ಕರಾಟೆ ಕಲಿಯಲು ಬಂದ ಬಾಲಕಿಗೆ ಕಿರುಕುಳ ಯತ್ನ: ತರಬೇತುದಾರನ ವಿರುದ್ಧ ಕೇಸು

ಹೊಸದುರ್ಗ: ಕರಾಟೆ ಕಲಿಯಲು ಬಂದ 14ರ ಹರೆಯದ ಬಾಲಕಿಗೆ ತರಬೇತುದಾರ ಕಿರುಕುಳ ನೀಡಲೆತ್ನಿಸಿದ ಬಗ್ಗೆ ದೂರಲಾಗಿದೆ. ಈ ಸಂಬಂಧ ತರಬೇತುದಾರನಾದ ಮುರಾಳ ಎಂಬಲ್ಲಿನ ಟಿ.ಕೆ. ಪ್ರಸನ್ನ ಎಂಬಾತನ ವಿರುದ್ಧ ತಳಿಪರಂಬ ಪೊಲೀಸರು ಕೇಸು ದಾಖಲಿಸಿ ಕೊಂಡಿದ್ದಾರೆ. ತಳಿಪರಂಬ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿ ಯಾದ ಬಾಲಕಿಗೆ ಈತ ಕಳೆದ ಜನವರಿ ತಿಂಗಳಲ್ಲಿ ವಳ್ಳಕ್ಕೀಲ್ ಪಾರ್ಕ್‌ನಲ್ಲಿ  ಕಿರುಕುಳ ನೀಡಲೆತ್ನಿಸಿ ರುವುದಾಗಿ ಆರೋಪಿಸಲಾಗಿದೆ.

You cannot copy contents of this page