ಬಿಜೆಪಿ ಜನ ಪಂಚಾಯತ್ ಕಾರ್ಯಕ್ರಮ ಯಶಸ್ವಿಗೆ ಕರೆ

ಮಂಜೇಶ್ವರ: ಕೇಂದ್ರ ಸರಕಾರದ ಯೋಜನೆಗಳ ಸಂಪೂರ್ಣ ಮಾಹಿತಿ ಹಾಗೂ ರಾಜ್ಯದ ಎಡರಂಗ ಸರಕಾರದ ಆಡಳಿತ ವೆÊಪsಲ್ಯ ಬಗ್ಗೆ ಜನತೆಗೆ ತಿಳಿ ಸಲು ಬಿಜೆಪಿ ಪ್ರತಿ ಪಂಚಾಯತ್‌ಗಳಲ್ಲಿ ಹಮ್ಮಿಕೊಂಡಿರುವ ಜನ ಪಂಚಾ ಯತ್ ಸಾರ್ವಜನಿಕ ಸಭೆ ಯಶಸ್ವಿ ಗೆiÁಳಿಸಲು ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ಕರೆ ನೀಡಿದೆ. ನವಂಬರ್ ೨೮ ಬಾಯರ್ ಪದವುನಲ್ಲಿ, ೩೦ ಪೆರ್ಮುದೆ ಪೇಟೆಯಲ್ಲಿ, ಡಿಸೆಂಬರ್ ೧ರಂದು ಮಿಯಾಪದವು ಪೇಟೆಯಲ್ಲಿ ಕಾರ್ಯಕ್ರಮ ಜರಗಲಿದೆ ಎಂದು ಬಿಜೆಪಿ ತಿಳಿಸಿದೆ. ಕಾರ್ಯಕ್ರಮ ದ ಯಶಸ್ವಿಗಾಗಿ ಮೀಂಜ ಬಿಜೆಪಿ ಕಾರ್ಯಕರ್ತರ ಸಭೆ ಬೆಜ್ಜಂಗಳದಲ್ಲಿ ಜರಗಿತು. ಮಂಡಲ ಅಧ್ಯಕ್ಷ ಆದರ್ಶ್ ಬಿ ಎಂ ಅಧ್ಯಕ್ಷತೆ ವಹಿಸಿದರು. ಸುಧಾಮ ಗೋಸಾಡ ಮಾಹಿತಿ ನೀಡಿ ದರು. ಮುಖಂಡರಾದ ಚಂದ್ರಶೇಖರ ಕೊಡಿ, ನಾರಾಯಣ ನಾಯ್ಕ್, ಪದ್ಮನಾಭ ರೈ, ಕಳ್ಳಿಗೆ ಸದಾನಂದ, ಎ.ಕೆ ಕೈಯಾರ್, ಮೋಹನ, ಶಾಲಿನಿ, ನಾರಾಯಣ ತುಂಗ, ಸತೀಶ, ಕರುಣಾಕರ ಉಪಸ್ಥಿತರಿದ್ದರು. ಕೆ.ವಿ ಭಟ್ ಸ್ವಾಗತಿಸಿ ಚಂದ್ರಹಾಸ್ ಕಡ೦ಬಾರ್ ವಂದಿಸಿದರು

Leave a Reply

Your email address will not be published. Required fields are marked *

You cannot copy content of this page