ಮುನಂಬಂ ನ್ಯಾಯಾಂಗ ಆಯೋಗವನ್ನು ರದ್ದುಪಡಿಸಿದ ತೀರ್ಪಿಗೆ ಹೈಕೋರ್ಟ್‌ನ ವಿಭಾಗೀಯ ಪೀಠ ತಡೆಯಾಜ್ಞೆ

ಕೊಚ್ಚಿ: ಮುನಂಬಂ ನ್ಯಾಯಾಂಗ ಆಯೋಗವನ್ನು ರದ್ದುಪಡಿಸಿ ಹೈಕೋರ್ಟ್‌ನ ನ್ಯಾಯಮೂರ್ತಿ ಸಿ.ಎನ್ ರಾಮಚಂದ್ರನ್‌ರ ಏಕಸದಸ್ಯ ಪೀಠ ನೀಡಿದ ತೀರ್ಪಿಗೆ ಹೈಕೋ ರ್ಟ್‌ನ ವಿಭಾಗೀಯ ಪೀಠ ಇಂದು ಬೆಳಿಗ್ಗೆ ತಡೆಯಾಜ್ಞೆ ಹೊರಡಿಸಿದೆ. ಮುಖ್ಯ ನ್ಯಾಯಮೂರ್ತಿ ನಿತಿನ್ ಜಾಮ್ದಾರ್ ಮತ್ತು ನ್ಯಾಯಮೂರ್ತಿ ಎಸ್. ಮನು ಎಂಬವರನ್ನೊಳಗೊಂಡ ಹೈಕೋರ್ಟ್‌ನ ವಿಭಾಗೀಯ ಪೀಠ ಈ ತಡೆಯಾಜ್ಞೆ ಜ್ಯಾರಿಗೊಳಿಸಿದೆ. ಮುನಂಬಂ ಗ್ರಾಮದಲ್ಲಿ ಸುಮಾರು 600ರಷ್ಟು ಕುಟುಂಬಗಳು ವಾಸಿಸುತ್ತಿ ರುವ ಪ್ರದೇಶ ತಮಗೆ ಸೇರಿದ್ದಾಗಿದೆ ಎಂದು ವಕ್ಫ್‌ನ ಕೇರಳ ಘಟಕ ಹಕ್ಕು ವಾದ ಮಂಡಿಸಿರುವುದನ್ನು ಪ್ರತಿಭಟಿಸಿ ಆ …

ಸಾರಾಯಿ, ಗಾಂಜಾ ಮತ್ತು ಕಳ್ಳಭಟ್ಟಿ ವಶ

ಕಾಸರಗೋಡು: ಅಬಕಾರಿ ತಂಡ ನಿನ್ನೆ ಜಿಲ್ಲೆಯ ಮೂರೆಡೆಗಳಲ್ಲಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ಕರ್ನಾಟಕ ನಿರ್ಮಿತ ಮದ್ಯ, ಹುಳಿರಸ (ವಾಶ್) ಮತ್ತು ಗಾಂಜಾ ವಶಪಡಿಸಿಕೊಂಡಿದೆ. ಇದರಂತೆ ನೀಲೇಶ್ವರ ರೇಂಜ್ ಎಕ್ಸೈಸ್ ಇನ್ಸ್‌ಪೆಕ್ಟರ್ ಎನ್. ವೈಶಾಖ್ ನೇತೃತ್ವದ ತಂಡ ವೆಳ್ಳರಿಕುಂಡ್ ಪಾಲಾವಯಲ್‌ನ ಮಯ್ಯಲ್‌ನಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ 20 ಗ್ರಾಂ ಗಾಂಜಾ ವಶಪಡಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿ ಪಾಲಾವಯಲ್ ಮಯ್ಯಾಲ್ ವಲಿಯವೀಟಿಲ್‌ನ ಜಿಷ್ಣು ವಿ. (26) ಎಂಬಾತನನ್ನು ಬಂಧಿಸಿ, ಆತನ ವಿರುದ್ಧ ಕೇಸು ದಾಖಲಿಸಲಾಗಿದೆ. ಈ ಕಾರ್ಯಾಚರಣೆ ನಡೆಸಿದ ಅಬಕಾರಿ ತಂಡದಲ್ಲಿ ಸಿವಿಲ್ ಎಕ್ಸೈಸ್ …

ಎಂ.ಎ. ಬೇಬಿಗೆ ಸಿಪಿಎಂನ ಸಾರಥ್ಯ: ಇಎಂಎಸ್ ಬಳಿಕ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೇರಿದ 2ನೇ ಕೇರಳೀಯ

ಮಧುರೈ: ಸಿಪಿಎಂನ ಹೊಸ ಪ್ರಧಾನ ಕಾರ್ಯದರ್ಶಿಯಾಗಿ ಪಕ್ಷದ ಪೋಲಿಟ್ ಬ್ಯೂರೋ (ಪಿಬಿ) ಸದಸ್ಯ ಕೇರಳದ ಎಂ.ಎ. ಬೇಬಿ (71)ರನ್ನು ಆರಿಸಲಾಗಿದೆ. ಕೇರಳದ ಮಾಜಿ ಮುಖ್ಯಮಂತ್ರಿ ಇಎಂಎಸ್ ನಂಬೂದಿರಿ ಪ್ಪಾಡ್‌ರ ಬಳಿಕ ಈ ಸ್ಥಾನಕ್ಕೇರಿದ ಎರಡನೇ ಕೇರಳೀಯ ಎಂಬ ಹೆಗ್ಗಳಿ ಕೆಗೂ ಎಂ.ಎ. ಬೇಬಿ ಪಾತ್ರರಾಗಿದ್ದಾರೆ. ಈ ಹಿಂದೆ ಸಿಪಿಎಂ ಪ್ರಧಾನ ಕಾರ್ಯದರ್ಶಿಯಾಗಿದ್ದ ಪ್ರಕಾಶ್ ಕಾರಾಟ್‌ರ ಮಾತೃಭಾಷೆ ಮಲೆಯಾಳ ಆಗಿದ್ದರೂ ಅವರು ಉತ್ತರ ಭಾರತದಲ್ಲೇ ನೆಲೆಸಿದ್ದರು. ಮಧುರೈಯಲ್ಲಿ ನಡೆದ ಸಿಪಿಎಂನ 24ನೇ ಪಾರ್ಟಿ ಕಾಂಗ್ರೆಸ್ (ಮಹಾ ಅಧಿವೇಶನ)ನಲ್ಲಿ ಎಂ.ಎ. …

ಬೈಕ್-ಸ್ಕೂಟರ್ ಢಿಕ್ಕಿ ಹೊಡೆದು ಯುವಕನಿಗೆ ಗಂಭೀರ ಗಾಯ

ಕುಂಬಳೆ-ಸೀತಾಂಗೋಳಿ ಮಧ್ಯೆ ಪುನರಾವರ್ತಿಸುತ್ತಿರುವವಾಹನ ಅಪಘಾತಗಳು ಕುಂಬಳೆ: ನಾಯ್ಕಾಪಿನಲ್ಲಿ ಸ್ಕೂಟರ್ ಹಾಗೂ ಬೈಕ್ ಢಿಕ್ಕಿ ಹೊಡೆದು ಯುವಕ ಗಂಭೀರ ಗಾಯಗೊಂಡ ಘಟನೆ ನಡೆದಿದೆ. ಕೊಡ್ಯಮ್ಮೆ ಮುಂಡಪ್ಪಳ್ಳದ ರಾಕೇಶ್ (22) ಎಂಬವರು ಗಾಯಗೊಂ ಡಿದ್ದು, ಇವರನ್ನು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಮೊನ್ನೆ ರಾತ್ರಿ 9 ಗಂಟೆ ವೇಳೆ ಅಪಘಾತ ಸಂಭವಿಸಿದೆ. ರಾಕೇಶ್ ಸಂಚರಿಸುತ್ತಿದ್ದ ಬೈಕ್ ಹಾಗೂ ಎದುರು ಭಾಗದಿಂದ ಬರುತ್ತಿದ್ದ ಸ್ಕೂಟರ್ ಪರಸ್ಪರ ಢಿಕ್ಕಿ ಹೊಡೆದು ಅಪಘಾತವುಂಟಾಗಿದೆ. ಸ್ಕೂಟರ್ ಸವಾರ ಸಣ್ಣಪುಟ್ಟ ಗಾಯಗೊಂಡಿದ್ದಾನೆ. ಇದೇ ವೇಳೆ ಕುಂಬಳೆ …

ವ್ಯಕ್ತಿ ಸ್ಮಶಾನದಲ್ಲಿ  ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಹೊಸದುರ್ಗ: ವ್ಯಕ್ತಿಯೊಬ್ಬರು ಸ್ಮಶಾನದಲ್ಲಿ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಚೆರುವತ್ತೂರು ಕೈದಕ್ಕಾಡ್‌ತಕ್ ನಗರದ ಕೆ.ಎಂ.ಸಿ. ಶಾಹುಲ್ ಹಮೀದ್ (60) ಮೃತವ್ಯಕ್ತಿ. ಕೈದಕ್ಕಾಡ್ ಅಯ್ಯಂಗಾಳಿ ಸ್ಮಾರಕ ಕಮ್ಯೂನಿಟಿ ಹಾಲ್ ಸಮೀಪ ಸ್ಮಶಾನದಲ್ಲಿರುವ ಮರದಲ್ಲಿ ಇವರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸಹೋದರಿಯೊಂ ದಿಗೆ ವಾಸಿಸುತ್ತಿದ್ದ ಇವರು ಶುಕ್ರವಾರ ಮಧ್ಯಾಹ್ನ ಮನೆಯಿಂದ ಹೊರಗೆ ತೆರಳಿದ್ದು ಬಳಿಕ ಮರಳಿ ಬಂದಿರಲಿಲ್ಲವೆನ್ನಲಾಗಿದೆ. ಸಾವಿನ ಬಗ್ಗೆ ಸಂಬಂಧಿಕರು ಹಾಗೂ ನಾಗರಿಕರು ಸಂಶಯ ವ್ಯಕ್ತಪಡಿಸಿದುದರಿಂದ ಮೃತದೇಹವನ್ನು ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಮೃತರು ಮಕ್ಕಳಾದ …

ಸುಡುಮದ್ದು ಪ್ರದರ್ಶನ:  ಕೇಸು ದಾಖಲು

ಕಾಸರಗೋಡು: ಅನುಮತಿಯಿಲ್ಲದೆ ಸುಡುಮದ್ದು ಪ್ರದರ್ಶನ ನಡೆಸಿದುದರಿಂದ ಮಧೂರು ಕ್ಷೇತ್ರ ಉತ್ಸವ ಸಮಿತಿ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ವಿದ್ಯಾನಗರ ಪೊಲೀಸ್ ಇನ್‌ಸ್ಪೆಕ್ಟರ್ ಯು.ಪಿ.ವಿಪಿನ್ ನೇರವಾಗಿ ಕೇಸು ದಾಖಲಿಸಿದ್ದಾರೆ. ಎಪ್ರಿಲ್ 5ರಂದು ರಾತ್ರಿ 11.30ರ ವೇಳೆ ಮಧೂರು ಶ್ರೀ ಮದನಂತೇಶ್ವರ ಸಿದ್ದಿವಿನಾಯಕ ಕ್ಷೇತ್ರದ 150 ಮೀಟರ್ ಪಶ್ಚಿಮ ಭಾಗದಲ್ಲಿರುವ ಗದ್ದೆಯಲ್ಲಿ ಸುಡುಮದ್ದು ಪ್ರದರ್ಶನ ನಡೆಸಿರುವುದಾಗಿ ಪೊಲೀಸರು ದಾಖಲಿಸಿಕೊಂಡ ಪ್ರಕರಣದಲ್ಲಿ ತಿಳಿಸಲಾಗಿದೆ.

ಗಾಂಜಾ ಪ್ರಕರಣ: ಆರೋಪಿಗೆ 1 ವರ್ಷ ಸಜೆ, ಜುಲ್ಮಾನೆ

ಕಾಸರಗೋಡು: ಸ್ಕೂಟರ್‌ನಲ್ಲಿ ಸಾಗಿಸುತ್ತಿದ್ದ ಗಾಂಜಾ ವಶಪಡಿಸಿದ ಪ್ರಕರಣಕ್ಕೆ ಸಂಬಂಧಿಸಿ ಅದರ ಆರೋಪಿಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ (ದ್ವಿತೀಯ)ದ ನ್ಯಾಯಾಧೀಶರಾದ ಪ್ರಿಯಾ ಕೆ. ಅವರು 1 ವರ್ಷ ಕಠಿಣ ಸಜೆ ಹಾಗೂ 25,೦೦೦ ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದ್ದಾರೆ. ಕಲ್ಲಿಕೋಟೆ ರಾರೋತ್ ತಾಮರಶ್ಶೇರಿ ನಿವಾಸಿ ಮಾನವ್ ಪಿ. (24) ಎಂಬಾತನಿಗೆ ಈ ಶಿಕ್ಷೆ ವಿಧಿಸಲಾಗಿದೆ. 2೦೦೦ ಜುಲೈ 1೦ರಂದು ಬೆಳಿಗ್ಗೆ ಕೋಟಿಕುಳಂ ಎಂಬಲ್ಲಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಆ ದಾರಿಯಾಗಿ ಬಂದ ರಿಜಿಸ್ಟ್ರೇಷನ್ …

ಕುಂಬಳೆಯಲ್ಲಿ ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾದ ವ್ಯಕ್ತಿ ಗುಣಮುಖರಾಗಿ ಸಹೋದರರೊಂದಿಗೆ ಊರಿಗೆ

ಕುಂಬಳೆ: ಕುಂಬಳೆ ರೈಲ್ವೇ ನಿಲ್ದಾಣದಲ್ಲಿ ತೀವ್ರ ಅಸ್ವಸ್ಥ ಸ್ಥಿತಿಯಲ್ಲಿದ್ದ ವ್ಯಕ್ತಿಗೆ ಆಟೋಚಾಲಕರು ಸಕಾಲಿಕವಾಗಿ ಚಿಕಿತ್ಸೆ ಸಹಿತ ನೆರವು ಒದಗಿಸಿದ ಫಲವಾಗಿ ವ್ಯಕ್ತಿ ಇದೀಗ ಅವರ ಸಂಬಂಧಿಕರನ್ನು ಸೇರಲು ಸಾಧ್ಯವಾಯಿತು. ಕರ್ನಾಟಕದ ಗುಂಡ್ಲುಪೇಟೆ ಹುಸೈನ್ ನಗರದ ಅಲ್ತಾಫ್ ಎಂಬವರು ಸುರಕ್ಷಿತವಾಗಿ ಅವರು ಸಹೋದರರೊಂದಿಗೆ ಊರಿಗೆ ತೆರಳಿದ್ದಾರೆ. ಮಾರ್ಚ್ ತಿಂಗಳ ಮೊದಲ ವಾರ ಅಲ್ತಾಫ್ ಕುಂಬಳೆ ರೈಲ್ವೇ ನಿಲ್ದಾಣಕ್ಕೆ ತಲುಪಿದ್ದರು. ಮಾರ್ಚ್ ೨೨ರಂದು ರೈಲ್ವೇ ನಿಲ್ದಾಣದಲ್ಲಿ ನಡೆದು ಹೋಗುತ್ತಿದ್ದಾಗ ಅಲ್ತಾಫ್ ಬಿದ್ದು ಗಾಯಗೊಂಡಿದ್ದರೆನ್ನಲಾಗಿದೆ. ಇದರಿಂದ ನಡೆದಾಡಲು ಭಾರೀ ಸಮಸ್ಯೆ ಎದುರಿಸಬೇಕಾಗಿ …

ಐತಿಹಾಸಿಕ ಮೂಡಪ್ಪ ಸೇವೆಯಿಂದ ಭಕ್ತಸಾಗರ ಪುನೀತ

ಮಧೂರು: ಹಲವು ವರ್ಷಗಳ ಕಾಯುವಿಕೆಯನ್ನು ಸಾರ್ಥಕಗೊಳಿಸಿ ಮಧೂರು ಬೊಡ್ಡಜ್ಜನಿಗೆ ನಡೆದ ಮೂಡಪ್ಪ ಸೇವೆ ಪುನೀತವಾಯಿತು. ಈ ಪುಣ್ಯ ಕ್ಷಣಗಳನ್ನು ಕಣ್ತುಂಬಿಸಿಕೊಳ್ಳಲು ಲಕ್ಷಾಂತರ ಮಂದಿ ನಿನ್ನೆ ಮಧೂರಿಗೆ ತಲುಪಿದ್ದು, ಮಳೆ ನೀರಿನಂತೆ ಜನಸಾಗರ ಕಂಡು ಬಂದಿದೆ. ಬ್ರಹ್ಮಕಲಶದ ಬಳಿಕ ಮಳೆ ಸುರಿದು ಭೂಮಂಡಲವನ್ನು ನೆನೆಸಿ ಶುದ್ಧಗೊಳಿಸುವ ಪ್ರಕ್ರಿಯೆ ಸಾಮಾನ್ಯ ನಡೆಯುವುದಾಗಿದ್ದು, ಮಧೂರಿ ನಲ್ಲೂ ಇದಕ್ಕಿಂತ ಭಿನ್ನವಾಗಿಲ್ಲ. ಆದರೆ ಸುರಿದ ಮಳೆಗೆ ಅಲ್ಪ ಸ್ವಲ್ಪ ಸಮಸ್ಯೆಗಳು ಕಂಡು ಬಂದರೂ ಇದ್ಯಾವುದೂ ಭಕ್ತಜನಕೋಟಿಗೆ ತೊಡಕಾಗಿಲ್ಲ. ದಕ್ಷಿಣ ಭಾರತ ಮಹಾಕುಂಭಮೇಳವೆಂದು ಕೊಂಡಾಡಲ್ಪಟ್ಟ ಮೂಡಪ್ಪ …

ನಿಧನ: ಮಂಗಲ್ಪಾಡಿ ಸೇವಾಭಾರತಿ ಕಾರ್ಯಕರ್ತರಿಂದ ಅಂತ್ಯಸಂಸ್ಕಾರ

ಉಪ್ಪಳ: ದೈಗೋಳಿ ಸಾಯಿ ನಿಕೇತನ ಸೇವಾಶ್ರಮದಲ್ಲಿ ನಿಧನರಾದ ವಾರೀಸುದಾರರಿಲ್ಲದ ಮೃತದೇಹಕ್ಕೆ ಮಂಗಲ್ಪಾಡಿ ಸೇವಾಭಾರತಿ ಕಾರ್ಯಕರ್ತರು ಅಂತ್ಯಸAಸ್ಕಾರ ನಡೆಸಿದರು. ನೀಲಾ ನಾಯಕ್ ಲಮಾಣಿ [60] ಎಂಬವರು ನಿಧನಹೊಂದಿದ್ದರು. ಕಳೆದ 10 ದಿನಗಳ ಹಿಂದೆ ವರ್ಕಾಡಿ ಸುಂಕದಕಟ್ಟೆ ಬಸ್ ತಂಗುದಾಣ ಪರಿಸರದಲ್ಲಿ ಈ ವ್ಯಕ್ತಿ ಅಸೌಖ್ಯದಿಂದ ಪತ್ತೆಯಾಗಿದ್ದು, ಊರವರು ನೀಡಿದ ಮಾಹಿತಿಯಂತೆ ಆಶ್ರಮದ ಸಿಬ್ಬಂದಿ ತಲುಪಿ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿ ನಾಲ್ಕು ದಿನಗಳ ಬಳಿಕ ಆಶ್ರಮಕ್ಕೆ ಕರೆತಂದಿದ್ದು, ಆಶ್ರಮದಲ್ಲಿ ವೈದ್ಯರ ಆರೈಕೆಯಲ್ಲಿದ್ದರು. ಆದರೆ ಶನಿವಾರ ಬೆಳಿಗ್ಗೆ ನಿಧನ ಹೂಂದಿದ್ದಾರೆ. …