ವಿದ್ಯಾನಗರ ಪೊಲೀಸರ ಪಕ್ಷಪಾತ ನೀತಿ ಕೊನೆಗೊಳಿಸಲು ವಿಎಚ್ಪಿ ಆಗ್ರಹ
ಕಾಸರಗೋಡು: ವಿದ್ಯಾನಗರ ಠಾಣೆಯ ಪೊಲೀಸರು ಪಕ್ಷಪಾತ ನಿಲುವು ಕೊನೆಗೊಳಿಸಬೇಕೆಂದು ವಿಎಚ್ಪಿ ಆಗ್ರಹಿಸಿದೆ. ಎಡನೀರು ಕಳರಿಯಲ್ಲಿ ಸ್ಥಾಪಿಸಲಾಗಿದ್ದ ಓಂಕಾರ ಧ್ವಜ, ತೋರಣಗಳನ್ನು ತೆರವುಗೊಳಿಸಿದ ಘಟನೆಯನ್ನು ವಿಶ್ವಹಿಂದು ಪರಿಷತ್ ಖಂಡಿಸಿದೆ. ಗ್ರಾಮೀಣ ಪ್ರದೇಶಗಳಲ್ಲಿ ಸಿಪಿಎಂ ಬೆಂಬಲಿಗರಲ್ಲದ ಇತರ ಪಕ್ಷ ದವರು ನಡೆಸುವ ಧಾರ್ಮಿಕ ಕಾರ್ಯ ಕ್ರಮಗಳು, ಸಾಂಸ್ಕೃತಿಕ ಚಟುವಟಿಕೆಗಳಿಗೆ ಅವಕಾಶ ನೀಡದೆ ಸಿಪಿಎಂನ ನಿಲುವನ್ನೇ ಪೊಲೀಸರು ಕೂಡ ಬೆಂಬಲಿಸುತ್ತಿದ್ದಾ ರೆಂದು ವಿಎಚ್ಪಿ ದೂರಿದೆ. ಸಾರ್ವಜ ನಿಕ ಸ್ಥಳಗಳಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯಾಗುವಂತೆ ಹಲವು ವರ್ಷಗಳಿಂ ದ ಸ್ಥಾಪಿಸಿರುವ ಸಿಪಿಎಂ ಧ್ವಜ, ತೋರಣಗಳನ್ನು ಪೊಲೀಸ್ ಇಲಾಖೆ ತೆರವುಗೊಳಿಸದಿರುವುದು ಖಂಡನೀ ಯವೆಂದು ಸಂಘಟನೆ ತಿಳಿಸಿದೆ. ಇದೇ ರೀತಿ ಪಕ್ಷಪಾತ ಧೋರಣೆಯನ್ನು ಮುಂದುವರಿಸಿದರೆ ತೀವ್ರ ಪ್ರತಿಭಟನೆಗೆ ವಿಎಚ್ಪಿ ಮುಂದಾಗಲಿದೆಯೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.