ನೆಕ್ರಾಜೆ ಕ್ಷೇತ್ರದಲ್ಲಿ ಪುತ್ರಕಾಮೇಷ್ಠಿ, ಧನ್ವಂತರಿ ಯಾಗ ಸಮಾಪ್ತಿ

ಬದಿಯಡ್ಕ: ನೆಕ್ರಾಜೆ ಸಂತಾನ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಧನ್ವಂತರಿ ಪುತ್ರ ಕಾಮೇಷ್ಠಿ ಯಾಗ ಸಮÁಪ್ತಿಗೊಂಡಿತು. ಡಾ. ವೇಣು ಗೋಪಾಲ ಕಳೆಯತ್ತೋಡಿ ದೀಪ ಪ್ರಜ್ವಲನೆಗೊಳಿಸಿದರು. ನಂತರ ವಿವಿಧ ಸಂಘಗಳಿAದ ಭಜನಾ ಕಾರ್ಯಕ್ರಮ ನಡೆಯಿತು. ಗಣಪತಿ ಹೋಮ, ಯಾಗ ಸಂಕಲ್ಪ ಧನ್ವಂತರಿ ನಾಮಜಪ ಯಜ್ಞ, ಧನ್ವಂತರಿ ಯಾಗ ಪುತ್ರ ಕಾಮೇಷ್ಠಿ ಯಾಗದ ನೇತೃತ್ವವನ್ನು ವೈದಿಕ ವಿದ್ವಾಂಸ ಕಶೆಕೋಡಿ ಸೂರ್ಯನಾರಾಯಣ ಭಟ್ ಕಲ್ಲಡ್ಕ ವಹಿಸಿದ್ದರು. ಬಳಿಕ ನಡೆದ ಧಾರ್ಮಿಕ ಸಭೆಯಲ್ಲಿ ಆನೆಗುಂದಿ ಮಹಾ ಸಂಸ್ಥಾನ ಸರಸ್ವತೀ ಪೀಠಾಧೀಶ್ವರ ಅನಂತ ಶ್ರೀ ವಿಭೂಷಿತ ಕಾಳಹಸ್ತೇಂದ್ರ …

ವಿಮಾನ ನಿಲ್ದಾಣದಲ್ಲಿ 9 ಕೋಟಿ ರೂ. ಮೌಲ್ಯದ ಹೈಬ್ರೀಡ್ ಗಾಂಜಾ ಪತ್ತೆ: ಇಬ್ಬರ ಸೆರೆ

ಕಲ್ಲಿಕೋಟೆ: ಕರಿಪ್ಪೂರ್ ಅಂ ತಾರಾಷ್ಟ್ರೀಯ ವಿಮಾನ ನಿಲ್ದಾಣ ದಲ್ಲಿ ಪೊಲೀಸರು ನಡೆಸಿದ ಕಾರ್ಯಾ uಚರಣೆಯಲ್ಲಿ ೯ ಕೋಟಿ ರೂ. ಮೌಲ್ಯದ ಹೈಬ್ರೀಡ್ ಗಾಂಜಾ ಪತ್ತೆಹಚ್ಚಲಾಗಿದೆ. ಇದಕ್ಕೆ ಸಂಬಂಧಿಸಿ ಕಣ್ಣೂರು ಮಟ್ಟನ್ನೂರು  ನಿವಾಸಿ  ಪಿಂಟ್‌ಜಿಲ್ ಮತ್ತು ತಲಶ್ಶೇರಿಯ ಆರ್. ಬಾಬು (33) ಎಂಬವರನ್ನು ಬಂಧಿಸಲಾಗಿದೆ. ಆ ವೇಳೆ ಅವರ ಜತೆಗಿದ್ದವರು ಪರಾರಿಯಾಗಿರು ವುದಾಗಿ ಪೊಲೀಸರು ತಿಳಿಸಿದ್ದಾರೆ. ಬಂಧಿತರು ಅಬುದಾಬಿಯಿಂದ ಈ ಮಾಲನ್ನು ಸಾಗಿಸಿದ್ದರು. ವಶಪಡಿಸಲಾದ ಮಾಲಿನಲ್ಲಿ ಒಟ್ಟು 18 ಕಿಲೋ ಹೈಬ್ರೀಡ್ ಗಾಂಜಾವನ್ನು ಅವರಿಂದ ಪತ್ತೆಹಚ್ಚಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ. …

ಕೈ ನರ ಕತ್ತರಿಸಿ ಆತ್ಮಹತ್ಯೆಗೆತ್ನಿಸಿದ ಯುವತಿ ಆಸ್ಪತ್ರೆಯಲ್ಲಿ ಸಾವು

ಕುಂಬಳೆ: ವಾಸಸ್ಥಳದಲ್ಲಿ ಕೈಯ ನರ ಕತ್ತರಿಸಿ ಆತ್ಮಹತ್ಯೆಗೆತ್ನಿಸಿದ  ಯುವತಿ ಮೃತಪಟ್ಟಳು. ಕುಂಬಳೆಯ ಬಾಡಿಗೆ ಕಟ್ಟಡವೊಂದರಲ್ಲಿ ವಾಸಿಸುವ  ಶೋಭಲತಾ (37) ಎಂಬಾಕೆ ಸಾವಿಗೀಡಾದ ಯುವತಿ.  ಕಳೆದ ಆದಿತ್ಯವಾರ ಶೋಭಲತ ವಾಸಸ್ಥಳದಲ್ಲಿ ಕೈಯ ನರ ಕತ್ತರಿಸಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು ಗಂಭೀರ ಸ್ಥಿತಿಯಲ್ಲಿದ್ದ ಆಕೆಯನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಚಿಕಿತ್ಸೆ ಮಧ್ಯೆ ನಿನ್ನೆ ಸಾವು ಸಂಭವಿಸಿದೆ. ಘಟನೆ ಕುರಿತು ಕುಂಬಳೆ  ಪೊಲೀಸರು ತನಿಖೆ ಆರಂಭಿಸಿರುವುದಾಗಿ ಇನ್ಸ್‌ಪೆಕ್ಟರ್ ತಿಳಿಸಿದ್ದಾರೆ.

ಜೆಸಿಬಿ ಆಪರೇಟರ್ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ನೀರ್ಚಾಲು:  ಜೆಸಿಬಿ ಆಪರೇಟರ್ ಬಾಡಿಗೆ ಮನೆಯೊಳಗೆ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕರ್ನಾಟಕದ ಸುಳ್ಯ ಪೆರಾಜೆ ನಿಧಿಮಲೆ ನಿವಾಸಿಯಾದ ಟಿ.ಎನ್. ಕುಮಾರ್ (26) ಸಾವಿಗೀಡಾದ ವ್ಯಕ್ತಿ. ಪಾಡ್ಲಡ್ಕ ನಿಡುಗಳದಲ್ಲಿರುವ ಮನೆಯಲ್ಲಿ  ಇವರು ನೇಣುಬಿಗಿದು ಸಾವಿಗೀಡಾಗಿದ್ದಾರೆ. ನಿನ್ನೆ ಸಂಜೆ ಕೆಲಸ ಮುಗಿಸಿ ವಾಸಸ್ಥಳಕ್ಕೆ ತಲುಪಿದ್ದರೆನ್ನಲಾಗಿದೆ. ಅನಂತರ  ಓರ್ವ ಸ್ನೇಹಿತ ಫೋನ್ ಕರೆ ಮಾಡಿದರೂ  ಪ್ರತಿಕ್ರಿಯೆ ಬರಲಿಲ್ಲ. ಹಲವು ಬಾರಿ ಕರೆ ಮಾಡಿದರೂ ಫೋನ್ ಎತ್ತದಿರುವುದರಿಂದ ಸಂಶಯಗೊಂಡು ಸ್ನೇಹಿತ  ಮನೆಗೆ ತೆರಳಿ ನೋಡಿದಾಗ ಅಡುಗೆ ಕೋಣೆಯೊಳಗೆ ಸಾವಿಗೀಡಾದ ಸ್ಥಿತಿಯಲ್ಲಿ ಕುಮಾರ್ …

ಸ್ಕೂಟರ್‌ನಲ್ಲಿ ಸಂಚರಿಸುತ್ತಿದ್ದ ವ್ಯಾಪಾರಿಗೆ ಕಣಜದ ಹುಳುಗಳ ದಾಳಿ: ಅಗ್ನಿಶಾಮಕ ದಳದಿಂದ ರಕ್ಷಣೆ

ಉಪ್ಪಳ: ಸ್ಕೂಟರ್‌ನಲ್ಲಿ ಪ್ರಯಾಣಿಸುತ್ತಿದ್ದ ವ್ಯಾಪಾರಿಗೆ ಕಣಜದ ಹುಳಗಳು ದಾಳಿ ನಡೆಸಿದ ಘಟನೆ ನಡೆದಿದೆ. ಉಪ್ಪಳ ಸೋಂಕಾಲು ಕೊಡಂಗೆ ನಿವಾಸಿ ಅಬ್ಬಾಸ್ (39) ಎಂಬವರು ಕಣಜದ ಹುಳಗಳ ದಾಳಿಯಿಂದ ಗಾಯಗೊಂಡಿದ್ದಾರೆ. ಅಂಬಾರ್‌ನಲ್ಲಿ ಜೀನಸು ಅಂಗಡಿ ನಡೆಸುತ್ತಿರುವ ಅಬ್ಬಾಸ್ ನಿನ್ನೆ ಸಂಜೆ 5.30ರ ವೇಳೆ ಅಂಗಡಿಯಿಂದ ಕೊಡಂಗೆಯಲ್ಲಿರುವ ಮನೆಗೆ ಹೋಗುತ್ತಿದ್ದ ವೇಳೆ ಘಟನೆ ನಡೆದಿದೆ. ಸ್ಕೂಟರ್ ಸೋಂಕಾಲ್‌ಗೆ ತಲುಪಿದಾಗ ಎಲ್ಲಿಂದಲೋ ಹಾರಿ ಬಂದ ಕಣಜದ ಹುಳುಗಳು ಮುತ್ತಿಗೆ ಹಾಕಿ ಕಡಿದಿವೆ ಎಂದು ಅಬ್ಬಾಸ್ ತಿಳಿಸಿದ್ದಾರೆ.  ಕಣಜದ ಹುಳುಗಳ ದಾಳಿ ಬಗ್ಗೆ …

13.394 ಗ್ರಾಂ ಮಾದಕವಸ್ತು ವಶ: ಕರ್ನಾಟಕ ನಿವಾಸಿ ಸೆರೆ

ಮಂಜೇಶ್ವರ: ಮಂಜೇಶ್ವರ ರೈಲು ನಿಲ್ದಾಣ ರಸ್ತೆ ಬಳಿ ಕಾಸರಗೋಡು ಎಕ್ಸೈಸ್ ಎನ್‌ಫೋರ್ಸ್‌ಮೆಂಟ್ ಆಂಡ್ ನರ್ಕೋಟಿಕ್ಸ್ ಸ್ಕ್ವಾಡ್‌ನ ಎಕ್ಸೈಸ್ ಇನ್ಸ್‌ಪೆಕ್ಟರ್ ಜೋಸೆಫ್ ಜೆ.ರ ನೇತೃತ್ವದ ಅಬಕಾರಿ ತಂಡ ನಿನ್ನೆ ನಡೆಸಿದ ಕ್ಷಿಪ್ರ ಕಾರ್ಯಾಚರಣೆಯಲ್ಲಿ ಮಾದಕ ವಸ್ತುವಾದ 13.394 ಗ್ರಾಂ ಮೆಥಾಫಿಟಮಿನ್ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿ ಮಂಗಳೂರು ತಾಲೂಕಿನ ಕೆ.ಸಿ. ರೋಡ್ ಪಿಲಿಕ್ಕೂರ್ ನಿವಾಸಿ ಹಾಗೂ ಹಾಗೂ ಮಂಜೇಶ್ವರ ರೈಲು ನಿಲ್ದಾಣ ಪರಿಸರದ ಬಾಡಿಗೆ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿರುವ ಇಸ್ಮಾಯಿಲ್ ಬಿ.ಎಂ. (37) ಎಂಬಾತನನ್ನು ಬಂಧಿಸಿ ಎನ್‌ಡಿಪಿಎಸ್ ಕಾನೂನಿನ ಪ್ರಕಾರ …

ರಾ. ಹೆದ್ದಾರಿ ನಿರ್ಮಾಣ ವೇಳೆ ಮಣ್ಣು ಕುಸಿದು ಕಾರ್ಮಿಕ ಮೃತ್ಯು: ಇಬ್ಬರಿಗೆ ಗಂಭೀರ

ಕಾಸರಗೋಡು: ರಾಷ್ಟ್ರೀಯ ಹೆದ್ದಾರಿಯ ನಿರ್ಮಾಣ ಕೆಲಸದ ವೇಳೆ ಗುಡ್ಡೆ ಬದಿಯ ಮಣ್ಣು ಕುಸಿದು ಬಿದ್ದು ವಲಸೆ ಕಾರ್ಮಿಕನಾದ ಯುವಕ ಸಾವನ್ನಪ್ಪಿ, ಇಬ್ಬರು ಗಂಭೀರ ಗಾಯಗೊಂಡ ದಾರುಣ ಘಟನೆ ಚೆರುವತ್ತೂರು ಮಟ್ಟಲಾಯಿಯಲ್ಲಿ ನಡೆದಿದೆ. ಪಶ್ಚಿಮ ಬಂಗಾಳದ ಕೊಲ್ಕತ್ತ ಮೋತ್ತಿನ ಗ್ರಾಮ ನಿವಾಸಿ ಮುನ್‌ತಾಜ್ ಮಿರ್ (18) ಸಾವನ್ನಪ್ಪಿದ ದುರ್ದೈವಿ ಯುವಕ. ಈತನ ಜೊತೆಗೆ ಆತನ ಗ್ರಾಮದವರೇ ಆಗಿರುವ ಮುನ್ನಾಲ್ ಲಾಸ್ಕರ್ (38) ಮತ್ತು ಮೋಹನ್ ತೇಜಾರ್ (18) ಎಂ ಬವರು ಗಂಭೀರ ಗಾಯಗೊಂಡಿದ್ದು, ಅವರನ್ನು ಪರಿಯಾರಂನಲ್ಲಿರುವ ಕಣ್ಣೂರು ಸರಕಾರಿ …

ಅಸೌಖ್ಯ ಬಾಧಿಸಿ ಚಿಕಿತ್ಸೆಯಲ್ಲಿದ್ದ ಬಾಲಕ ಮೃತ್ಯು

ಬದಿಯಡ್ಕ: ತೀವ್ರ ಅಸೌಖ್ಯ ಬಾಧಿಸಿ ಚಿಕಿತ್ಸೆಯಲ್ಲಿದ್ದ ಬಾಲಕನ ಜೀವ ರಕ್ಷಿಸಲು ನಡೆಸಿದ ಪ್ರಯತ್ನಗಳೆಲ್ಲಾ ವಿಫಲಗೊಂಡಿತು. ಪೈಕ ಚೆಂಬಡವಳಪ್ಪ್ ನಿವಾಸಿ ಗಣೇಶನ್- ಪ್ರಿಯಾ ದಂಪತಿಯ ಪುತ್ರ ಅಭಿನವ್ (9) ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ನಿನ್ನೆ ಮೃತಪಟ್ಟನು. ತೀವ್ರ ಅಸೌಖ್ಯ ಬಾಧಿಸಿದ್ದ ಈತನಿಗೆ ಮಂಗಳೂರು, ತಲಶ್ಶೇರಿ ಎಂಬೆಡೆಗಳ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗಿತ್ತು. ಅಭಿನವ್‌ಗೆ ಅಗತ್ಯದ ಚಿಕಿತ್ಸೆ ನೀಡಿ ರೋಗ ಗುಣಪಡಿಸಲು ಹಲವರು ಸಹಾಯವೊದಗಿಸಿದ್ದಾರೆ. ಆದರೆ ಚಿಕಿತ್ಸೆಗಳೆಲ್ಲಾ ಫಲಕಾರಿಯಾಗದೆ ಬಾಲಕ ಮೃತಪಟ್ಟ ದಾರುಣ ಘಟನೆಯಿಂದ ಕುಟುಂಬ ಹಾಗೂ ನಾಡಿನಲ್ಲಿ ಶೋಕಸಾಗರ ಸೃಷ್ಟಿಸಿದೆ. …

ಗಾಂಜಾ ಸಹಿತ ಅಸ್ಸಾಂ ನಿವಾಸಿ ಸೆರೆ

ಕುಂಬಳೆ: 45 ಗ್ರಾಂ ಗಾಂಜಾ ಸಹಿತ ಓರ್ವನನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ. ಅಸ್ಸಾಂ ನಿವಾಸಿ ರೂಹುಲ್ ಅಮೀನ್ (48) ಎಂಬಾತ ಬಂಧಿತ ಆರೋಪಿಯಾಗಿದ್ದಾನೆ. ನಿನ್ನೆ ರಾತ್ರಿ 7.30ರ ವೇಳೆ ಕುಂಬಳೆ ಎಸ್‌ಐ ಗಣೇಶನ್ ನೇತೃತ್ವದ ಪೊಲೀಸರು ಅನಂತಪುರದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಗಾಂಜಾ ಪತ್ತೆಯಾಗಿದೆ.

ಪ್ರಧಾನಮಂತ್ರಿ ಕಚೇರಿ ಹೆಸರಲ್ಲಿ ಯುದ್ದವಾಹಿನಿ ಹಡಗಿನ ಲೊಕೇಶನ್ ಕೇಳಿದ  ವ್ಯಕ್ತ್ತಿ ಸೆರೆ

ಕೊಚ್ಚಿ: ಭಾರತ-ಪಾಕಿಸ್ತಾನ ನಡುವೆ ಘರ್ಷಣೆ ನಡೆಯುತ್ತಿದ್ದ ವೇಳೆ  ಪ್ರಧಾನ ಮಂತ್ರಿ ಕಚೇರಿಯ ಹೆಸರಲ್ಲಿ  ಕೊಚ್ಚಿಯಲ್ಲಿರುವ ದಕ್ಷಿಣ ಭಾರತ ನೌಕಾಪಡೆ ಕಚೇರಿಗೆ  ಫೋನಾಯಿಸಿ ಯುದ್ಧವಾಹಿನಿ ಹಡಗು ಆಗಿರುವ ಐಎನ್‌ಎಸ್ ವಿಕ್ರಾಂತ್‌ನ ಲೊಕೇಶನ್ ತಿಳಿಸುವಂತೆ ಹೇಳಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಕಲ್ಲಿಕೋಟೆ ವಡಕ್ಕಾವು ವಾಲತ್ತೂರು ನಿವಾಸಿ ಮುಜೀಬ್ ರೆಹ್ಮಾನ್ (34) ಬಂಧಿತ ವ್ಯಕ್ತಿ.  ಈತ ತನ್ನ ಹೆಸರನ್ನು  ಮರೆಮಾಚಿ ರಾಘವನ್ ಎಂಬ ಹೆಸರಲ್ಲಿ  ಕೊಚ್ಚಿಯಲ್ಲಿರುವ ನೌಕಾ ಪಡೆಯ ಕಚೇರಿಗೆ ಫೋನ್ ಮಾಡಿದ್ದನು. ಇದರಿಂದ ಶಂಕೆಗೊಂಡು ನೌಕಾ ಪಡೆಯ ಅಧಿಕಾರಿ ತಕ್ಷಣ …