕುಮಾರ್ ಶೆಟ್ಟಿ ಒಡ್ಡಂಬೆಟ್ಟು ಪ್ರಧಾನ ಭಾಷಣ ಮಾಡಿದರು. ಮುಖ್ಯ ಅತಿಥಿಗಳಾಗಿ ಡಾ. ಅಶೋಕ್ ಪದಕಣ್ಣಾಯ, ಪ್ರತಾಪನಗರ ಶ್ರೀ ಗೌರೀ ಗಣೇಶ ಮಂದಿರದ ಅಧ್ಯಕ್ಷ ದುಗ್ಗಪ್ಪ ಶೆಟ್ಟಿ ತಿಂಬರ, ರಾಮಕೃಷ್ಣ ಸಿ.ಎನ್. ಕಾಸರಗೋಡು ಉಪಸ್ಥಿತರಿದ್ದರು. ಕವಿತಾ ವಿ.ರಾವ್ ಪ್ರಾರ್ಥನೆ ಹಾಡಿದರು. ವಸಂತ ಕುಮಾರ್ ಮಯ್ಯ ಸ್ವಾಗತಿಸಿ, ನಿರೂಪಿಸಿದರು. ಆಶ್ರಮದ ಜತೆ ಕಾರ್ಯದರ್ಶಿ ಬಿ.ಪ್ರೇಂ ಪ್ರಕಾಶ್ ವಂದಿಸಿದರು. 90 ಮಂದಿಗೆ ಉಚಿತ ಕನ್ನಡವನ್ನು ವಿತರಿಸಲಾಯಿತು.