ಉಪ್ಪಳ: ಬಾಯಾರು ತಲೆಂಗಳ ನಿವಾಸಿ ಪ್ರಗತಿಪರ ಕೃಷಿಕ, ಸಾಯಿ ಭಕ್ತ ಕೃಷ್ಣ ಭಟ್ (88) ಶುಕ್ರವಾರ ಸ್ವ-ಗೃಹದಲ್ಲಿ ನಿಧನ ಹೊಂದಿದರು. ಬಾಯಾರು ಪ್ರಶಾಂತಿ ವಿದ್ಯಾ ಕೇಂದ್ರದ ಸಂಸ್ಥಾಪಕ ಟ್ರಸ್ಟಿಗಳಲ್ಲಿ ಓರ್ವರಾಗಿದ್ದರು. ಬಾಯಾರು ಸತ್ಯಸಾಯಿ ಸೇವಾ ಸಮಿತಿಯ ಹಿರಿಯ ಸದಸ್ಯರಾಗಿದ್ದರು. ಮೃತರು ಪತ್ನಿ ಸುಶೀಲ, ಮಕ್ಕಳಾದ ಶ್ರೀರಾಮ ಭಟ್ (ನಿವೃತ್ತ ಡಿ.ವೈ.ಎಸ್.ಪಿ ಕೇರಳ ಪೊಲೀಸ್), ಶ್ರೀಹರಿ ಭಟ್, ಶ್ರೀದೇವಿ, ಸೊಸೆಯಂದಿರಾದ ಗಾಯತ್ರಿ, ಗೀತಾ, ಅಳಿಯ ರಮೇಶ್ ಭರಣ್ಯ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.






