ಮೊಗ್ರಾಲ್ ಹೊಳೆಯಲ್ಲಿ ಮುಳುಗಿಸಿಟ್ಟ ಆರು ದೋಣಿಗಳನ್ನು ನಾಶಗೊಳಿಸಿದ ಪೊಲೀಸ್: ಟಿಪ್ಪರ್ ಲಾರಿವಶ

ಕುಂಬಳೆ: ಹೊಳೆಯಿಂದ ಅನಧಿಕೃತವಾಗಿ ಹೊಯ್ಗೆ ಸಂಗ್ರಹಿಸಿ ಸಾಗಿಸುವ ದಂಧೆ ವಿರುದ್ಧ ಕುಂಬಳೆ ಪೊಲೀಸರು ಕಾರ್ಯಾಚರಣೆ ಇನ್ನಷ್ಟು ತೀವ್ರಗೊಳಿಸಿದ್ದಾರೆ. ನಿನ್ನೆ ರಾತ್ರಿ ಎಸ್ ಐಗಳಾದ  ಸಿ.ಸನಿತ್, ಅನಂತಕೃಷ್ಣನ್ ಆರ್ ಮೆನೋನ್ ನೇತೃತ್ವದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ  ಹೊಯ್ಗೆ ಸಂಗ್ರಹಿಸಲು ಬಳಸುವ ಆರು ದೋಣಿಗಳನ್ನು ವಶಕ್ಕೆ ತೆಗೆಯಲಾ ಗಿದೆ.  ಮೊಗ್ರಾಲ್ ಹೊಳೆಯಲ್ಲಿ ನೀರಿನಲ್ಲಿ ಮುಳುಗಿಸಿಟ್ಟ ಸ್ಥಿತಿಯಲ್ಲಿ ದೋಣಿಗಳು ಪತ್ತೆಯಾಗಿದ್ದು, ಅವುಗಳನ್ನು ಬಳಿಕ ಜೆಸಿಬಿ ಬಳಸಿ ನಾಶಗೊಳಿಸಲಾಗಿದೆ.  ಅದೇ ರೀತಿ ಆರಿಕ್ಕಾಡಿ ಕೆಪಿ ರೆಸೋ ರ್ಟ್ ಬಳಿಯ  ಹೊಳೆಯಿಂದ ಹೊಯ್ಗೆ ಸಾಗಿಸುತ್ತಿದ್ದ ಟಿಪ್ಪರ್ ಲಾರಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿ ದ್ದಾರೆ. ಈ ವೇಳೆ ಚಾಲಕ ಪರಾರಿಯಾಗಿದ್ದಾನೆ. ಈ ಸಂಬಂಧ  ೧೦ ಮಂದಿ ವಿರುದ್ಧ ಕಳವು ಪ್ರಕರಣ ದಾಖಲಿಸಲಾಗಿ ದೆಯೆಂದು ಪೊಲೀಸರು ತಿಳಿಸಿದ್ದಾರೆ.

You cannot copy contents of this page