ಶ್ರೀ ಮಲ್ಲಿಕಾರ್ಜುನ ಕ್ಷೇತ್ರದ ಆರಾಟು ಕೆರೆ ಎಸ್‌ವಿಟಿ ಫ್ರೆಂಡ್ಸ್ ಸರ್ಕಲ್‌ನಿಂದ ಶುಚೀಕರಣ

ಕಾಸರಗೋಡು: ನಗರದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಶ್ರೀ ದೇವರ ಅವಭೃತ ಸ್ನಾನದ ಆರಾಟುಕೊಳವನ್ನು ಎಸ್‌ವಿಟಿ ಫ್ರೆಂಡ್ಸ್ ಸರ್ಕಲ್ ಇದರ ಕಾರ್ಯಕರ್ತರು ಶ್ರಮದಾನದ ಮೂಲಕ ಶುಚಿಗೊಳಿಸಿದರು. ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಸಹಿತ ವಿವಿಧ ವಲಯಗಳಲ್ಲಿ ಸುಮಾರು ನಾಲ್ಕು ದಶಕಗಳಿಂದ ಕಾರ್ಯಾಚರಿಸುತ್ತಿರುವ ಸಂಸ್ಥೆಯ ಸ್ಥಾಪಕಾಧ್ಯಕ್ಷ  ಕೆ.ಎನ್. ವೆಂಕಟ್ರಮಣ ಹೊಳ್ಳ, ನಗರಸಭಾ ಕೌನ್ಸಿಲರ್ ಕೆ.ಎನ್ ರಾಮಕೃಷ್ಣ ಹೊಳ್ಳ, ಗೋಕುಲ್, ರಘುರಾಜ ಅಗ್ಗಿತ್ತಾಯ, ರವಿ ಕೇಸರಿ, ನಾಮದೇವ ಪೈ, ಕೆ.ವಿ. ಶೇಷಾದ್ರಿ ಹೊಳ್ಳ, ಕಿಶೋರ್ ಎಸ್‌ವಿಟಿ ತುಳಸಿ, ಬಾಲಕೃಷ್ಣ ಪಡ್ರೆ, ಕಿಶೋರ್ ಬಿ.ಪಿ, ವಸಂತ್ ಕೆರೆಮನೆ, ಜಪ್ಪ ಪ್ರಕಾಶ್, ಶಂಕರ, ಸೀನಪ್ಪ ಪಡ್ರೆ ಭಾಗವಹಿಸಿದರು.

RELATED NEWS

You cannot copy contents of this page