ಪಾನ್ ಮಸಾಲೆ ಸಹಿತ ಇಬ್ಬರ ಸೆರೆ

ಉಪ್ಪಳ: ರಾಜ್ಯದಲ್ಲಿ ಮಾರಾಟ ನಿಷೇಧಿಸಲಾದ ಪಾನ್ ಮಸಾಲೆ ಕೈವಶವಿರಿಸಿಕೊಂಡ ಇಬ್ಬರು ಅನ್ಯರಾಜ್ಯ ಕಾರ್ಮಿಕರನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ.

ಅಂಗಡಿಮೊಗರಿನಲ್ಲಿ ವಾಸಿಸುವ ಅಮಿತ್ ಸೋಂಕಾರ್ (25), ಮಜೀರ್ಪಳ್ಳ ಕ್ವಾರ್ಟರ್ಸ್‌ನಲ್ಲಿ ವಾಸಿಸುವ ಸೂರಜ್  ಸೋನಕರ್ (31) ಎಂಬಿವರು ಬಂಧಿತ ವ್ಯಕ್ತಿಗಳು.

ಹೊಸಂಗಡಿ ಪೇಟೆಯಲ್ಲಿ ನಿಂತಿದ್ದ ಅಮಿತ್ ಸೋಂಕಾರ್‌ನ ಕೈಯಿಂದ 18ಪ್ಯಾಕೆಟ್, ಮಜೀರ್ಪಳ್ಳ ಬಸ್ ನಿಲ್ದಾಣದಲ್ಲಿದ್ದ ಸೂರಜ್ ಸೇನಕರ್‌ನ ಕೈಯಿಂದ ೪೫ ಪ್ಯಾಕೆಟ್ ಪಾನ್ ಮಸಾಲೆ ವಶಪಡಿಸಲಾಗಿದೆ. ಮಂಜೇಶ್ವರ ಎಸ್‌ಐ ಅಜಯ್ ಎಸ್ ಮೆನನ್ ನೇತೃತ್ವದ ಪೊಲೀಸರ ಗಸ್ತು ನಡೆಸುತ್ತಿದ್ದ ವೇಳೆ ಪಾನ್ ಮಸಾಲ ವಶಪಡಿಸಲಾಗಿದೆ.

You cannot copy contents of this page