ಅಭಿಭಾಷಕ ಪರಿಷತ್‌ನಿಂದ ಮಹಿಳಾ ದಿನಾಚರಣೆ

ಕಾಸರಗೋಡು: ಭಾರತೀಯ ಅಭಿಭಾಷಕ ಪರಿಷತ್ ಕಾಸರಗೋಡು ಜಿಲ್ಲಾ ಸಮಿತಿಯ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ನಡೆಸಲಾಯಿತು. ವಿದ್ಯಾನಗರ ಅಸಾಪ್ ಸಭಾಂಗಣ ದಲ್ಲಿ ನಡೆದ ಕಾರ್ಯಕ್ರಮವನ್ನು ಜಿಲ್ಲಾ ಅಧ್ಯಕ್ಷ ನ್ಯಾಯವಾದಿ ಎ.ಸಿ. ಅಶೋಕ್ ಕುಮಾರ್ ಉದ್ಘಾಟಿಸಿ ದರು.

ಹಿರಿಯ ನ್ಯಾಯವಾದಿ ಆಲೀಸ್ ಕೃಷ್ಣನ್ ಪ್ರಧಾನ ಭಾಷಣ ಮಾಡಿದರು. ನ್ಯಾಯವಾದಿ ಬೀನಾ ಕೆ.ಎಂ. ಅಧ್ಯಕ್ಷತೆ ವಹಿಸಿದರು. ರಾಜ್ಯ ಉಪಾಧ್ಯಕ್ಷ ನ್ಯಾಯವಾದಿ ಬಿ. ರವೀಂದ್ರನ್, ರಾಜ್ಯ ಸಮಿತಿ ಸದಸ್ಯ ನ್ಯಾಯವಾದಿ ಕರುಣಾಕರನ್ ನಂಬ್ಯಾರ್, ಜಿಲ್ಲಾ ಕಾರ್ಯದರ್ಶಿ ನ್ಯಾಯವಾದಿ ಪಿ. ಮುರಳೀಧರನ್ ಶುಭ ಕೋರಿದರು. ನ್ಯಾಯವಾದಿ ಕುಸುಮ ಎಂ. ಸ್ವಾಗತಿಸಿ, ನ್ಯಾಯವಾದಿ ಅಕ್ಷತ ಎಂ.ಎ. ವಂದಿಸಿದರು.

You cannot copy contents of this page